ETV Bharat / opinion

ಹೊಸ ಯುಗಕ್ಕೆ ಸಹಕಾರಿ ಸಂಘಗಳ ಪ್ರವೇಶ: ಆರ್ಥಿಕ ಬೆಳವಣಿಗೆಯ ಸಾಧನಗಳು

author img

By ETV Bharat Karnataka Team

Published : Nov 18, 2023, 6:50 PM IST

ಸಹಕಾರಿ ಸಂಘಗಳು ಆರಂಭದಲ್ಲಿ ಕೇವಲ ಕೃಷಿಯೊಂದಿಗೆ ಸಂಬಂಧ ಹೊಂದಿದ್ದವು, ಈ ಪರಿಕಲ್ಪನೆಯು ಈಗ ಇತರ ಕ್ಷೇತ್ರಗಳಿಗೆ ಹರಡಿದೆ, ಇದರಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಗಳ ಮಹತ್ವವನ್ನು ಹೆಚ್ಚಿಸಿದೆ. ಈ ಕುರಿತು ಅರ್ಥಶಾಸ್ತ್ರಜ್ಞ ಬಿ.ಯರ್ರಂ ರಾಜು ಅವರ ಲೇಖನ ಇಲ್ಲಿದೆ

Etv Bharat
Etv Bharat

ದೇಶದ 75 ವರ್ಷಗಳ ಸ್ವಾತಂತ್ರ್ಯ ಇತಿಹಾಸದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಯು ಆರ್ಥಿಕ ಅಭಿವೃದ್ಧಿಯೊಂದಿಗೆ ಸಾಗಿಲ್ಲ. ಮೂರನೇ ಪಂಚವಾರ್ಷಿಕ ಯೋಜನೆಯವರೆಗೂ ಸಹಕಾರಿ ಅಭಿವೃದ್ಧಿಯು ಪಂಚವಾರ್ಷಿಕ ಯೋಜನೆಯ ದಾಖಲೆಯ ಅವಿಭಾಜ್ಯ ಅಂಗವಾಗಿತ್ತು. ಸಹಕಾರಿ ಅಭಿವೃದ್ಧಿಯನ್ನು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯ ಭಾಗವಾಗಿ ನೋಡಲಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಸಾಂಸ್ಥಿಕ ಸಾಲದ ವ್ಯವಸ್ಥೆಗಳನ್ನು ಪರಿಶೀಲಿಸಲು ಸಮಿತಿಯ ಶಿಫಾರಸುಗಳನ್ನು ಆಧರಿಸಿ, 1982ರಲ್ಲಿ ರಾಷ್ಟ್ರೀಯ ಬ್ಯಾಂಕ್​ ರಚನೆಯಾಗುವವರೆಗೂ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಸಹ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಭಾಗವಾಗಿ ಪರಿಶೀಲಿಸಲಾಗಿತ್ತು.

ಪ್ರಾಥಮಿಕ ಕೃಷಿ ಸಹಕಾರ ಸಾಲ ಸಂಘಗಳ ಸ್ಥಾಪನೆ ಮೂಲಕ ಸಹಕಾರಿ ಸಂಸ್ಥೆಗಳು ತಮ್ಮ ಮೂಲವನ್ನು ಕೃಷಿ ನೀಡಬೇಕಾಗಿದ್ದರೂ, ಅವು ಆರ್ಥಿಕ ಚಟುವಟಿಕೆಯ ವಿವಿಧ ಕ್ಷೇತ್ರಗಳಿಗೆ ಹಬ್ಬಿಕೊಂಡಿದೆ. ಮೀನುಗಾರಿಕೆ, ಹೈನು ಉತ್ಪನ್ನ, ಸಂಸ್ಕರಣೆ, ಮಾರುಕಟ್ಟೆ, ಪ್ರವಾಸೋದ್ಯಮ, ಶಿಕ್ಷಣ, ಆಸ್ಪತ್ರೆ, ವಸತಿ ಮತ್ತು ರಿಯಲ್​ ಎಸ್ಟೇಟ್​, ಸಾರಿಗೆ, ಪೆಟ್ರೋಲ್ ಬಂಕ್‌ಗಳು, ಚಿಲ್ಲರೆ ವ್ಯಾಪಾರ (ಗ್ರಾಹಕ ಸಹಕಾರ ಸಂಘಗಳು - ಸೂಪರ್​ ಬಜಾರ್‌ಗಳು), ಸಾಲ ಮತ್ತು ಬ್ಯಾಂಕಿಂಗ್​ ಉದ್ಯಮ - ಜಿಲ್ಲಾ ಮತ್ತು ರಾಜ್ಯ ಸಹಕಾರ ಕೇಂದ್ರ ಬ್ಯಾಂಕ್‌ಗಳು ಮತ್ತು ನಗರ ಸಹಕಾರಿ ಬ್ಯಾಂಕ್‌ಗಳು.. ಹೀಗೆ ಹರಡಿಕೊಂಡಿವೆ. ಎಲ್ಲ ರೀತಿಯ ಸಹಕಾರ ಸಂಘಗಳ ಸ್ಥೂಲ ಅಂದಾಜು ಸುಮಾರು 5 ಲಕ್ಷಗಳು ಆಗಿವೆ.

ಪ್ರಸ್ತತ ಎನ್​ಡಿಎ ಸರ್ಕಾರವು ಕೇಂದ್ರ ಗೃಹ ಸಚಿವಾಲಯದೊಂದಿಗೆ 2021ರಲ್ಲಿ ಪ್ರತ್ಯೇಕ ಸಚಿವಾಲಯ ರಚನೆಯೊಂದಿಗೆ ಸಹಕಾರಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಅಗತ್ಯವನ್ನು ಗುರುತಿಸಿದೆ. ರಾಷ್ಟ್ರೀಯ ಸಹಕಾರಿ ನೀತಿ ರೂಪಿಸಲಾಗಿದೆ. ಸಹಕಾರಿ ಸಪ್ತಾಹ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕ್ಷೇತ್ರ ಪ್ರಗತಿಯ ಪರಾಮರ್ಶೆ ಸೂಕ್ತವಾಗಿದೆ. ಭಾರತೀಯ ಪ್ರಜಾಪ್ರಭುತ್ವದ ಪ್ರತಿಯೊಬ್ಬ ರಾಜಕೀಯ ನಾಯಕರೂ ಹಳ್ಳಿಯ ಸಹಕಾರಿ ಸಂಸ್ಥೆಗಳಲ್ಲಿ ತಮ್ಮ ಬೇರುಗಳನ್ನು ಹೊಂದಿದ್ದರು ಎಂದು ಹೇಳುವುದು ಅತಿಶಯೋಕ್ತಿಯಲ್ಲ.

ಸಹಕಾರಿಗಳ ಪರಿಕಲ್ಪನೆ: ಒಂದು ಸಹಕಾರಿ ಸಂಸ್ಥೆಯು ಉತ್ಪಾದನೆ ಮತ್ತು ಸೇವೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಸಾಮರ್ಥ್ಯ ಮತ್ತು ಒಕ್ಕೂಟ ರಚನೆಯೊಂದಿಗೆ ಪಾಲುದಾರಿಕೆ ಹಾಗೂ ನೀತಿ ಬೆಂಬಲದ ವಿಷಯದಲ್ಲಿ ಉತ್ಸಾಹಭರಿತ ಪ್ರೋತ್ಸಾಹ ನೀಡಿದಾಗ ತಳಮಟ್ಟದಿಂದ ಜಾಗತಿಕ ಮಟ್ಟಕ್ಕೆ ಸಹಯೋಗ ನೀಡುತ್ತದೆ. ಈ ವಲಯವು ಯುವಕರ ಶಕ್ತಿ, ಬುದ್ಧಿಶಕ್ತಿ, ಮತ್ತು ಸೃಜನಶೀಲತೆಯನ್ನು ಗುರುತಿಸುವ ಮತ್ತು ಅದನ್ನು ಸಂಪರ್ಕಿಸುವ ಸಾಮರ್ಥ್ಯ ಹೊಂದಿದೆ. ಅವರನ್ನು ಉದ್ಯಮಶೀಲ ಉದ್ಯಮಗಳಾಗಿ ರೂಪಿಸಲು ಮತ್ತು ಪ್ರಯೋಜನಗಳನ್ನು ಜನರಿಗೆ ತಲುಪಿಸಲು ಅನುವು ಮಾಡಿಕೊಡುತ್ತದೆ.

ಸಹಕಾರದ ಮೂಲ ತತ್ವವೆಂದರೆ ಮಾಲೀಕತ್ವ, ಸದಸ್ಯ ಕೇಂದ್ರಿತ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆ. ತ್ವರಿತ, ಸಮಾನ ಮತ್ತು ಅಂತರ್ಗತ ಬೆಳವಣಿಗೆಯನ್ನು ಸಾಧಿಸುವಲ್ಲಿ ಈ ಚೌಕಟ್ಟು ನಿರ್ಣಾಯಕವಾಗಿದೆ. ರಾಷ್ಟ್ರೀಯ ಸಹಕಾರ ನೀತಿಯು ಮೌಲ್ಯಗಳನ್ನು ಆಚರಣೆಗೆ ತರಲು ಮೂಲಭೂತ ಸಹಕಾರ ತತ್ವಗಳ ಆಧಾರದ ಮೇಲೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗೆ ಒಂದು ಮಾರ್ಗವಾಗಿ 'ಸಹಕಾರ್​ ಸೇ ಸಮೃದ್ಧಿ' (ಸಹಕಾರದ ಮೂಲಕ ಸಮೃದ್ಧಿ) ಎಂಬ ದೃಷ್ಟಿಯೊಂದಿಗೆ ಪ್ರಾರಂಭವಾಗುತ್ತದೆ.

ಸಹಕಾರ ಸಂಘಗಳು ಸ್ವ-ಸಹಾಯ, ಸ್ವ-ಜವಾಬ್ದಾರಿ, ಪ್ರಜಾಪ್ರಭುತ್ವ, ಸಮಾನತೆ ಮತ್ತು ಐಕಮತ್ಯದ ಮೌಲ್ಯಗಳಲ್ಲಿ ಅಂತರ್ಗತವಾಗಿವೆ ಎಂದು ನೀತಿಯು ಗುರುತಿಸುತ್ತದೆ. ಭಾರತದ ಸಂವಿಧಾನವು 19ನೇ ವಿಧಿ ಅಡಿಯಲ್ಲಿ ಸಹಕಾರ ಸಂಘಗಳನ್ನು ರಚಿಸುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸುತ್ತದೆ. 21ನೇ ಶತಮಾನವು ಜನರು, ಸಂಸ್ಥೆಗಳು ಮತ್ತು ಸರ್ಕಾರದ ಕಾರ್ಯ ಬದಲಾಯಿಸಿದೆ. ಸಹಕಾರ ನೀತಿಯು ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಮುನ್ನಡೆಸುವ ಗುರಿ ಹೊಂದಿದೆ. ಪ್ರಸ್ತುತ ಸಾಮಾಜಿಕ-ಆರ್ಥಿಕ ಸಂದರ್ಭವನ್ನು ಸಂಯೋಜಿಸುತ್ತದೆ ಮತ್ತು ರಾಷ್ಟ್ರಕ್ಕೆ ಸಮೃದ್ಧಿಯನ್ನು ತರುವ ಸುಸ್ಥಿರ ಮಾದರಿಯಾಗಿದೆ.

ಸವಾಲುಗಳು: ರಾಷ್ಟ್ರೀಯ ಸಹಕಾರ ನೀತಿಯು ಉದ್ಯಮಶೀಲತೆ, ವ್ಯಾಪಾರ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಭೆಗಳನ್ನು ಸಹಕಾರದ ಮೂಲಕ ಸುಸ್ಥಿರ ಜೀವನೋಪಾಯ ಮತ್ತು ಸಮೃದ್ಧಿ ಹೆಚ್ಚಿಸಲು ಪ್ರೋತ್ಸಾಹಿಸುತ್ತದೆ. ದಿನದ ಸಹಕಾರಿ ಸಂಸ್ಥೆಗಳು ಎದುರಿಸುತ್ತಿರುವ ಹಲವಾರು ಸವಾಲುಗಳನ್ನೂ ನೀತಿ ಒಪ್ಪಿಕೊಳ್ಳುತ್ತದೆ. ಬಂಡವಾಳದ ಕೊರತೆ, ಸದಸ್ಯರ ಅರಿವು ಮತ್ತು ಒಗ್ಗಟ್ಟಿನ ಕೊರತೆ, ಕಳಪೆ ನಿರ್ವಹಣೆ ಮತ್ತು ಆಡಳಿತ, ನಿಯಮಗಳ ತಿಳುವಳಿಕೆಯ ಕೊರತೆ, ಅಸಮರ್ಪಕ ಲೆಕ್ಕಪತ್ರ ನಿರ್ವಹಣೆ, ಸದಸ್ಯರಿಗೆ ಅನುಕೂಲವಾಗುವ ತಾಂತ್ರಿಕ ಪ್ರಗತಿಗಳ ಅಸಮರ್ಪಕತೆ. ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಬೃಹದಾಕಾರದ ಕೆಲಸವಾಗಿದೆ. ವೈಯಕ್ತಿಕ ಸದಸ್ಯರು ಮತ್ತು ಅವರು ಸದಸ್ಯರಾಗಿರುವ ಸಂಸ್ಥೆಗಳ ನಡುವೆ ಆಸಕ್ತಿಯ ಅಂತರ್ಗತ ಸಂಘರ್ಷವಿದೆ.

ಇದು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ದ್ವಂದ್ವ ನಿಯಂತ್ರಣದಲ್ಲಿರುವ ವಿಷಯವಾಗಿರುವುದರಿಂದ ಸಹಕಾರಿಗಳನ್ನು ನಿಯಂತ್ರಿಸುವ ಕಾನೂನು ಮತ್ತು ನಿಯಂತ್ರಕ ಮಾನದಂಡಗಳಲ್ಲಿ ಬದಲಾವಣೆಯ ಅಗತ್ಯವನ್ನು ಸಹ ನೀತಿ ಒಪ್ಪಿಕೊಳ್ಳುತ್ತದೆ. ಪ್ರತಿಯೊಂದು ರಾಜ್ಯ ಸರ್ಕಾರವು ತನ್ನದೇ ಆದ ಶಾಸನವನ್ನು ಹೊಂದಿದೆ. ಶಾಸನದಲ್ಲಿ ಏಕರೂಪತೆ ತರಲು ಹಿಂದೆ ಹಲವಾರು ಪ್ರಯತ್ನಗಳು ವಿಫಲವಾಗಿವೆ. ಸಹಕಾರಿ ಸಂಸ್ಥೆಗಳನ್ನು ಶಕ್ತಿ ಕೇಂದ್ರಗಳಾಗಿ ನೋಡಲಾಗುತ್ತದೆಯೇ ಹೊರತು ಆರ್ಥಿಕತೆಯ ಅಭಿವೃದ್ಧಿ ಕೇಂದ್ರಗಳಲ್ಲ.

ರಾಷ್ಟ್ರೀಯ ನೀತಿಯು ಅನೇಕ ಶ್ಲಾಘನೀಯ ಉದ್ದೇಶಗಳನ್ನು ಹೊಂದಿದೆ. 2028ರ ವೇಳೆಗೆ ಜಿಡಿಪಿಯಲ್ಲಿ ಸಹಕಾರಿಗಳ ಪಾಲನ್ನು ಗಣನೀಯವಾಗಿ ಹೆಚ್ಚಿಸುವುದು. ಪ್ರಸ್ತುತ ಇದರ ಪಾಲು ಮಾನದಂಡವಾಗಿ ಮಾಡಿಲ್ಲ. ಆದಾಗ್ಯೂ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಪ್ರಾದೇಶಿಕ ಅಸಮತೋಲನ ತಗ್ಗಿಸುವುದು, ಆಡಳಿತ ಸುಧಾರಣೆ, ಸಹಕಾರಿ ಬ್ರ್ಯಾಂಡ್ ಇಮೇಜ್​ ಅಭಿವೃದ್ಧಿಪಡಿಸುವುದು, ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ, ವೈವಿಧ್ಯಮಯ ಸಹಕಾರಿ ಪದ್ಧತಿಗಳಲ್ಲಿ ಏಕರೂಪತೆ, ತರಬೇತಿ, ಅಭಿವೃದ್ಧಿ ಮತ್ತು ಶಿಕ್ಷಣ, ಸದಸ್ಯತ್ವ ಬಲಪಡಿಸುವುದು, ಮಾರುಕಟ್ಟೆ ಪ್ರವೇಶ ಸುಧಾರಿಸುವುದು ಮತ್ತು ಅವರ ಉನ್ನತಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶ ನೀತಿಯಲ್ಲಿದೆ.

2024ರವರೆಗೆ ಸುಮಾರು 2,500 ಕೋಟಿಗಳ ರೂ. ಬಜೆಟ್ ಬದ್ಧತೆಯೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ 63,000 ತಳಮಟ್ಟದ ಸಹಕಾರಿ ಸಂಘಗಳ ತಂತ್ರಜ್ಞಾನ ಅಭಿವೃದ್ಧಿಯನ್ನು ಪ್ರಾರಂಭಿಸಲಾಗಿದೆ. ಟೆಕ್ ಸ್ಟಾಕ್​ಅನ್ನು ಮುನ್ನಡೆಸುವ ಕಾರ್ಯವನ್ನು ನಬಾರ್ಡ್‌ಗೆ ವಹಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಗ್ರಾಮೀಣ ಸಹಕಾರಿ ಸಂಘಗಳನ್ನು ಇದರಲ್ಲಿ ಒಳಗೊಳ್ಳುವ ಗುರಿ ಹೊಂದಲಾಗಿದೆ.

ಹಣಕಾಸು ಸಹಕಾರಿ ಸಂಸ್ಥೆಗಳು ಗ್ರಾಮೀಣ ಮತ್ತು ನಗರ ಎಂಬ ವಿಶಾಲವಾದ ಎರಡು ವಿಭಾಗಗಳಡಿಯಲ್ಲಿ ಬರುತ್ತವೆ. 2023ರ ಭಾರತೀಯ ರಿಸರ್ವ್ ಬ್ಯಾಂಕ್​ನ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 2021ರ ಹೊತ್ತಿಗೆ, 1,534 ನಗರ ಮತ್ತು 96,508 ಗ್ರಾಮೀಣ ಸಹಕಾರಿಗಳನ್ನು ಒಳಗೊಂಡಿರುವ 98,042 ಸಹಕಾರಿ ಸಂಸ್ಥೆಗಳಿವೆ. 2020ರ ಮಾರ್ಚ್ ಅಂತ್ಯದ ವೇಳೆಗೆ ಸಹಕಾರಿ ಬ್ಯಾಂಕಿಂಗ್ ವಲಯದ ಒಟ್ಟು ಆಯವ್ಯಯದ ಗಾತ್ರವು ರೂ.18.8 ಲಕ್ಷ ಕೋಟಿಯಾಗಿದೆ. ನಗರ ಸಹಕಾರಿ ಬ್ಯಾಂಕ್‌ಗಳು ಹಣಕಾಸು ವಲಯದ ಸುಮಾರು ಶೇ.8ರಷ್ಟು ಸ್ಥಳವನ್ನು ಆವರಿಸಿಕೊಂಡಿವೆ.

ನಗರ ಸಹಕಾರಿ ಸಂಸ್ಥೆಗಳು ಸುದ್ದಿಯಾಗುವ ಕಾರಣ:

  • ಪಿಎಂಸಿ ಬ್ಯಾಂಕ್ ವೈಫಲ್ಯ. ಆರ್‌ಬಿಐ ಠೇವಣಿಗಳ ಗ್ಯಾರಂಟಿ ಮಿತಿಯ ಮಿತಿಯನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ.
  • ವೈಫಲ್ಯಗಳು ಮತ್ತು ಅಕ್ರಮಗಳ ಸರಣಿಯ ನಂತರ ಠೇವಣಿದಾರರ ಹಿತಾಸಕ್ತಿಗಳು ನಿಯಂತ್ರಕರ ಪ್ರಧಾನ ಆಸಕ್ತಿಯನ್ನು ಆಕ್ರಮಿಸಿಕೊಂಡಿರುವುದು.
  • ದುರ್ಬಲ ಬ್ಯಾಂಕ್‌ಗಳನ್ನು ಬಲಿಷ್ಠ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಮೂಲಕ ಬ್ಯಾಂಕ್‌ಗಳ ಏಕೀಕರಣ.
  • ನಗರ ಸಹಕಾರಿಗಳಲ್ಲಿ ಅವುಗಳ ವೈವಿಧ್ಯತೆ ಹಾಗೂ ವ್ಯವಹಾರದ ಮಟ್ಟ ಆಧರಿಸಿ 4 ಶ್ರೇಣಿಗಳಾಗಿ ವಿಂಗಡಿಸುವ ಪರಿಚಯ.
  • ವಿಶ್ವನಾಥನ್ ಸಮಿತಿಯ ಕೆಲವು ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು. ವಿಶೇಷವಾಗಿ ರಾಷ್ಟ್ರೀಯ ನಗರ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ಸಹಕಾರ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸದಸ್ಯತ್ವವನ್ನು ಮೀರಿ ಬಂಡವಾಳವನ್ನು ಸಂಗ್ರಹಿಸಲು ಸಹಾಯ ಮಾಡುವುದು.
  • ಚುನಾಯಿತ ಮಂಡಳಿಗಳಿಗೆ ಬೆಂಬಲ ಕಾರ್ಯವಿಧಾನವಾಗಿ ಕ್ರಿಯಾತ್ಮಕ ತಜ್ಞರೊಂದಿಗೆ ಆಡಳಿತ ಮಂಡಳಿ ಸ್ಥಾಪನೆ.
  • ವಲಯವನ್ನು ಬಲಪಡಿಸುವಲ್ಲಿ ಅಂತರ ಸಹಕಾರಿ ಸಂಸ್ಥೆ ಸಹಕಾರ, ಹಲವಾರು ನಿಯಂತ್ರಕ ಉಲ್ಲಂಘನೆಗಳಿಗಾಗಿ ಬ್ಯಾಂಕ್​ಗಳ ಮೇಲೆ ದಂಡ ಹೆಚ್ಚಿಸುವುದು.
  • ಸಂಸ್ಥೆಗಳ ಶ್ರೇಣಿ ಅವಲಂಬಿಸಿ 2026ರ ವೇಳೆಗೆ ಆದ್ಯತಾ ವಲಯಕ್ಕೆ ಸಾಲ ನೀಡುವ ಹೊಸ ಮಿತಿ ವಿಧಿಸುವುದು.
  • ಕಳಪೆ ಆಡಳಿತ ಹಾಗೂ ಅಪಾಯ ನಿರ್ವಹಣೆ ಮಾನದಂಡಗಳು.

ರೂಪಾಂತರಕ್ಕೆ ಪ್ರಯತ್ನ: ನಗರ ಸಹಕಾರಿ ಸಂಸ್ಥೆಗಳನ್ನು ವ್ಯವಹಾರದ ಮಟ್ಟ ಆಧರಿಸಿ 4 ಶ್ರೇಣಿಗಳಾಗಿ ವಿಂಗಡಿಸುವುದು ಉತ್ತಮ. ಎಲ್ಲ ಸಂಸ್ಥೆಗಳ ನಿವ್ವಳ ಮೌಲ್ಯವು ಆರಾಮದಾಯಕವಾಗಿದೆ ಎಂದು ಹಣಕಾಸಿನ ಸ್ಥಿರತೆ ವರದಿ ಹೇಳಿದೆ. ಆದರೂ, ಸಂಸ್ಥೆಗಳ ಕೊಡುಗೆಯ ಬಗ್ಗೆ ಕಳವಳಗಳು ಮುಂದುವರೆದಿವೆ. ಕೆಲವು ಆರ್ಥಿಕವಾಗಿ ಉತ್ತಮ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಬ್ಯಾಂಕುಗಳು ಇಂಟರ್​​ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿ ಮುಂತಾದ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಾಣಿಜ್ಯ ಬ್ಯಾಂಕ್‌ಗಳಿಗೆ ಹೋಲುವ ಸಂಪೂರ್ಣ ರೂಪಾಂತರಕ್ಕೆ ಪ್ರಯತ್ನಿಸುತ್ತಿವೆ. ಆದರೆ, ವಿವಿಧ ಹಂತಗಳಲ್ಲಿ ಸಾಮರ್ಥ್ಯ ನಿರ್ಮಾಣ ಮತ್ತು ಸೈಬರ್ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿವೆ.

ವಿಶ್ವನಾಥನ್ ಸಮಿತಿಯ ಅಭಿಪ್ರಾಯವೆಂದರೆ ಸಹಕಾರದ ತತ್ವಗಳ ಮೇಲೆ ಕಾರ್ಯನಿರ್ವಹಿಸುವ ಹಣಕಾಸು ಸಂಸ್ಥೆಗಳಿಗೆ ಮತ್ತು ಅವರು ಪಡೆಯುವ ಒಳಗೊಳ್ಳುವಿಕೆಗೆ ಸಾಕಷ್ಟು ಸ್ಥಳವಿದೆ. ಅದರಂತೆ, ನಗರ ಸಹಕಾರಿ ಸಂಸ್ಥೆಗಳು ವಲಯದ ದೃಷ್ಟಿಯು ವ್ಯಾಪಾರ ಮಾದರಿಯ ತಿರುಳಾಗಿ ಅಂತರ್ಗತ ಹಣಕಾಸುಗಾಗಿ ಉತ್ಸಾಹದಿಂದ ನಡೆಸಲ್ಪಡುವ ಆಯ್ಕೆಯ ನೆರೆಹೊರೆಯ ಬ್ಯಾಂಕ್​ ಆಗಿ ಹೊರಹೊಮ್ಮಬೇಕು.

ಸಂಸ್ಥೆಗಳ ಕಾರ್ಯಾಚರಣೆಗಳು ಹಣಕಾಸಿನ ಸಾಮರ್ಥ್ಯ, ಬಲವಾದ ಬ್ರ್ಯಾಂಡಿಂಗ್, ಅತ್ಯಾಧುನಿಕ ತಂತ್ರಜ್ಞಾನ ಚಾಲಿತ ಪ್ರಕ್ರಿಯೆಗಳು ಮತ್ತು ನುರಿತ ಮಾನವ ಸಂಪನ್ಮೂಲಗಳ ಜೊತೆಗೆ ನಿಯಂತ್ರಕ ಪರಿಸರವನ್ನು ಸಕ್ರಿಯಗೊಳಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಈ ಆಂತರಿಕ ಚಲನೆಗಳು ಬ್ಯಾಂಕ್​ನ ಅದ್ವಿತೀಯ ಆಧಾರದ ಮೇಲೆ ಅಥವಾ ನೆಟ್‌ವರ್ಕ್ ವ್ಯವಸ್ಥೆಗಳ ಮೂಲಕ ಪಡೆದುಕೊಳ್ಳಬಹುದು. ನಗರ ಸಹಕಾರಿ ಬ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು ಮತ್ತು ಆರ್ಥಿಕತೆಯ ಇತರ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಹಕಾರಿ ಸ್ವರೂಪವನ್ನು ಆರ್ಥಿಕ ಸಂಸ್ಥೆಯಾಗಿ ಪ್ರೋತ್ಸಾಹಿಸುವುದು ಈ ವಲಯದ ವ್ಯಾಪ್ತಿಯನ್ನು ಗುಣಾತ್ಮಕವಾಗಿ ಹೆಚ್ಚಿಸುತ್ತದೆ. ಡೈರಿ ಉದ್ಯಮದಲ್ಲಿ ಅಮುಲ್‌ಗೆ ಹೋಲುವ ಬ್ರಾಂಡ್ ಇಮೇಜ್​ ಅನ್ನೂ ರಚಿಸಬಹುದು.

(ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯಕ್ತಿಕ. ಲೇಖಕರು ಅರ್ಥಶಾಸ್ತ್ರಜ್ಞ ಮತ್ತು ಅಪಾಯ ನಿರ್ವಹಣೆ ತಜ್ಞರು. 2011-12ರಲ್ಲಿ ಗ್ರಾಮೀಣ ಸಹಕಾರಿ ಸಾಲ ರಚನೆಯ ಆರ್‌ಬಿಐ ಸಮಿತಿಯ ಪರಿಣಿತ ಸದಸ್ಯರಾಗಿದ್ದರು.)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.