ETV Bharat / bharat

ಭಾರತ ವಿಶ್ವದಲ್ಲೇ ಅತ್ಯುನ್ನತ ಆರ್ಥಿಕ ಪರಿಸ್ಥಿತಿ ಹೊಂದಿದೆ: ನಿರ್ಮಲಾ ಸೀತಾರಾಮನ್​

author img

By

Published : Feb 1, 2023, 11:41 AM IST

ಕೇಂದ್ರ ಬಜೆಟ್ 2023ರ ಮೂರು ಅಂಶಗಳು - ಜನರಿಗೆ ಉತ್ತಮ ಅವಕಾಶ-ಯುವಕರಿಗೆ ಹೆಚ್ಚಿನ ಆದ್ಯತೆ - ಎಲ್ಲರಿಗೂ ನೌಕರಿ.

Union Budget 2023
ನಿರ್ಮಲಾ ಸೀತಾರಾಮನ್​

ನವದೆಹಲಿ: ವಿಶ್ವದಲ್ಲೇ ಅತ್ಯುನ್ನತ ಆರ್ಥಿಕ ಪರಿಸ್ಥಿತಿ ದೇಶಕ್ಕಿದೆ. ಶೇ 7 ರಷ್ಟು ಜಿಡಿಪಿ ನಿರೀಕ್ಷಿಸಲಾಗಿದೆ. ಇದು ಎಲ್ಲ ರಾಷ್ಟ್ರಗಳಿಗಿಂತ ಮುಂದಿದೆ ಎಂದು ತೋರಿಸುತ್ತಿದೆ. ಎಲ್ಲ ರಂಗಗಳಲ್ಲೂ ಸರ್ಕಾರ ಉತ್ತಮ ಸಾಧನೆ ಮಾಡಿದೆ. ವಿಶ್ವ ಆರ್ಥಿಕತೆಯಲ್ಲಿ ಭಾರತ ಮಿಂಚುತ್ತಿದೆ. 126 ಲಕ್ಷ ಕೋಟಿ ರೂಪಾಯಿ ಯುಪಿಎ ವ್ಯವಹಾರ ನಡೆದಿದೆ. 11,700 ಕೋಟಿ ಟಾಯ್ಲೆಟ್​ ನೀಡಿದ್ದೇವೆ. 220 ಕೋಟಿ ವ್ಯಾಕ್ಸಿನೇಷನ್​ ಮಾಡಿದ್ದೇವೆ. 44 ಕೋಟಿ ಜನಧನ ಖಾತೆ, 2.2 ಲಕ್ಷ ಕೋಟಿ ಯಷ್ಟು ಹಣವನ್ನು ರೈತರಿಗೆ ನೀಡಿದ್ದೇವೆ ಎಂದು ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್​ ಹೇಳಿದರು.

ವಿಶ್ವ ಆರ್ಥಿಕತೆಯಲ್ಲಿ ಭಾರತ ಮಿಂಚುತ್ತಿದೆ: 126 ಲಕ್ಷ ಕೋಟಿ ಯುಪಿಎ ವ್ಯವಹಾರ ನಡೆದಿದೆ. 11,700 ಕೋಟಿ ಟಾಯ್ಲೆಟ್​ ನೀಡಿದ್ದೇವೆ. 220 ಕೋಟಿ ವ್ಯಾಕ್ಸಿನೇಷನ್​ ಮಾಡಿದ್ದೇವೆ. 44 ಕೋಟಿ ಜನಧನ ಖಾತೆ. 2.2 ಲಕ್ಷ ಕೋಟಿ ಯಷ್ಟು ಹಣವನ್ನು ರೈತರಿಗೆ ನೀಡಿದ್ದೇವೆ ಎಂದು ಸೀತಾರಾಮನ್​ ಹೇಳಿದ್ದಾರೆ.

ಮೂರು ಅಂಶಗಳು:

  • ಜನರಿಗೆ ಉತ್ತಮ ಅವಕಾಶ
  • ಯುವಕರಿಗೆ ಹೆಚ್ಚಿನ ಆದ್ಯತೆ
  • ಎಲ್ಲರಿಗೂ ನೌಕರಿ

ಕೋವಿಡ್‌ನಿಂದಾಗಿ ಜಾಗತಿಕವಾಗಿ ನಿಧಾನಗತಿಯ ನಡುವೆಯೂ ಭಾರತದ ಬೆಳವಣಿಗೆ ಇದೆ. ಎಲ್ಲ ಅಂತ್ಯೋದಯ ಮನೆಗಳಿಗೆ ಉಚಿತ ಆಹಾರ ಧಾನ್ಯ ಹಾಗೂ ಎಲ್ಲರನ್ನು ಆರ್ಥಿಕ ಸದೃಢರನ್ನಾಗಿ ಮಾಡುವುದು ನಮ್ಮ ಗುರಿ ಎಂದರು

ಕರಕುಶಲ ಕರ್ಮಿಗಳಿಗೆ ನೆರವು: ಕರಕುಶಲ ಕರ್ಮಿಗಳಿಗೆ ನೂತನ ಯೋಜನೆ, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿ ಮಾಡಲಾಗುವುದು. ಆತ್ಮನಿರ್ಭರ್​ ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ನೆರವು. ಪಿಎಂ ವಿಕಾಸ್​ ಹೊಸ ಯೋಜನೆ ಜಾರಿ.

ವಿಶ್ವಕ್ಕೆ ಭಾರತ ಮಾದರಿ: ಜಗತ್ತು ಭಾರತದ ಮಾದರಿಯನ್ನು ಒಪ್ಪಿಕೊಳ್ಳುತ್ತಿದೆ. ಭಾರತ ಆರ್ಥಿಕ, ರಾಜಕೀಯ, ಸ್ವಾವಲಂಬಿಯಾಗಿ ಬೆಳೆಯುತ್ತಿದೆ. ವಿಪಕ್ಷಗಳು ತಮ್ಮ ಅತೃಪ್ತಿಯನ್ನು ಸರ್ಕಾರದ ವಿರುದ್ಧ ತೋರಿಸಲಿ ಹೊರತಾಗಿ, ದೇಶದ ಅಭಿವೃದ್ಧಿಯಲ್ಲಿ ಅಲ್ಲ. ದೇಶದ ಅಭ್ಯುದಯವನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ಇದು ಅತ್ಯುತ್ತಮ ಬಜೆಟ್ ಆಗಲಿದೆ. ಬಡವರ, ಮಧ್ಯಮ ವರ್ಗದವರ ಪರವಾದ ಬಜೆಟ್ ಇದಾಗಿರಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಭರವಸೆ ವ್ಯಕ್ತಪಡಿಸಿದರು.

ಬಜೆಟ್​ ಆರ್ಥಿಕತೆಗೆ ಸಹಕಾರಿ: ಭಾರತದ ಆರ್ಥಿಕತೆಯು ಶೇ 6.8 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಜನಪರವಾದ ಬಜೆಟ್ ಆಗಿರಲಿದ್ದು, ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬಜೆಟ್​ನಲ್ಲಿ ಸಪ್ತ ಮಂತ್ರ: 7 ಅಂಶಗಳ ಆಧಾರದ ಮೇಲೆ ಬಜೆಟ್​ ಮಂಡನೆ ಮಾಡಲಾಗಿದೆ. ಕೃಷಿಯಲ್ಲಿ ಸ್ಟಾರ್ಟಪ್​ಗಳಿಗೆ ವಿಶೇಷ ಆದ್ಯತೆ, ಹಸಿರುಕ್ರಾಂತಿ, ಸರ್ವರನ್ನ ಒಳಗೊಂಡ ಬೆಳವಣಿಗೆ, ಸಿರಿಧಾನ್ಯಗಳ ಸಂಶೋಧನಾ ಕೇಂದ್ರ, ಶ್ರೀ ಅನ್ನ ಗೋಧಿ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ರೂಪಿಸಲಾಗಿದೆ. ಹೈದರಾಬಾದ್​ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಆರಂಭ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದರು.

ಇದನ್ನೂ ಓದಿ: ಯೂನಿಯನ್​ ಬಜೆಟ್​ 2023: ಬಜೆಟ್ ಮಂಡನೆಗೆ ಕ್ಷಣಗಣನೆ.. ಏರಿಕೆ ಹಾದಿ ಹಿಡಿದ ಭಾರತೀಯ ಷೇರು ಮಾರುಕಟ್ಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.