ETV Bharat / city

ಪಾಲಿಕೆ ಘನತ್ಯಾಜ್ಯ ನಿರ್ವಹಣಾ ಘಟಕದಿಂದ ದುರ್ನಾತ: ಕ್ಲೋಸ್ ಮಾಡುವಂತೆ ನಿವಾಸಿಗಳಿಂದ ಪ್ರತಿಭಟನೆ

author img

By

Published : Jul 24, 2022, 9:56 PM IST

ಪಾಲಿಕೆ ಘನತ್ಯಾಜ್ಯ ನಿರ್ವಹಣೆ ಘಟಕದ ವಿರುದ್ಧ ನಿವಾಸಿಗಳ ಪ್ರತಿಭಟನೆ- ದುರ್ನಾತದಿಂದಾಗಿ ಉಸಿರಾಡಲು ಕಷ್ಟ ಕಷ್ಟ- ಘಟಕ ಮುಚ್ಚುವಂತೆ ಆಗ್ರಹ

Protest by residents of Banashankari 6th cross
ಬನಶಂಕರಿ 6ನೇ ಹಂತದ ನಿವಾಸಿಗಳಿಂದ ಪ್ರತಿಭಟನೆ

ಬೆಂಗಳೂರು: ನಿಯಮ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿರುವ ಲಿಂಗಧೀರನಹಳ್ಳಿಯಲ್ಲಿರುವ ಪಾಲಿಕೆ ಘನತ್ಯಾಜ್ಯ ನಿರ್ವಹಣೆ ಘಟಕದ ವಿರುದ್ಧ, ಬನಶಂಕರಿ 6ನೇ ಹಂತದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಘನತ್ಯಾಜ್ಯ ನಿರ್ವಹಣೆ ಘಟಕದ ಎದುರು ಪ್ರತಿಭಟನೆ ನಡೆಸಿದ ನಿವಾಸಿಗಳು, ಘಟಕವನ್ನು ತಕ್ಷಣ ಕ್ಲೋಸ್ ಮಾಡಬೇಕು ಎಂದು ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಬನಶಂಕರಿ 6ನೇ ಹಂತದ ನಿವಾಸಿಗಳಿಂದ ಪ್ರತಿಭಟನೆ

2 ತಿಂಗಳ ಹಿಂದೆ ಘಟಕ ಪುನಾರಂಭಗೊಂಡಿದೆ. ಆ ನಂತರ ದುರ್ನಾತದಿಂದಾಗಿ ಉಸಿರಾಡಲು ಕಷ್ಟವಾಗುತ್ತಿದೆ. ನೊಣಗಳ ಕಾಟದಿಂದ ಊಟ ತಿಂಡಿ ಮಾಡಲೂ ಸಹ ಸಾಧ್ಯ ಆಗುತ್ತಿಲ್ಲ, ನರಕಯಾತನೆ ಅನುಭವಿಸುತ್ತಿದ್ದೇವೆ. ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸರ್ಕಾರಕ್ಕೆ ನೂರಾರು ಇ-ಮೇಲ್ ಮತ್ತು ಫೋನ್ ಮೂಲಕ ಕಂಪ್ಲೇಂಟ್ ನೀಡಿದರೂ ಪ್ರಯೋಜನವಾಗಿಲ್ಲ. ಯಾವುದೇ ಒಬ್ಬ ಅಧಿಕಾರಿಯಾಗಲಿ ಅಥವಾ ಚುನಾಯಿತ ಜನಪ್ರತಿನಿಧಿಗಳಾಗಲಿ ಈ ಕಡೆ ಮುಖ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೈಕೋರ್ಟ್​ಗೆ ತಪ್ಪು ಮಾಹಿತಿ: ಹೈಕೋರ್ಟ್ ಮತ್ತು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಈ ಘಟಕವನ್ನು ಮುಚ್ಚಬೇಕೆಂದು ಆದೇಶ ನೀಡಿವೆ. ಆದರೆ ಬಿಬಿಎಂಪಿ ಸುಪ್ರೀಂ ಕೋರ್ಟಿಗೆ ತಪ್ಪು ಮಾಹಿತಿಗಳನ್ನು ನೀಡಿ ಘಟಕವನ್ನು ನಡೆಸಲು ಅನುಮತಿ ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಯಾವುದೇ ನಿಯಮಗಳನ್ನು ಪಾಲಿಸದೇ ಕಾಗದದಲ್ಲಿ ನಿಯಮ ಪಾಲಿಸಿದ್ದೇವೆ ಎಂದು ಕೋರ್ಟಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಬಿಬಿಎಂಪಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ವರ್ಷದ ಸಾಧನಾ ಸಮಾವೇಶದ ಸಿದ್ಧತೆಯಲ್ಲಿ ಬಿಜೆಪಿ.. ಬೊಮ್ಮಾಯಿ ಸರ್ಕಾರದ ಮೇಲಿದೆ ಹತ್ತಾರು ವೈಫಲ್ಯಗಳ ಛಾಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.