ETV Bharat / city

ಮೇಲಧಿಕಾರಿ ಕಿರುಕುಳ ಆರೋಪ.. ಡಿಸಿ ಕಚೇರಿ ಎದುರೇ ಫಿನಾಯಲ್ ಕುಡಿದ ಮಹಿಳೆ!

author img

By

Published : Feb 14, 2020, 2:58 PM IST

KN_CTD_01_14_AATMAHATTE_YATNA_AVB_7204336
ಮೇಲಾಧಿಕಾರಿಯಿಂದ ಕಿರುಕುಳ, ಡಿಸಿ ಕಛೇರಿ ಎದುರು ಫಿನಾಯಲ್ ಕುಡಿದ ಮಹಿಳೆ...!

ಕೆಲಸ ಬಿಡಿಸುವ ಬೆದರಿಕೆ, ಸಂಬಳ ಕಡಿಮೆ ಕೊಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಲಕ್ಷ್ಮಿ ಆತ್ಮಹತ್ಯೆಗೆ ನಿರ್ಧಾರ ಮಾಡಲು ಪ್ರಮುಖ ಕಾರಣ. ಅರಣ್ಯ ಇಲಾಖೆ ಅಧಿಕಾರಿ ಸಂದೀಪ್ ನಾಯಕ ವಿರುದ್ಧ ಅಸ್ವಸ್ಥ ಲಕ್ಷ್ಮಿ ಕಿರುಕುಳದ ಆರೋಪ ಮಾಡಿದ್ದಾರೆ.

ಬೆಂಗಳೂರು: ಮಹಿಳೆಯೊಬ್ಬರು ಫಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ.

ಮೇಲಧಿಕಾರಿಯಿಂದ ಕಿರುಕುಳ ಆರೋಪ, ಫಿನಾಯಲ್ ಕುಡಿದ ಮಹಿಳೆ ಅಸ್ವಸ್ಥ!

ಅರಣ್ಯ ಇಲಾಖೆಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ಲಕ್ಷ್ಮಿ ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದವರು. ಅವರನ್ನೀಗ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸ ಬಿಡಿಸುವ ಬೆದರಿಕೆ, ಸಂಬಳ ಕಡಿಮೆ ಕೊಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಲಕ್ಷ್ಮಿ ಆತ್ಮಹತ್ಯೆಗೆ ನಿರ್ಧಾರ ಮಾಡಲು ಪ್ರಮುಖ ಕಾರಣ. ಅರಣ್ಯ ಇಲಾಖೆ ಅಧಿಕಾರಿ ಸಂದೀಪ್ ನಾಯಕ ವಿರುದ್ಧ ಅಸ್ವಸ್ಥ ಲಕ್ಷ್ಮಿ ಕಿರುಕುಳದ ಆರೋಪ ಮಾಡಿದ್ದಾರೆ. ನೊಂದ ಲಕ್ಷ್ಮಿ ಜಿಲ್ಲಾಧಿಕಾರಿಗೆ ದೂರು ನೀಡಲು ಆಗಮಿಸಿದ್ದರು. ಆಗ ಅಧಿಕಾರಿಗಳು ಸ್ಪಂದಿಸದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.