ETV Bharat / city

ಸೋಮುವನ್ನು ಕಂಡರೆ 'ವೇದಾವತಿ'ಗೆ ಎಲ್ಲಿಲ್ಲದ ಪ್ರೀತಿ! ಈ ವಿಡಿಯೋ ನೋಡಿ

author img

By

Published : Jul 15, 2020, 3:24 PM IST

Updated : Jul 15, 2020, 3:49 PM IST

ಮೈಸೂರು ಮೃಗಾಲಯದಲ್ಲಿ ಮಾನವ, ವನ್ಯಜೀವಿ ಬಾಂಧವ್ಯಕ್ಕೆ ಸಾಕ್ಷಿಯಾಗುವಂತಹ ಸನ್ನಿವೇಶವೊಂದು ನಿರ್ಮಾಣವಾಗಿದೆ.

elephant cub
ಆನೆ ಮರಿ ವೇದಾವತಿ

ಮೈಸೂರು: ಮಾನವ, ವನ್ಯಜೀವಿ ಸಂಘರ್ಷ ಆಗಾಗ ನಡೆಯುತ್ತಿರುತ್ತದೆ. ಆದರೆ ಇಲ್ಲಿರುವ ದೃಶ್ಯ ಮಾನವ ಹಾಗೂ ವನ್ಯಜೀವಿಯ ಅನ್ಯೋನ್ಯ ಸಂಬಂಧವನ್ನು ಸೂಚಿಸುತ್ತಿದೆ. ಇದಕ್ಕೆ ಮೈಸೂರು ಮೃಗಾಲಯ ಸಾಕ್ಷಿಯಾಗಿದೆ.

ಎರಡೂವರೆ ತಿಂಗಳ ಹಿಂದೆ ಸಿಕ್ಕ ಹೆಣ್ಣು ಆನೆ ಮರಿಯನ್ನು ಸೋಮು ಎಂಬಾತ ತಂದು ಮೈಸೂರು ಮೃಗಾಲಯದಲ್ಲಿ ಆರೈಕೆ ಮಾಡುತ್ತಿದ್ದಾನೆ. ಅಷ್ಟು ಮಾತ್ರವಲ್ಲ, ಜಾಣ್ಮೆಯಿಂದ ಪ್ರಾಣಿ ಭಾಷೆಯಲ್ಲೇ ಆನೆ ಮರಿಯನ್ನು ಪಳಗಿಸುತ್ತಿದ್ದು, ವೇದಾವತಿ ಎಂದು ಹೆಸರಿಟ್ಟಿದ್ದಾನೆ.

ಆನೆ ಮರಿ ವೇದಾವತಿ

ಪ್ರತಿನಿತ್ಯ 3 ಬಾರಿ ವಾಕ್‌ಗೆ ಕರೆದುಕೊಂಡು ಹೋಗುವ ಸೋಮುವನ್ನು ಕಂಡರೆ ವೇದಾವತಿಗೆ ಅಚ್ಚುಮೆಚ್ಚು. ಸೋಮುವನ್ನು ಬಿಟ್ಟರೆ ಬೇರೆ ಯಾರನ್ನೂ ಕೂಡಾ ಆನೆ ಮರಿ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಫೀಡಿಂಗ್ ಬಾಟಲ್​​ನಿಂದ ಹಾಲು ಕುಡಿಸುವುದು, ಆಹಾರ ತಿನ್ನಿಸೋದು ಸೋಮುವಿನ ಪ್ರತಿದಿನದ ಕಾಯಕವಾಗಿದೆ.

ಇಲ್ಲಿಯವರೆಗೆ ಮೃಗಾಲಯದಲ್ಲಿ 5 ಆನೆ ಮರಿಗಳು ಬಂದಿದ್ದು, ಅವುಗಳನ್ನೂ ಸೋಮು ಆರೈಕೆ ಮಾಡಿದ್ದಾನೆ. ಅದರಲ್ಲಿ ಐಶ್ವರ್ಯ, ಮಾದೇಶ, ಕೊಳ್ಳೇಗಾಲ, ಚಾಮುಂಡಿ ಈಗ ಎತ್ತರಕ್ಕೆ ಬೆಳೆದಿದ್ದು, ವೇದಾವತಿಯೇ ಅತಿ ಚಿಕ್ಕ ಆನೆ ಮರಿಯಾಗಿದೆ.

Last Updated :Jul 15, 2020, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.