ETV Bharat / entertainment

'ವೇದ್' ಸಕ್ಸಸ್‌: ರಿತೇಶ್ ದೇಶ್​​ಮುಖ್​-ಜೆನಿಲಿಯಾಗೆ ಕಿಚ್ಚ ಸುದೀಪ್ ಅಭಿನಂದನೆ

author img

By

Published : Apr 9, 2023, 7:53 PM IST

ಬಾಲಿವುಡ್​ ಚಿತ್ರದ ಸಾಧನೆಗೆ ಕಿಚ್ಚ ಸುದೀಪ್​ ಅಭಿನಂದನೆ ಸಲ್ಲಿಸಿದ್ದಾರೆ.

actor sudeep
ಕಿಚ್ಚ ಸುದೀಪ್​

ತಮ್ಮ ಲವ್​ ಸ್ಟೋರಿ ಮೂಲಕ ಗಮನ ಸೆಳೆಯುವ ಬಾಲಿವುಡ್​​ ಸ್ಟಾರ್​​ ದಂಪತಿ​ ರಿತೇಶ್ ದೇಶ್​​ಮುಖ್​ ಮತ್ತು ಜೆನಿಲಿಯಾ. ಈ ಜೋಡಿ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರ ಇತ್ತೀಚಿನ ವೇದ್​​ ಸಿನಿಮಾ ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿದ್ದು, ಸಕ್ಸಸ್​ ಖುಷಿಯಲ್ಲಿ ಚಿತ್ರತಂಡವಿದೆ. ಈ ಬಗ್ಗೆ ಕಿಚ್ಚ ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವಿಟರ್​ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಕಿಚ್ಚ ಸುದೀಪ್​, ''ಹೆಮ್ಮೆ ಮತ್ತು ಸಂತೋಷ ಆಗುತ್ತಿದೆ. ನನ್ನ ಸಹೋದರ ರಿತೇಶ್ ದೇಶ್​​ಮುಖ್​ ಮತ್ತು ಜೆನಿಲಿಯಾ, ನೀವು ಎಲ್ಲದಕ್ಕೂ ಅರ್ಹರು, ಪಾರ್ಟಿ ಟೈಮ್'' ಎಂದು ಬರೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಅಲ್ಲದೇ ದೇಶದ ಹಲವು ನಟ ನಟಿಯರು ಚಿತ್ರತಂಡಕ್ಕೆ, ಸಿನಿಮಾದ ಪ್ರಮುಖ ತಾರಾಗಣಕ್ಕೆ ಅಭಿನಂದನೆ ತಿಳಿಸಿದ್ದಾರೆ.

ರಿತೇಶ್ ದೇಶ್​​ಮುಖ್​ ಮತ್ತು ಜೆನಿಲಿಯಾ ಅಭಿನಯದ ವೇದ್ ಕಳೆದ ಡಿಸೆಂಬರ್​ 30ಕ್ಕೆ ತೆರೆಕಂಡಿದೆ. ನಿನ್ನೆಗೆ (ಏಪ್ರಿಲ್​ 8, ಶನಿವಾರ) 100 ದಿನ ಪೂರೈಸಿದೆ. ರಿತೇಶ್ ದೇಶ್​​ಮುಖ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರ 75 ಕೊಟಿ ರೂ. ಕಲೆಕ್ಷನ್​ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೇ ರಿತೇಶ್ ದೇಶ್​​ಮುಖ್ ನಿರ್ದೇಶನದಲ್ಲಿ ಮೂಡಿಬಂದ ಚೊಚ್ಚಲ ಚಿತ್ರವಿದು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಖತ್​ ಖುಷಿಯಲ್ಲಿದ್ದು, ಇತರೆ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿದ್ದಾರೆ.

'ಅದ್ಭುತ, ಅಭಿನಂದನೆಗಳು' ಎಂದು ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ ತಿಳಿಸಿದ್ದಾರೆ. 'ಅದ್ಭುತ, ನಿಮ್ಮಿಬ್ಬರಿಗೆ ಮತ್ತಷ್ಟು ಶಕ್ತಿ' ಎಂದು ನಟ ಸುನೀಲ್​ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಹೃತ್ಪೂರ್ವಕ ಅಭಿನಂದನೆಗಳು ಆತ್ಮೀಯ ಜೆನಿಲಿಯಾ ಮತ್ತು ಸಹೋದರ ರಿತೇಶ್​​, ಈ ಯಶಸ್ಸು ಸುಂದರವಾಗಿದೆ, ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು ಎಂದು ತಮಿಳು ನಟ ಸೂರ್ಯ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ರಿತೇಶ್​ ದೇಶ್​ಮುಖ್​ ಪೋಸ್ಟರ್ ಹಂಚಿಕೊಂಡಿದ್ದರು. ಬಳಿಕ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರ ಪ್ರೀತಿ, ಬೆಂಬಲಕ್ಕೆ ರಿತೇಶ್​ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರೊಂದಿಗೆ ಶಾರುಖ್ ಖಾನ್

'ಉಸಿರೇ ಉಸಿರೇ' ಸಿನಿಮಾದಲ್ಲಿ ಸುದೀಪ್​: ಸಿಸಿಎಲ್ ಮತ್ತು ಕನ್ನಡ ಬಿಗ್ ​ಬಾಸ್ ಶೋ ಮೂಲಕ​ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಾಜೀವ್​ ಅವರು​​ 'ಉಸಿರೇ ಉಸಿರೇ' ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಜೀವ್ ಸ್ನೇಹಿತರೂ ಆಗಿರುವ ನಟ ಸುದೀಪ್​ ಈ ಚಿತ್ರದಲ್ಲಿ ಅತಿಥಿ ಪಾತ್ರ ವಹಿಸಿದ್ದಾರೆ. ಇತ್ತೀಚೆಗಷ್ಟೇ 'ಉಸಿರೇ ಉಸಿರೇ' ಸೋಟಿಂಗ್​ ಸೆಟ್​ಗೆ ಆಗಮಿಸಿ ತಮ್ಮ ಪಾತ್ರಕ್ಕೆ ಅಭಿನಯಿಸಿದ್ದಾರೆ ಅಭಿನಯ ಚಕ್ರವರ್ತಿ. ಸಿ.ಎಂ ವಿಜಯ್ ನಿರ್ದೇಶನದ ಈ ಸಿನಿಮಾದಲ್ಲಿ ಸುದೀಪ್ ಅವರು ರಾಜೀವ್​ ಸಹಾಯಕನ ಪಾತ್ರ ವಹಿಸಿದ್ದಾರೆ. ರಾಜೀವ್ ರಸ್ತೆ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಸುದೀಪ್ ಸಹಾಯ ಮಾಡುವ ದೃಶ್ಯದ ಶೂಟಿಂಗ್​​ ನಡೆದಿದೆ.

ಇದನ್ನೂ ಓದಿ: ಮನೆಯಲ್ಲಿ ತಂದೆಯಿಂದ ದೈಹಿಕ, ಮಾನಸಿಕ ಕಿರುಕುಳ ಅನುಭವಿಸಿದ್ದೆ: ಉರ್ಫಿ ಜಾವೇದ್

ಇನ್ನೂ ವಿಕ್ರಾಂತ್​ ರೋಣ ಬಳಿಕ ಸುದೀಪ್​ ಅವರ ಯಾವುದೇ ಚಿತ್ರ ಘೋಷಣೆಯಾಗಿಲ್ಲ. ಮೂರು ಕಥೆಗಳು ಅಂತಿಮವಾಗಿದ್ದು, ಬೇಕಾದ ಸಿದ್ಧತೆ ಮುಂದುವರಿದಿದೆ. ಶೀಘ್ರದಲ್ಲೇ ಘೋಷಣೆ ಆಗಲಿದೆ ಎಂದು ನಟ ಸುದೀಪ್​ ಇತ್ತೀಚೆಗಷ್ಟೇ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.