ETV Bharat / business

ಸುರಕ್ಷಿತ ಪಾವತಿ ವ್ಯವಸ್ಥೆಗೆ ಒತ್ತು ನೀಡಬೇಕಿದೆ: ಆರ್‌ಬಿಐ ಗವರ್ನರ್​

author img

By

Published : Jan 16, 2021, 4:34 PM IST

ಅತ್ಯಾಧುನಿಕ ರಾಷ್ಟ್ರೀಯ ಪೇಮೆಂಟ್ ಮೂಲಸೌಕರ್ಯಗಳನ್ನು ಬಲಪಡಿಸಲು ಆರ್​ಬಿಐ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

RBI Guv
ಆರ್​ಬಿಐ ಗವರ್ನರ್

ಚೆನ್ನೈ: ದೇಶದ ಆರ್ಥಿಕ ಸ್ಥಿರತೆ ಮತ್ತು ದೃಢತೆಯನ್ನು ಎಲ್ಲ ಪಾಲುದಾರರು ಸಂರಕ್ಷಿಸಿ ಪೋಷಿಸಬೇಕಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್​ ದಾಸ್ ಹೇಳಿದ್ದಾರೆ.

ವರ್ಚ್ಯುವಲ್ ಪ್ಲಾಟ್‌ಫಾರ್ಮ್ ಮೂಲಕ 39ನೇ ನಾನಿ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ರಾಷ್ಟ್ರೀಯ ಪೇಮೆಂಟ್​ ಮೂಲಸೌಕರ್ಯ ಜಾರಿಗೆ ತರಲು ಕೇಂದ್ರ ಬ್ಯಾಂಕ್ ತನ್ನ ನಿರ್ದೇಶನಗಳನ್ನು ನೀಡಿದೆ. ಸುರಕ್ಷಿತ, ದಕ್ಷತೆ ಮತ್ತು ಪರಿಣಾಮಕಾರಿಯಾಗಿ ದೃಢವಾದ ಪಾವತಿಗಳ ವಾತಾವರಣದ ವ್ಯವಸ್ಥೆ ನಿರ್ಮಾಣವಾಗಲಿ ಎಂದರು.

ಹಣಕಾಸಿನ ಸ್ಥಿರತೆ ರಕ್ಷಿಸುವ ಮತ್ತು ಕಾಪಾಡುವ ಈ ಹೊಸ ಮಾರ್ಗಗಳನ್ನು ಬಳಸಿಕೊಳ್ಳಲು ನಿಯಂತ್ರಿತ ಘಟಕಗಳ ವೇಗ ಹೆಚ್ಚಿಸುವಂತಹ ವಾತಾವರಣವನ್ನು ಒದಗಿಸಲು ರಿಸರ್ವ್ ಬ್ಯಾಂಕ್ ತೊಡಗಿಸಿಕೊಳ್ಳುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಭಾರತೀಯ ಉಕ್ಕಿಗೆ ಚೀನಾದಿಂದ ಭರ್ಜರಿ ಬೇಡಿಕೆ: ದಾಖಲೆಯ ಮಟ್ಟದಲ್ಲಿ ಐ'ರನ್' ದರ

ಸಂಭಾವ್ಯ ಅಪಾಯಗಳನ್ನು ಮೊದಲೇ ಗುರುತಿಸಲು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಮ್ಮ ಆಂತರಿಕ ರಕ್ಷಣೆ ವಿಭಾಗ ಬಲಪಡಿಸುವ ಅಗತ್ಯವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.