ETV Bharat / entertainment

ಜೂ. ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಅಡ್ಡದಲ್ಲಿ ಟಗರು ಶಿವ!

author img

By

Published : Jul 13, 2022, 6:09 PM IST

ಅಭಿಷೇಕ್​ ಅಂಬರೀಶ್ ಅವರ ಎರಡನೇ ಸಿನಿಮಾ ಬ್ಯಾಡ್ ಮ್ಯಾನರ್ಸ್ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಚಿತ್ರದ ಸೆಟ್ಟಿಗೆ ಶಿವರಾಜ್​ ಕುಮಾರ್ ಸರ್​ಪ್ರೈಸ್ ಆಗಿ ಭೇಟಿ ನಿಡಿದ್ದಾರೆ.

Bad Manners
ಬ್ಯಾಡ್ ಮ್ಯಾನರ್ಸ್

ಕನ್ನಡ ಚಿತ್ರರಂಗದಲ್ಲಿ ಮಾಸ್ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ಸೂರಿ ಅಭಿಷೇಕ್ ಅಂಬರೀಶ್​ಗೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮಾಡುತ್ತಿದ್ದಾರೆ. ಅಮರ್​ ನಂತರ ಅಭಿಷೇಕ್​ ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಬ್ಯಾಡ್‌ ಮ್ಯಾನರ್ಸ್ ಈ ಸಿನಮಾ ಸೆಟ್ಟೇರಿಂದಾಗಿನಿಂದ ಸದ್ದಿಲ್ಲದೇ ಚಿತ್ರೀಕರಣ ಮಾಡುತ್ತಿದೆ. ಸದ್ಯ ಮೈಸೂರಿನಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಈ ಸಿನಿಮಾ ಅಡ್ಡಕ್ಕೆ ಟಗರು ಶಿವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಸರ್​ಪ್ರೈಸ್ ಭೇಟಿ ಕೊಟ್ಟಿದ್ದಾರೆ. ನಿನ್ನೆಯಷ್ಟೇ 60ನೇ ವಸಂತಕ್ಕೆ ಕಾಲಿಟ್ಟಿರೋ, ಶಿವರಾಜ್ ಕುಮಾರ್ ಮೈಸೂರಿನಲ್ಲಿದ್ದರು‌. ಈ ಸಮಯದಲ್ಲಿ ಟಗರು ಶಿವ, ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ಅಡ್ಡಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸಮಯದಲ್ಲಿ ನಟ ಅಭಿಷೇಕ್ ಅಂಬರೀಶ್ ಮತ್ತು ನಿರ್ದೇಶಕ ಸೂರಿ ಶಿವರಾಜ್ ಕುಮಾರ್ ಅವರಿಗೆ ಹೂನಿನ ಹಾರ ಹಾಕುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಹೇಳಿದರು.

ಮ್ಯಾನರ್ಸ್ ಶೂಟಿಂಗ್ ಅಡ್ಡದಲ್ಲಿ ಟಗರು ಶಿವ ಭೇಟಿ

ಶಿವರಾಜ್​ಕುಮಾರ್​ ಸೆಟ್​ಗೆ ಬಂದಿರುವುದು ಅಚ್ಚರಿ ತಂದಿದೆ. ನಾನು ಬಾಲ್ಯದಲ್ಲಿ ಅಪ್ಪನ ಜೊತೆ ಶಿವಣ್ಣ ಮತ್ತು ಅಪ್ಪು ಅವರ ಶೂಟಿಂಗ್​ ಸೆಟ್​ಗೆ ಹೋಗುತ್ತಿದ್ದೆ. ಈಗ ಅವರು ನನ್ನ ಸಿನಿಮಾ ಸೆಟ್​ಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ಸಿನಿಮಾದ ಮೇಕಿಂಗ್​ ನೋಡಿ ಶಿವಣ್ಣ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಅಭಿಷೇಕ್ ಅಂಬರೀಶ್ ಹೇಳಿದರು.

ಬ್ಯಾಡ್ ಮ್ಯಾನರ್ಸ್ ಚಿತ್ರ ಕಮರ್ಷಿಯಲ್ ಕಥೆಯಾಗಿದೆ. ಈ ಚಿತ್ರಕ್ಕಾಗಿ ಅಭಿಷೇಕ್ ಅಂಬರೀಶ್ ಸಾಕಷ್ಟು ತಯಾರಿ ನಡೆಸಿ ಅಭಿನಯಿಸಿದ್ದಾರೆ. ಸುಧೀರ್ ಕೆ ಎಂ ಈ ಚಿತ್ರ ನಿರ್ಮಾಣ ಮಾಡಲಿದ್ದು, ಚರಣ್ ರಾಜ್ ಸಂಗೀತ ಇರಲಿದೆ. ಛಾಯಾಗ್ರಹಕ ಶೇಖರ್ ಕ್ಯಾಮರಾ ವರ್ಕ್, ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ : ಸಪ್ತಪದಿ ತುಳಿಯೋಕೆ ಸಜ್ಜಾದ ಕ್ರೇಜಿ ಸ್ಟಾರ್ ರವಿಚಂದ್ರನ್ ದೊಡ್ಡ ಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.