ETV Bharat / entertainment

ಆರ್​ಆರ್​ಆರ್ ಸಿನಿಮಾ ಬಹಿಷ್ಕರಿಸಲು ಹೇಳಿದ್ದ ಬಿಜೆಪಿ ಧರ್ಮಾಂಧರು ಈಗ ಎಲ್ಲಿದ್ದಾರೆ?: ಪ್ರಕಾಶ್ ರಾಜ್

author img

By

Published : Mar 14, 2023, 9:57 AM IST

Updated : Mar 14, 2023, 10:36 AM IST

ಆರ್​ಆರ್​ಆರ್​ಗೆ ಬಹಿಷ್ಕಾರದ ಕೂಗು ಹಾಕಿದ್ದ ಬಿಜೆಪಿ ನಾಯಕರ ವಿರುದ್ಧ ನಟ ಪ್ರಕಾಶ್​ ರಾಜ್​ ಸಿಡಿದೆದ್ದಿದ್ದಾರೆ.

bjp
ನಟ ಪ್ರಕಾಶ್​ ರಾಜ್​

ಎಸ್.​ಎಸ್.ರಾಜಮೌಳಿ ನಿರ್ದೇಶನದ ಟಾಲಿವುಡ್​ ಸೂಪರ್​ಸ್ಟಾರ್​ಗಳಾದ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿನಯದ ತೆಲುಗು ಸಿನಿಮಾ ಆರ್​ಆರ್​ಆರ್​ನ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರತಿಷ್ಟಿತ ಆಸ್ಕರ್​ ಪ್ರಶಸ್ತಿ ಲಭಿಸಿದೆ. ದೇಶ ವಿದೇಶದ ಗಣ್ಯರು, ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಚಿತ್ರ ತಂಡಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಾಲಿನಲ್ಲಿ ರಾಜಕೀಯ ನಾಯಕರು ಕೂಡ ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಶುಭಾಶಯಗಳನ್ನು ಕೋರಿದ್ದಾರೆ. ಆದರೆ, ಹಿಂದೊಮ್ಮೆ ಕೆಲವು ಬಿಜೆಪಿ ನಾಯಕರು ಆರ್​ಆರ್​ಆರ್​ ಸಿನಿಮಾವನ್ನು ಟೀಕಿಸಿದ್ದರು. ಇದನ್ನು ಟ್ವಿಟರ್​ನಲ್ಲಿ ಪ್ರಸ್ತಾಪಿಸಿರುವ ನಟ ಪ್ರಕಾಶ್​ ರಾಜ್​ ಟೀಕಾ ಪ್ರಹಾರ ನಡೆಸಿದ್ದಾರೆ. ಆರ್​ಆರ್​ಆರ್​ ಸಿನಿಮಾವನ್ನು ಬಹಿಷ್ಕರಿಸಲು ಹೇಳಿದ್ದ, ಚಿತ್ರ ಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿಯ ಧರ್ಮಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

  • #Oscars2023 ..
    and the Bigots of supreME s bjp wanted to boycott #RRR and burn down the theatres . Where are they hiding now?? ವಿಸ್ವಗುರುವಿನ ಶಿಷ್ಯರು #RRR ಸಿನೆಮಾನ ಬ್ಯಾನ್ ಮಾಡಿ .. ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು.. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ… #justasking pic.twitter.com/J3o0RckKi7

    — Prakash Raj (@prakashraaj) March 13, 2023 " class="align-text-top noRightClick twitterSection" data=" ">

"ಬಿಜೆಪಿಯ ಧರ್ಮಾಂಧರು ಆರ್​ಆರ್​ಆರ್​ ಸಿನಿಮಾವನ್ನು ಬಾಯ್ಕಾಟ್​ ಮಾಡಲು ಮತ್ತು ಚಿತ್ರ ಮಂದಿರಗಳನ್ನು ಕೆಡವಲು ಬಯಸಿದ್ದರು. ಈಗ ಅವರು ಎಲ್ಲಿ ಅಡಗಿದ್ದಾರೆ. ವಿಸ್ವಗುರುವಿನ ಶಿಷ್ಯರು ಆರ್​ಆರ್​ಆರ್​ ಸಿನಿಮಾನ ಬ್ಯಾನ್​ ಮಾಡಿ, ಚಿತ್ರ ಮಂದಿರಗಳನ್ನು ಕೆಡವ್ತೀವಿ ಅಂದಿದ್ರು. ಎಲ್​ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ?" ಎಂದು ವ್ಯಂಗ್ಯ ಮಾಡಿದ್ದಾರೆ.

ಇಂದು ಪ್ರಪಂಚದಾದ್ಯಂತ ಮನ್ನಣೆ ಗಳಿಸಿರುವ ಆರ್​ಆರ್​ಆರ್ ಸಿನಿಮಾ ಬಿಡುಗಡೆಗೊಂಡ ಸಮಯದಲ್ಲಿ ಕೆಲವು ಬಿಜೆಪಿ ನಾಯಕರಿಂದ ವಿರೋಧ ಎದುರಿಸಿತ್ತು. ಚಿತ್ರದಲ್ಲಿ ಕೋಮರಮ್​ ಭೀಮನನ್ನು ಬಿಂಬಿಸಿದ ರೀತಿಗೆ ತೆಲಂಗಾಣದ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಮರು ಧರಿಸುವ ಟೋಪಿಯನ್ನು ಭೀಮನ ಪಾತ್ರಧಾರಿ ಜೂನಿಯರ್​ ಎನ್​ಟಿಆರ್​ಗೆ ತೊಡಿಸಿದ್ದಕ್ಕೆ ಆರ್​ಆರ್​ಆರ್​ ವಿರುದ್ಧ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ​ಜೊತೆಗೆ ಚಿತ್ರಕ್ಕೆ ಅಡ್ಡಿಪಡಿಸುವುದಾಗಿಯೂ ಹೇಳಿದ್ದರು.

ಇದನ್ನೂ ಓದಿ: 'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು?

ಆರ್​ಆರ್​ಆರ್​ಗೆ ಆಸ್ಕರ್ ಗರಿ​: 2023 ರ ಅಕಾಡೆಮಿ ಪ್ರಶಸ್ತಿಗೆ ಭಾರತದ 'ನಾಟು ನಾಟು' ಹಾಡು ಮತ್ತು ಲಿಫ್ಟ್ ಮಿ ಅಪ್ , ದಿಸ್ ಈಸ್ ಲೈಫ್, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ನಾಮನಿರ್ದೇಶನಗೊಂಡಿದ್ದವು. ಆದರೆ, ಈ ಎಲ್ಲಾ ಗೀತೆಯನ್ನು ಹಿಂದಿಕ್ಕಿ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಅಲ್ಲದೇ ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇದೀಗ ಆಸ್ಕರ್​ ಅವಾರ್ಡ್​ ಕೂಡ ದಕ್ಕಿದ್ದು, 'ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್‌ ಪಡೆದ ಮೊದಲ ಭಾರತೀಯ ಗೀತೆಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್‌ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ

Last Updated : Mar 14, 2023, 10:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.