ETV Bharat / city

ಚುಂಚನಕಟ್ಟೆಯಲ್ಲಿ ನೆಲೆ ನಿಲ್ಲಲಿದೆ 31 ಅಡಿ ಎತ್ತರದ ಹನುಮಂತನ ಏಕಶಿಲಾ ಮೂರ್ತಿ

author img

By

Published : May 7, 2022, 9:19 AM IST

31 Feet Hieght Monolithic Anjaneya Statue
31 ಅಡಿ ಎತ್ತರದ ಹನುಮಂತನ ಏಕಶಿಲಾ ಮೂರ್ತಿ

31 ಅಡಿ ಏಕ ಶಿಲಾ ಹನುಮಂತನ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ. ಮೈಸೂರಿನ ಕೆ ಆರ್​​ ನಗರದ ಚುಂಚನಕಟ್ಟೆಯಲ್ಲಿ ಈ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.

ಮೈಸೂರು: ಕೆ ಆರ್ ನಗರದ ಚುಂಚನಕಟ್ಟೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಏಕಶಿಲಾ ಹನುಮಂತನ ವಿಗ್ರಹವನ್ನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವೀಕ್ಷಿಸಿ, ಪೂಜೆ ಸಲ್ಲಿಸಿದ್ದಾರೆ. ನಿನ್ನೆ (ಶುಕ್ರವಾರ) ಹನುಮಂತನ ಮೂರ್ತಿಯನ್ನ ಮೈಸೂರಿನಿಂದ ಕೆ ಆರ್ ನಗರದ ಚುಂಚನ ಕಟ್ಟೆಗೆ ಕ್ರೇನ್ ಮೂಲಕ ತೆರೆದ ಲಾರಿಯಲ್ಲಿ ರವಾನೆ ಮಾಡಲಾಗಿದೆ.

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರಿನ ಶಿಲ್ಪಿ ಅರುಣ್ ಮತ್ತು ತಂಡದವರಿಂದ ಈ ಮೂರ್ತಿ ಕೆತ್ತನೆ ಮಾಡಲಾಗಿದೆ. ಉತ್ತರಾಖಂಡದ ಕೇದಾರನಾಥದಲ್ಲಿನ ಶಂಕರಾಚಾರ್ಯರ ಮೂರ್ತಿಯನ್ನ ಕೆತ್ತನೆ ಮಾಡಿದ್ದ ಶಿಲ್ಪಿಯೇ ಈ ಆಂಜನೇಯನ ಮೂರ್ತಿಯನ್ನ ಕೆತ್ತನೆ ಮಾಡಿರುವುದು ವಿಶೇಷವಾಗಿದೆ. ಶಾಸಕ ಸಾ.ರಾ ಮಹೇಶ್ ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಈ ಯೋಜನೆಯನ್ನ ಕೈಗೆತ್ತಿಕೊಳ್ಳಲಾಗಿತ್ತು. ಈ ಮೂರ್ತಿಯನ್ನ ನಿರ್ಮಾಣ ಮಾಡಲು ಸುಮಾರು 40 ಲಕ್ಷ ರೂ. ವೆಚ್ಚ ತಗುಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಮೈಸೂರಿನಲ್ಲಿ ಸಿದ್ಧವಾಗುತ್ತಿದೆ ಪ್ರಧಾನಿ ಒಪ್ಪಿದ ಶಂಕರಾಚಾರ್ಯರ ಪ್ರತಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.