ಪಣಂಬೂರು ಬೀಚ್ ಬಳಿ ಬೋಟ್ ಅವಘಡ.. ಓರ್ವ ಮೀನುಗಾರ ಸಮುದ್ರಪಾಲು, ನಾಲ್ವರ ರಕ್ಷಣೆ

author img

By

Published : Sep 11, 2021, 10:06 AM IST

Updated : Sep 11, 2021, 10:24 AM IST

ಪಣಂಬೂರು ಬೀಚ್ ಬಳಿ ಬೋಟ್

ಮಂಗಳೂರಿನ ಪಣಂಬೂರು ಬೀಚ್​ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಗಿಲ್‌ನೆಟ್ ಬೋಟ್‌ವೊಂದು ಭಾರಿ ಬಿರುಗಾಳಿಗೆ ಸಿಲುಕಿ ಓರ್ವ ಮೀನುಗಾರ ಸಮುದ್ರ ಪಾಲಾಗಿದ್ದಾನೆ.

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಗಿಲ್‌ನೆಟ್ ಬೋಟ್‌ವೊಂದು ಭಾರಿ ಬಿರುಗಾಳಿಗೆ ಸಿಲುಕಿ ಓರ್ವ ಮೀನುಗಾರ ಸಮುದ್ರ ಪಾಲಾಗಿರುವ ಘಟನೆ ಪಣಂಬೂರು ಬೀಚ್ ಬಳಿ ನಡೆದಿದೆ.‌

ನಾಪತ್ತೆಯಾದ ಮೀನುಗಾರನನ್ನು ಕಸಬಾ ಬೆಂಗರೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ. ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಈ ತಂಡದ ಬೆಂಗರೆಯ ಅಝೀಝ್, ಇಮ್ತಿಯಾಝ್, ಸಿನಾನ್, ಫೈರೋಝ್ ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಇದನ್ನೂ ಓದಿ: ಸಾಲ ವಾಪಸ್​ ಕೇಳಿದಕ್ಕೆ ಸ್ನೇಹಿತನಿಂದಲೇ ಮಾರಣಾಂತಿಕ ಹಲ್ಲೆ

ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಮೀನುಗಾರ ಶರೀಫ್​ಗಾಗಿ ಶೋಧ ಕಾರ್ಯ ಮುಂದುವರಿದಿದೆ.

Last Updated :Sep 11, 2021, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.