ETV Bharat / sitara

'ಕಾವೇರಿ ಕೂಗು' ಹಾಡಿಗೆ ಧ್ವನಿಯಾದ ಪುನೀತ್​​​ ರಾಜ್‍ಕುಮಾರ್​​

author img

By

Published : Aug 27, 2019, 8:24 PM IST

ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಗಳಲ್ಲಿ 'ಕಾವೇರಿ ಕೂಗು' ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸೆಪ್ಟೆಂಬರ್ 8ರಂದು ಈ ಅಭಿಯಾನ ಆರಂಭವಾಗುತ್ತಿದ್ದು, ನಟ ಪುನೀತ್ ರಾಜ್​ಕುಮಾರ್ ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಹಾಡೊಂದನ್ನು ಹಾಡಿದ್ದಾರೆ. ಸದ್ಗುರು ವಾಸುದೇವ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಪುನೀತ್ ರಾಜ್‍ಕುಮಾರ್

ಇಶಾ ಫೌಂಡೇಶನ್ ಸಂಸ್ಥೆಯ 'ಕಾವೇರಿ ಕೂಗು' ಅಭಿಯಾನಕ್ಕೆ ಸೆಪ್ಟೆಂಬರ್ 8ರಿಂದ ಚಾಲನೆ ದೊರೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮೈಸೂರಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಈ ಅಭಿಯಾನಕ್ಕೆ ಈಗಾಗಲೇ ಕರ್ನಾಟಕ, ತಮಿಳುನಾಡು ಎರಡೂ ಕಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನು ಕರ್ನಾಟಕದಲ್ಲಿ ನಟರಾದ ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಯಶ್, ಪುನೀತ್ ರಾಜ್​ಕುಮಾರ್ ಹಾಗೂ ಇನ್ನಿತರರು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ವಿಶೇಷ ಎಂದರೆ ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಡೊಂದನ್ನು ಕೂಡಾ ಹಾಡಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಹಾಡಿನ ಸಾಹಿತ್ಯವನ್ನು ಅದ್ಭುತವಾಗಿ ರಚಿಸಿದ್ದಾರೆ. ಈ ಪದಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಧ್ವನಿಯಾಗುವ ಮೂಲಕ ಈ ವಿಶೇಷ ಹಾಡನ್ನು ಹಾಡಿದ್ದಾರೆ. ಸದ್ಯಕ್ಕೆ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

'ಕಾವೇರಿ ತಾಯಿ ನಿನ್ನ ಮಡಿಲ ಮಗು ನಾನು, ಹಾಲು ಕೊಟ್ಟ ನಿನ್ನ ಕಡಿದುಬಿಟ್ಟೆನು ನಾನು, ನನ್ನ ಬಾಳಿಗೂ ಮುಕ್ತಿಗೂ ಮಾರ್ಗವು ನೀನು. ನಿನ್ನ ಮಡಿಲಲ್ಲಿ ಬೆಳೆದವನು ನಾನು. ಹೀಗೆ ಸಾಗುವ ಹಾಡನ್ನು ಪುನೀತ್‌ ಅದ್ಭುತವಾಗಿ ಹಾಡಿದ್ದಾರೆ. 'ಕಾವೇರಿ ಕೂಗು' ಅಭಿಯಾನಕ್ಕಾಗಿ ನಾನು ಹಾಡಿದ್ದೇನೆ. ಕಾವೇರಿಯನ್ನು ಉಳಿಸಿಕೊಳ್ಳಲು ನಮ್ಮ ಕೈಲಾದದ್ದನ್ನು ಮಾಡೋಣ' ಎಂದು ಪುನೀತ್‌ ಟ್ವೀಟ್‌ ಮಾಡಿದ್ದಾರೆ.

Intro:ಕಾವೇರಿ ಕೂಗಿಗೆ ಧ್ವನಿಯಾದ ಪುನೀತ್ ರಾಜ್‍ಕುಮಾರ್!!


ಸದ್ಗುರು ಜಗ್ಗಿ ವಾಸುದೇವ್‌ ರವ್ರ, ಇಶಾ ಫೌಂಡೇಶನ್‌ ನಡೆಸಿರುವ ಕಾವೇರಿ ಕಾಲಿಂಗ್‌ ಅಭಿಯಾನಯಕ್ಕೆ ಇಡೀ ಸೌತ್ ಇಂಡಿಯಾ ಸಪೋರ್ಟ್ ಮಾಡುತ್ತಿದೆ..ಈ ಅಭಿಯಾನಕ್ಕೆ ಗಣ್ಯರಿಂದ ಹಿಡಿದು ದೊಡ್ಡ ದೊಡ್ಡ ಸಿನಿಮಾ ಸೆಲೆಬ್ರಿಟಿಗಳು ಈ ಅಭಿಯಾನಕ್ಕೆ ಕೈ ಜೋಡಿಸುತ್ತೊದ್ದಾರೆ.‌ಇದೀಗ ಸದ್ಗುರು ಜಗ್ಗಿ ವಾಸುದೇವ್ ರವ್ರ ಕಾವೇರಿಗಾಗಿ, ತಾಯಿಗೆ ಹೋಲಿಸಿ ಬಹಳ ಅದ್ಭುತವಾಗಿ ಸಾಹಿತ್ಯವನ್ನ ಬರೆದಿದ್ದಾರೆ..ಈ ಪದಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಧ್ವನಿಯಾಗುವ ಮೂಲಕ, ಈ ವಿಶೇಷ ಹಾಡನ್ನ ಹಾಡಿದ್ದಾರೆ..ಸದ್ಯ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್‌ ಆಗಿದೆ. ಕಾವೇರಿ ತಾಯಿ ನಿನ್ನ ಮಡಿಲ ಮಗು ನಾನು, ಹಾಲು ಕೊಟ್ಟ ನಿನ್ನ ಕಡಿದು ಬಿಟ್ಟೆನು ನಾನು, ನನ್ನ ಬಾಳಿಗೂ ಮುಕ್ತಿಗೂ ಮಾರ್ಗವು ನೀನು.. ನಿನ್ನ ಮಡಿಲಲ್ಲಿ ಬೆಳೆದವನು ನಾನು..ಹೀಗೆ ಸಾಗುವ ಹಾಡನ್ನು ಪುನೀತ್‌ ಅದ್ಭುತವಾಗಿ ಹಾಡಿದ್ದಾರೆ. ಈ ಹಾಡಿಗೆ ಸದ್ಗುರು ಜಗ್ಗಿ ವಾಸುದೇವ್‌ ಅವರು ಸಾಹಿತ್ಯ ಬರೆದಿದ್ದಾರೆ.
ಕಾವೇರಿ ಕಾಲಿಂಗ್‌ಗಾಗಿ ನಾನು ಹಾಡಿದ್ದೇವೆBody:. ನಮ್ಮ ಕಾವೇರಿ ನದಿಯನ್ನು ಉಳಿಸಿಕೊಳ್ಳಲು ನಮ್ಮ ಕೈಲಾಗಿದ್ದನ್ನು ಮಾಡೋಣ ಎಂದು ಪುನೀತ್‌ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಅಸಂಖ್ಯಾತ ಅಭಿಮಾನಿಗಳು ಫಿದಾ, ಸಾಕಷ್ಟು ಜನ ರೀ ಟ್ವೀಟ್‌ ಮಾಡಿದ್ದಾರೆ. ಕರ್ನಾಟಕದ ಯುವರತ್ನ ಅಪ್ಪು ಸರ್‌. ಅದ್ಭುತವಾದ ಸಂದೇಶ ನೀಡಿದ್ದೀರಿ. ನಾವೂ ಕೂಡ ಗಿಡ ನೆಡುತ್ತೇವೆ ಎಂದು ಅಭಿಮಾನಿಗಳು ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.