ETV Bharat / city

ಒಂದು ಅವಕಾಶ ಕೊಡಿ, ಸುಳ್ಯದ ಇತಿಹಾಸವನ್ನೇ ಬದಲಾಯಿಸುತ್ತೇನೆ: ಡಿ.ಕೆ. ಶಿವಕುಮಾರ್​

author img

By

Published : Oct 5, 2021, 11:02 PM IST

dk-shivakumar
ಡಿಕೆ ಶಿವಕುಮಾರ್​

ಕನಕಪುರ ನನ್ನ ಒಂದು ಕಣ್ಣು ಇದ್ದ ಹಾಗೆ, ಆದರಂತೆಯೇ ಸುಳ್ಯ ನನ್ನ ಇನ್ನೊಂದು ಕಣ್ಣು. ಒಂದು ಬಾರಿ ಅವಕಾಶ ಕೊಡಿ, ಸುಳ್ಯದ ಸರ್ವತೋಮುಖ ಅಭಿವೃದ್ಧಿಗೆ ಗಮನ ನೀಡುವ ಮೂಲಕ ಸುಳ್ಯದ ಇತಿಹಾಸವನ್ನೇ ಬದಲಾವಣೆ ಮಾಡಿ ತೋರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್​ ಮನವಿ ಮಾಡಿದರು.

ಸುಳ್ಯ: ಕಾಂಗ್ರೆಸ್‌ಗೆ ಒಂದು ಅವಕಾಶ ಕೊಡಿ. ಅಭಿವೃದ್ಧಿಗೆ ಒತ್ತುಕೊಡುವ ಮೂಲಕ ಸುಳ್ಯದ ಇತಿಹಾಸವನ್ನೇ ಬದಲಾವಣೆ ಮಾಡಿ ತೋರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಒಂದು ಅವಕಾಶ ಕೊಡಿ, ಸುಳ್ಯದ ಇತಿಹಾಸವನ್ನೇ ಬದಲಾಯಿಸುತ್ತೇನೆ

ನಗರದ ನ್ಯಾಯಾಲಯಕ್ಕೆ ಇಂದು ಪ್ರಕರಣವೊಂದರ ಸಾಕ್ಷಿ ಹೇಳಲು ಆಗಮಿಸಿ, ನಂತರ ತಾಲೂಕು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಸುಳ್ಯದ ಬಗ್ಗೆ, ಹಾಗೂ ಇಲ್ಲಿನ ಜನತೆಯ ಬಗ್ಗೆ ಒಂದು ಪ್ರತ್ಯೇಕ ಕಾಳಜಿ ಇದೆ. ಕನಕಪುರ ನನ್ನ ಒಂದು ಕಣ್ಣು ಇದ್ದ ಹಾಗೆ, ಆದರಂತೆಯೇ ಸುಳ್ಯ ನನ್ನ ಇನ್ನೊಂದು ಕಣ್ಣು.

ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷ ಇಲ್ಲಿ ಆಡಳಿತ ನಡೆಸುತ್ತಿದ್ದರೂ ಇಲ್ಲಿನ ಸಮಸ್ಯೆಗಳನ್ನು ನಿತ್ಯ ಗಮನಿಸುತ್ತಿದ್ದೇನೆ. ನಮಗೆ ಒಂದು ಬಾರಿ ಅವಕಾಶ ಕೊಡಿ, ಸುಳ್ಯದ ಸರ್ವತೋಮುಖ ಅಭಿವೃದ್ಧಿಗೆ ಗಮನ ನೀಡುವ ಮೂಲಕ ಸುಳ್ಯದ ಇತಿಹಾಸವನ್ನೇ ಬದಲಾವಣೆ ಮಾಡಿ ತೋರಿಸುತ್ತೇನೆ ಎಂದು ಮನವಿ ಮಾಡಿದರು.

ಈ ಸಮಯದಲ್ಲಿ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಪ್ಪಗೌಡ,‌ ಮಾಜಿ ಅಧ್ಯಕ್ಷ ನಳಿನ್‌ಕುಮಾರ್ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.