ಚೆನ್ನೈ: ಕೊಯಮತ್ತೂರಿನಲ್ಲಿ ರೈಲು ಡಿಕ್ಕಿ ಹೊಡೆದು ಗಾಯಗೊಂಡಿದ್ದ ಕಾಡಾನೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದೆ.
ಕೊಯಮತ್ತೂರಿನ ನವಕ್ಕರೈನಲ್ಲಿ ಸೋಮವಾರ ತಿರುವನಂತಪುರಂ-ಚೆನ್ನೈ ಎಕ್ಸ್ಪ್ರೆಸ್ ಈ ಆನೆಗೆ ಡಿಕ್ಕಿ ಹೊಡೆದಿತ್ತು, ಪರಿಣಾಮ 28 ವರ್ಷದ ಈ ಗಂಡು ಕಾಡು ಆನೆ ಗಂಭೀರ ಗಾಯಗೊಂಡಿತ್ತು.
ಇದನ್ನೂ ಓದಿ: ತಮಿಳುನಾಡು: ರೈಲು ಡಿಕ್ಕಿ ಹೊಡೆದು ಆನೆ ಸ್ಥಿತಿ ಗಂಭೀರ
ಆನೆಯನ್ನು ರಕ್ಷಿಸಿ ಸಡಿವಯಾಲ್ ಕುಮ್ಕಿ ಆನೆ ಶಿಬಿರಕ್ಕೆ ಅರಣ್ಯ ಅಧಿಕಾರಿಗಳು ವರ್ಗಾಯಿಸಿ ಚಿಕಿತ್ಸೆ ನೀಡುತ್ತಿದ್ದರು. ಆನೆ ಮೂರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿತ್ತು. ಆದರೆ, ಇಂದು ಚಿಕಿತ್ಸೆಯ ಸಮಯದಲ್ಲಿ ಸಾವಿಗೀಡಾಗಿದೆ.