ETV Bharat / city

ಮಂಗಳಾ ಅಂಗಡಿ ಗೆಲುವು ಜನತೆಗೆ ಸಿಕ್ಕಿರುವ ಗೆಲುವಾಗಿದೆ : ಸಚಿವ ಜಗದೀಶ್ ಶೆಟ್ಟರ್

author img

By

Published : May 2, 2021, 8:52 PM IST

Updated : May 2, 2021, 10:43 PM IST

ಬೆಳಗಾವಿ ಜನತೆ ದಿ.ಸುರೇಶ ಅಂಗಡಿಯವರಿಗೆ ನೀಡಿರುವ ಬೆಂಬಲವನ್ನು ಅವರ ಧರ್ಮಪತ್ನಿ ಮಂಗಳಾ ಅಂಗಡಿಗೂ ನೀಡಿದ್ದಾರೆ. ಹೀಗಾಗಿ, ಬೆಳಗಾವಿ ಮತದಾರಿಗೆ ಪಕ್ಷದ ಹಾಗೂ ನನ್ನ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ..

Jagadeesh Shetter
Jagadeesh Shetter

ಬೆಳಗಾವಿ : ಮಂಗಳಾ ಅಂಗಡಿ ಗೆಲುವು ಜನತೆಗೆ ಸಿಕ್ಕಿರುವ ಗೆಲುವಾಗಿದೆ. ಕೇಂದ್ರದ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವಕ್ಕೆ ಬೆಳಗಾವಿ ಜನತೆ ಬೆಂಬಲಿಸಿದ್ದಾರೆ ಎಂದು ಬೀಗರು ಆಗಿರುವ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ದಿ. ಸುರೇಶ ಅಂಗಡಿ ಅವರ ನಿವಾಸದಲ್ಲಿ ಈಟಿವಿ ಭಾರತ ಪ್ರತಿ‌ನಿಧಿಯೊಂದಿಗೆ ಮಾತನಾಡಿದ ಅವರು, ಸುರೇಶ ಅಂಗಡಿ ಅವರು ಮಾಡಿರುವ ಕೆಲಸಗಳು ಹಾಗೂ ಸಾಧನೆಗೆ ಜನರು ಮನ್ನಣೆ ನೀಡಿದ್ದಾರೆ‌.

ಮಂಗಳಾ ಅಂಗಡಿ ಗೆಲುವು ಜನತೆಗೆ ಸಿಕ್ಕಿರುವ ಗೆಲುವಾಗಿದೆ : ಸಚಿವ ಜಗದೀಶ್ ಶೆಟ್ಟರ್

ರಾಷ್ಟ್ರದ ನೇತೃತ್ವದ ವಹಿಸಿದ್ದ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವಕ್ಕೆ ಜನರು ಬೆಂಬಲ ನೀಡಿದ್ದಾರೆ.

ಬೆಳಗಾವಿ ಜನತೆ ದಿ.ಸುರೇಶ ಅಂಗಡಿಯವರಿಗೆ ನೀಡಿರುವ ಬೆಂಬಲವನ್ನು ಅವರ ಧರ್ಮಪತ್ನಿ ಮಂಗಳಾ ಅಂಗಡಿಗೂ ನೀಡಿದ್ದಾರೆ. ಹೀಗಾಗಿ, ಬೆಳಗಾವಿ ಮತದಾರಿಗೆ ಪಕ್ಷದ ಹಾಗೂ ನನ್ನ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

Last Updated : May 2, 2021, 10:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.