ETV Bharat / crime

ಬಡತನ, ಅನಾರೋಗ್ಯದಿಂದ ಮನ ನೊಂದು ಸಾವಿನ ಕದ ತಟ್ಟಿದ ಯುವತಿ!

author img

By

Published : Oct 3, 2021, 1:25 AM IST

ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಕರಳು ಹಿಂಡುವಂತ ಘಟನೆ ನಡೆದಿದ್ದು, ತೀವ್ರ ಬಡತನ ಹಾಗೂ ಅನಾರೋಗ್ಯದಿಂದ ಮನ ನೊಂದ ಯುವತಿಯೊರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

young woman Suicide because of poverty and illness in Mysore
ತೀವ್ರ ಬಡತನ, ಅನಾರೋಗ್ಯದಿಂದ ಮನ ನೊಂದು ಸಾವಿನ ಕದ ತಟ್ಟಿದ ಯುವತಿ!

ಮೈಸೂರು: ಬಡತನ, ಅನಾರೋಗ್ಯದಿಂದ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನತಾ ನಗರದಲ್ಲಿ ನಡೆದಿದೆ.
ರಕ್ಷಿತಾ( 20) ಮೃತ ದುರ್ದೈವಿ.

ಆಟೋ ಓಡಿಸಿ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಮಹದೇವ್ ಗ್ಯಾಂಗ್ರಿನ್‌ನಿಂದಾಗಿ ಕಾಲು ಕಳೆದುಕೊಂಡಿದ್ದರು. ಮೃತಳ ತಾಯಿ ಮನೆ ಕೆಲಸ ಮಾಡಿಕೊಂಡಿ ಸಂಸಾರದೂಡುತ್ತಿದ್ದರು. ಕುಟುಂಬ ಆರ್ಥಿಕ ಮುಗ್ಗಟ್ಟನ್ನ ಎದುರಿಸುತ್ತಿದ್ದ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಿತಾ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.