ETV Bharat / bharat

ಗನ್​ ಜಪ್ತಿಗೆ ಹೋದಾಗ ಪೊಲೀಸರತ್ತ ಗುಂಡಿನ ದಾಳಿ: ಆರೋಪಿ ಮೇಲೆ ಪ್ರತಿದಾಳಿ, ಕಾಲಿಗೆ ಗುಂಡೇಟು

author img

By

Published : Mar 7, 2023, 4:01 PM IST

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಪೊಲೀಸರು ಮತ್ತು ಕೊಲೆ ಆರೋಪಿ ನಡುವೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ.

tamil-nadu-murder-suspect-opens-fire-at-police-with-chinese-gun-cops-shoot-him-in-self-defence
ಗನ್​ ಜಪ್ತಿಗೆ ಹೋದಾಗ ಪೊಲೀಸರತ್ತ ಗುಂಡಿನ ದಾಳಿ: ಆರೋಪಿ ಮೇಲೆ ಪ್ರತಿದಾಳಿ, ಕಾಲಿಗೆ ಗುಂಡೇಟು

ಕೊಯಮತ್ತೂರು (ತಮಿಳುನಾಡು): ಕೊಲೆ ಪ್ರಕರಣದ ಆರೋಪಿಯೋರ್ವ ಪೊಲೀಸ್​​ ಸಬ್​ ಇನ್‌ಸ್ಪೆಕ್ಟರ್​​ ಮೇಲೆ ಗುಂಡಿನ ದಾಳಿ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಇದೇ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಇದರಿಂದ ಆರೋಪಿಯು ಕಾಲಿಗೆ ಗುಂಡೇಟು ತಲುಗಿ ಆಸ್ಪತ್ರೆ ಸೇರಿದ್ದಾನೆ.

ಇದನ್ನೂ ಓದಿ: ಗುಂಪುಗಳ ನಡುವೆ ಘರ್ಷಣೆ: ಕೋಲು ಮತ್ತು ರಾಡ್​ಗಳಿಂದ ಹಲ್ಲೆ​

ಎರಡು ವಾರಗಳ ಹಿಂದೆ ಎರಡು ಗ್ಯಾಂಗ್‌ಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಿಂದ ಸತ್ಯಪಾಂಡಿ ಎಂಬಾತನ ಹತ್ಯೆಗೀಡಾಗಿದ್ದ. ನಂತರ ಪ್ರಕರಣದ ಆರೋಪಿಯಾದ ಸ್ಥಳೀಯ ಗ್ಯಾಂಗ್​ಸ್ಟರ್​ ಸಂಜಯ್ ರಾಜ್​ ಎಂಬಾತ ತಾನೇ ಬಂದು ಚೆನ್ನೈ ಕೋರ್ಟ್‌ಗೆ ಶರಣಾಗತನಾಗಿದ್ದ. ಆಗ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಂಜಯ್‌ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.

ಪೊಲೀಸ್​ ವಿಚಾರಣೆಯಲ್ಲಿ ಆರೋಪಿಯು ಹತ್ಯೆ ಬಳಸಿದ ಗನ್ ​ಅನ್ನು ಅಪರಾಧದ ಸ್ಥಳದಲ್ಲಿ ಬಚ್ಚಿಟ್ಟಿರುವುದಾಗಿ ಬಾಯ್ಬಿಟ್ಟಿದ್ದ. ಹೀಗಾಗಿ ಈ ಗನ್​ಅನ್ನು ವಶಪಡಿಸಿಕೊಳ್ಳಲು ಮಂಗಳವಾರ ಬೆಳಗ್ಗೆ ಕೊಯಮತ್ತೂರಿನ ಪಾಪನಾಯಕನ್‌ಪಾಳ್ಯಂ ಸಮೀಪದ ಘಟನಾ ಸ್ಥಳಕ್ಕೆ ಆರೋಪಿ ಸಂಜಯ್‌ನನ್ನು ಕರೆ ತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರತ್ತ ಗುಂಡು ಹಾಕಿಸಿದ ಆರೋಪಿ: ಕೊಲೆಯಾದ ಸ್ಥಳದಲ್ಲಿ ಪೊಲೀಸರು ಬಚ್ಚಿಟ್ಟ ಬಂದೂಕನ್ನು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ, ಬಂದೂಕು ಇರುವ ಸ್ಥಳವನ್ನು ಅರಿತುಕೊಂಡ ಆರೋಪಿ ಸಂಜಯ್, ಆ ಬಂದೂಕನ್ನೇ ಕೈಗೆ ತೆಗೆದುಕೊಂಡು ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ಸಬ್​ ಇನ್ಸ್​ಪೆಕ್ಟರ್ ಚಂದ್ರಶೇಖರ್ ಮೇಳೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಎಸ್ಐ ಮತ್ತು ಯಾವುದೇ ಪೊಲೀಸ್​ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ.

ಮತ್ತೊಂದೆಡೆ, ಪೊಲೀಸರು ತಮ್ಮ ಆತ್ಮರಕ್ಷಣೆ ನಿಟ್ಟನಲ್ಲಿ ಪ್ರತಿ ದಾಳಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಗ್ಯಾಂಗ್​ಸ್ಟರ್ ಸಂಜಯ್​ ಎಡಗಾಲಿಗೆ ಗುಂಡು ತಗುಲಿದೆ. ಇದರಿಂದ ಆರೋಪಿ ತನ್ನ ಕೈಯಲ್ಲಿ ಬಂದೂಕು ಕೆಳಗಡೆ ಎಸೆದು ಕುಸಿದು ಬಂದಿದ್ದಾನೆ. ನಂತರ ಆತನನ್ನು ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೈನೀಸ್ ಮಾಡೆಲ್ ಬಂದೂಕುಗಳು: ಆರೋಪಿ ಸಂಜಯ್ ಎರಡು ಚೀನಾದಲ್ಲಿ ನಿರ್ಮಿತ ಗನ್​ ಬಂದೂಕುಗಳನ್ನು ಹೊಂದಿದ್ದ. ಚೆನ್ನೈನಲ್ಲಿ ಈಗಾಗಲೇ ಆತನಿಂದ ಒಂದು ಬಂದೂಕು ವಶಪಡಿಸಿಕೊಳ್ಳಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ಬಚ್ಚಿಟ್ಟಿದ್ದ ಬಂದೂಕು ಎರಡನೆಯದು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪೊಲೀಸರ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ಆರೋಪಿ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇದೇ ವೇಳೆ ಈ ಚೈನೀಸ್ ಮಾಡೆಲ್ ಬಂದೂಕಗಳನ್ನು ಈ ಸ್ಥಳೀಯ ಗ್ಯಾಂಗ್​ಸ್ಟರ್​ಗೆ ಸಿಕ್ಕಿದ್ದು ಹೇಗೆ?, ಈ ಚೀನಾ ಶಸ್ತ್ರಾಸ್ತ್ರಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆಯೇ?, ಈ ಚೀನಾ ಬಂದೂಕುಗಳನ್ನು ಖರೀದಿಸಿದವರು ಯಾರು ಎಂಬುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪೊಲೀಸ್ ಕೇಸ್​ಗೆ ಹೆದರಿ ತಾಳಿ ಕಟ್ಟಿದವನು ರಿಜಿಸ್ಟರ್ ಮ್ಯಾರೇಜ್ ಮಾಡ್ಕೋ ಎಂದಾಗ ನಾಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.