ಹೊಸಪೇಟೆ: ಗಣೇಶ ಮೂರ್ತಿ ನಿಮಜ್ಜನದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು

author img

By

Published : Sep 11, 2021, 11:01 AM IST

Updated : Sep 11, 2021, 11:36 AM IST

ಗಣೇಶ ವಿಗ್ರಹ ನಿಮಜ್ಜನ

ಗಣಪತಿ ವಿಗ್ರಹ ನಿಮಜ್ಜನ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

ಹೊಸಪೇಟೆ(ವಿಜಯನಗರ): ಗಣೇಶ ಮೂರ್ತಿ ನಿಮಜ್ಜನ ವೇಳೆ ಬಾಲಕನೊಬ್ಬ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಎಂ.ಬಿ. ಅಯ್ಯನಹಳ್ಳಿಯಲ್ಲಿ ಶುಕ್ರವಾರ ಸಂಭವಿಸಿದೆ.

ಸಂತೋಷ್ (11) ಮೃತ ಬಾಲಕನಾಗಿದ್ದಾನೆ. ಸಂತೋಷ್​ ನಿನ್ನೆ ತನ್ನ ಸ್ನೇಹಿತರೊಂದಿಗೆ ಸೇರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ. ಮಧ್ಯಾಹ್ನದ ವೇಳೆಗೆ ವಿಗ್ರಹವನ್ನು ಊರಿನ ಕೃಷಿ ಹೊಂಡಕ್ಕೆ ಬಿಡಲು ತೆರಳಿದ್ದಾಗ ಆತ ಕಾಲು ಜಾರಿ ಬಿದ್ದು, ಮೃತಪಟ್ಟಿದ್ದಾನೆ.

ಈ ಕುರಿತು ಕಾನಾ ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪಣಂಬೂರು ಬೀಚ್ ಬಳಿ ಬೋಟ್ ಅವಘಡ.. ಓರ್ವ ಮೀನುಗಾರ ಸಮುದ್ರಪಾಲು, ನಾಲ್ವರ ರಕ್ಷಣೆ

Last Updated :Sep 11, 2021, 11:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.