ETV Bharat / bharat

National Mathematics Day: ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಹಾಗೂ ಈ ದಿನದ ಮಹತ್ವ

author img

By

Published : Dec 22, 2021, 12:22 PM IST

National Mathematics Day: ಗಣಿತ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು. ದೇಶದ ಯುವ ಪೀಳಿಗೆಯಲ್ಲಿ ಗಣಿತ ಕಲಿಯುವ ಕುರಿತು ಸಕಾರಾತ್ಮಕ ಮನೋಭಾವವನ್ನು ಪ್ರೇರೇಪಿಸುವುದಾಗಿದೆ.

National Mathematics Day
ರಾಷ್ಟ್ರೀಯ ಗಣಿತ ದಿನ

ಭಾರತೀಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ರಾಮಾನುಜನ್ ಅವರು 1887ರ ಡಿಸೆಂಬರ್ 22ರಂದು ಜನಿಸಿದ್ದರು. 2012ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡಿಸೆಂಬರ್ 22ನ್ನು ರಾಷ್ಟ್ರೀಯ ಗಣಿತ ದಿನವೆಂದು ಘೋಷಿಸಿದ್ದರು.

ರಾಷ್ಟ್ರೀಯ ಗಣಿತ ದಿನದ ಮಹತ್ವ: ಗಣಿತ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು. ದೇಶದ ಯುವ ಪೀಳಿಗೆಯಲ್ಲಿ ಗಣಿತ ಕಲಿಯುವ ಕುರಿತು ಸಕಾರಾತ್ಮಕ ಮನೋಭಾವವನ್ನು ಪ್ರೇರೇಪಿಸುವುದು. ಇದಕ್ಕಾಗಿ ಹಲವಾರು ಕ್ರಮಗಳನ್ನು ಕೂಡಾ ತೆಗೆದುಕೊಳ್ಳಲಾಗಿದೆ.

ಈ ದಿನದಂದು ಗಣಿತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಬಿರಗಳ ಮೂಲಕ ತರಬೇತಿಯನ್ನು ನೀಡಲಾಗುತ್ತದೆ ಮತ್ತು ಗಣಿತ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಸಂಶೋಧನೆಗಾಗಿ ಬೋಧನೆ - ಕಲಿಕಾ ಸಾಮಗ್ರಿಗಳ (ಟಿಎಲ್‌ಎಂ) ಅಭಿವೃದ್ಧಿ, ಉತ್ಪಾದನೆ ಮತ್ತು ಪ್ರಸಾರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ.

ರಾಷ್ಟ್ರೀಯ ಗಣಿತ ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಭಾರತದ ವಿವಿಧ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಇಂಟರ್​ನ್ಯಾಷನಲ್ ಸೊಸೈಟಿ ಯುನೆಸ್ಕೋ (ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಶನ್) ಮತ್ತು ಭಾರತ ಕೂಡ ಗಣಿತ ಕಲಿಕೆ ಮತ್ತು ತಿಳಿವಳಿಕೆಯನ್ನು ಹರಡಲು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ.

ಇದರೊಂದಿಗೆ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರದಲ್ಲಿ ಶಿಕ್ಷಣ ನೀಡಲು ಮತ್ತು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳಿಗೆ ಮತ್ತು ಕಲಿಯುವವರಿಗೆ ಜ್ಞಾನವನ್ನು ಹರಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭಾರತದ ಎಲ್ಲ ರಾಜ್ಯಗಳು ರಾಷ್ಟ್ರೀಯ ಗಣಿತ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಗಣಿತದ ರಸಪ್ರಶ್ನೆಗಳನ್ನು ನಡೆಸಲಾಗುತ್ತದೆ. ಗಣಿತ ಪ್ರತಿಭೆಗಳು ಮತ್ತು ಭಾರತದಾದ್ಯಂತದ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ.

ಶ್ರೀನಿವಾಸ ರಾಮಾನುಜನ್ ಯಾರು?

ಔಪಚಾರಿಕ ಶಿಕ್ಷಣದ ಕೊರತೆಯ ಹೊರತಾಗಿಯೂ ಶ್ರೀನಿವಾಸ ರಾಮಾನುಜನ್ ತಮ್ಮ 12ನೇ ವಯಸ್ಸಿನಲ್ಲಿ, ಅವರು ತ್ರಿಕೋನಮಿತಿಯಲ್ಲಿ (trigonometry) ಉತ್ತಮ ಸಾಧನೆ ತೋರಿದರು ಮತ್ತು ಸ್ವತಃ ಅನೇಕ ಪ್ರಮೇಯಗಳನ್ನು (theorems) ಅಭಿವೃದ್ಧಿಪಡಿಸಿದರು.

1904ರಲ್ಲಿ ಮಾಧ್ಯಮಿಕ ಶಾಲೆಯನ್ನು ಮುಗಿಸಿದ ನಂತರ, ರಾಮಾನುಜನ್ ಕುಂಬಕೋಣಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನಕ್ಕೆ ಅರ್ಹರಾದರು. ಆದರೆ, ಇತರ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡದ ಕಾರಣ ಅವರಿಗೆ ಅದನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

14ನೇ ವಯಸ್ಸಿನಲ್ಲಿ ರಾಮಾನುಜನ್ ಮನೆಯಿಂದ ಓಡಿ ಹೋಗಿ ಮದ್ರಾಸ್‌ನ ಪಚೈಯಪ್ಪ ಕಾಲೇಜಿಗೆ ಸೇರಿಕೊಂಡರು. ಅಲ್ಲಿ ಅವರು ಉಳಿದ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗದೇ, ಗಣಿತಶಾಸ್ತ್ರದಲ್ಲಿ ಮಾತ್ರ ಉತ್ತಮ ಸಾಧನೆ ಮಾಡುತ್ತಾರೆ. ಇದರಿಂದಾಗಿ ಅವರಿಗೆ ಫೆಲೋ ಆಫ್ ಆರ್ಟ್ಸ್ ಪದವಿಯನ್ನು ಪಡೆಯಲು ಸಾಧ್ಯವಾಗಲಿಲ್ಲ.

ತೀವ್ರ ಬಡತನದಲ್ಲಿ ವಾಸಿಸುತ್ತಿದ್ದ ರಾಮಾನುಜನ್ ನಂತರ ಗಣಿತಶಾಸ್ತ್ರದಲ್ಲಿ ಸ್ವತಂತ್ರ ಸಂಶೋಧನೆ ನಡೆಸಿದರು.

ರಾಮಾನುಜನ್ ಶೀಘ್ರದಲ್ಲೇ ಚೆನ್ನೈನ ಗಣಿತ ವಲಯಗಳಲ್ಲಿ ಗಮನ ಸೆಳೆದರು. 1912ರಲ್ಲಿ ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿಯ ಸಂಸ್ಥಾಪಕ ರಾಮಸ್ವಾಮಿ ಅಯ್ಯರ್ ಅವರು ಶ್ರೀನಿವಾಸ ರಾಮಾನುಜನ್ ಅವರಿಗೆ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಗುಮಾಸ್ತ ಸ್ಥಾನವನ್ನು ಪಡೆಯಲು ಸಹಾಯ ಮಾಡಿದರು.

ರಾಮಾನುಜನ್ ನಂತರ ತನ್ನ ಕೆಲಸವನ್ನು ಬ್ರಿಟಿಷ್ ಗಣಿತ ತಜ್ಞರಿಗೆ ಕಳುಹಿಸಲು ಪ್ರಾರಂಭಿಸುತ್ತಾರೆ. 1913ರಲ್ಲಿ ಕೇಂಬ್ರಿಡ್ಜ್ ಮೂಲದ ಜಿಹೆಚ್ ಹಾರ್ಡಿ ಅವರು ರಾಮಾನುಜನ್ ಅವರಿಗೆ ಪತ್ರ ಬರೆದು, ರಾಮಾನುಜನ್ ಅವರ ಪ್ರಮೇಯಗಳು ಮತ್ತು ಇನ್ಫಿನಿಟ್ ಸರಣಿಗಳಿಗೆ (infinite series) ಸಂಬಂಧಿಸಿದ ಕೆಲಸಗಳಿಂದ ಪ್ರಭಾವಿತರಾದ ಹಾರ್ಡಿ ಅವರನ್ನು ಲಂಡನ್‌ಗೆ ಕರೆದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು: ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

1914ರಲ್ಲಿ ರಾಮಾನುಜನ್ ಬ್ರಿಟನ್‌ಗೆ ತೆರಳಿದರು. ಅಲ್ಲಿ ಹಾರ್ಡಿ ರಾಮಾನುಜನ್ ಅವರನ್ನು ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಸೇರಿಸಿದರು. 1917ರಲ್ಲಿ ರಾಮಾನುಜನ್ ಲಂಡನ್ ಮ್ಯಾಥಮ್ಯಾಟಿಕಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆಯಾದರು. 1918ರಲ್ಲಿ ಅವರು ರಾಯಲ್ ಸೊಸೈಟಿಯ ಫೆಲೋ ಆಗಿ, ಈ ಸಾಧನೆ ಮಾಡಿದ ಅತ್ಯಂತ ಕಿರಿಯರಲ್ಲಿ ಒಬ್ಬರಾದರು.

ಇಂಗ್ಲೆಂಡ್‌ನಲ್ಲಿ ಅವರ ಯಶಸ್ಸಿನ ಹೊರತಾಗಿಯೂ, ರಾಮಾನುಜನ್‌ಗೆ ದೇಶದ ಆಹಾರ ಪದ್ಧತಿಗೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ 1919ರಲ್ಲಿ ಭಾರತಕ್ಕೆ ಮರಳಿದರು. ಆದರೂ ರಾಮಾನುಜನ್ ಅವರ ಆರೋಗ್ಯವು ಹದಗೆಡುತ್ತಲೇ ಇತ್ತು ಮತ್ತು 1920ರಲ್ಲಿ ಅವರು ತಮ್ಮ 32ನೇ ವಯಸ್ಸಿನಲ್ಲಿ ನಿಧನರಾದರು.

ಗಣಿತ ಮತ್ತು ಪರಂಪರೆಗೆ ರಾಮಾನುಜನ್ ಕೊಡುಗೆಗಳು:

  • ರಾಮಾನುಜನ್ ಅವರ ಪ್ರತಿಭೆಯನ್ನು ಗಣಿತ ತಜ್ಞರು 18 ಮತ್ತು 19ನೇ ಶತಮಾನದ ಯೂಲರ್ ಮತ್ತು ಜಾಕೋಬಿಗೆ ಸಮಾನಾಗಿ ಪರಿಗಣಿಸಿದ್ದಾರೆ.
  • ಸಂಖ್ಯಾ ಸಿದ್ಧಾಂತದಲ್ಲಿ ಅವರ ಕೆಲಸವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ ಮತ್ತು ಅವರು ವಿಭಜನಾ ಕಾರ್ಯದಲ್ಲಿ (partition function) ಪ್ರಗತಿ ಸಾಧಿಸಿದರು. ರಾಮಾನುಜನ್ ಅವರು ಮುಂದುವರಿದ ಭಿನ್ನರಾಶಿಗಳ (continued fractions) ಪಾಂಡಿತ್ಯಕ್ಕಾಗಿ ಗುರುತಿಸಲ್ಪಟ್ಟರು ಮತ್ತು ರೀಮನ್ ಸರಣಿಗಳು, ಎಲಿಪ್ಟಿಕ್ ಇಂಟಿಗ್ರಲ್ಸ್, ಹೈಪರ್ಜಿಯೊಮೆಟ್ರಿಕ್ ಸರಣಿಗಳು ಮತ್ತು ಝೀಟಾ ಕ್ರಿಯೆಯ ಕ್ರಿಯಾತ್ಮಕ ಸಮೀಕರಣಗಳನ್ನು ರೂಪಿಸಿದ್ದರು.
  • ಅವರ ಮರಣದ ನಂತರ ಅವರ ಮೂರು ನೋಟ್‌ಬುಕ್‌ಗಳು ಮತ್ತು ಅಪ್ರಕಟಿತ ಫಲಿತಾಂಶಗಳನ್ನು ಹೊಂದಿರುವ ಕೆಲವು ಪುಸ್ತಕಗಳ ಮೇಲೆ ಗಣಿತ ತಜ್ಞರು ಹಲವು ವರ್ಷ ಕೆಲಸ ಮಾಡುತ್ತಿದ್ದರು.

ರಾಮಾನುಜನ್ ಕುರಿತು ಆಸಕ್ತಿದಾಯಕ ಸಂಗತಿಗಳು:

  • ರಾಮಾನುಜನ್‌ಗೆ 13 ವರ್ಷದವರಿದ್ದಾಗ ಯಾವುದೇ ಸಹಾಯವಿಲ್ಲದೇ ಲೋನಿಯ ತ್ರಿಕೋನಮಿತಿಯನ್ನು (Loney’s Trigonometry exercise) ಮಾಡುತ್ತಿದ್ದರು.
  • ಅವರಿಗೆ ಶಾಲೆಯಲ್ಲಿ ಯಾರೂ ಸ್ನೇಹಿತರಿರಲಿಲ್ಲ ಏಕೆಂದರೆ ಎಲ್ಲರೂ ಅವರನ್ನು ಶಾಲೆಯಲ್ಲಿ ಅಪರೂಪದ ಬಾಲಕ ಅಂದುಕೊಳ್ಳುತ್ತಿದ್ದರು ಮತ್ತು ಅವರ ಗಣಿತದ ಕುಶಲತೆಯ ಕುರಿತು ಯಾವಾಗಲೂ ಭಯಭೀತರಾಗಿದ್ದರು.
  • ರಾಮಾನುಜನ್ ಲಲಿತ ಕಲಾ ಕೋರ್ಸ್‌ಗಳನ್ನು ಪೂರ್ಣಗೊಳಿಸದ ಕಾರಣ ಪದವಿ ಪಡೆಯಲು ವಿಫಲರಾಗಿದ್ದರು. ಆದರೂ ಅವರು ಯಾವಾಗಲೂ ಗಣಿತಶಾಸ್ತ್ರದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದರು.
  • ಕಾಗದವು ದುಬಾರಿಯಾಗಿದ್ದರಿಂದ ರಾಮಾನುಜನ್ ತಮ್ಮ ಫಲಿತಾಂಶಗಳನ್ನು ‘ಸ್ಲೇಟ್’ನಲ್ಲಿ ಪಡೆಯುತ್ತಿದ್ದರು.
  • ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ ರಾಮಾನುಜನ್.
  • 1909ರಲ್ಲಿ ರಾಮಾನುಜನ್ ವಿವಾಹವಾದಾಗ ಅವರಿಗೆ 12 ವರ್ಷ ಮತ್ತು ಅವರ ಪತ್ನಿ ಜಾನಕಿಗೆ ಕೇವಲ 10 ವರ್ಷ.
  • ರಾಮಾನುಜನ್ ರಾಯಲ್ ಸೊಸೈಟಿಯಲ್ಲಿ ಫೆಲೋಶಿಪ್ ಪಡೆದ ಎರಡನೇ ಭಾರತೀಯ.
  • ಶ್ರೀನಿವಾಸ ರಾಮಾನುಜನ್ ಅವರ ಸ್ಮರಣಾರ್ಥ ಚೆನ್ನೈನಲ್ಲಿ ಅವರಿಗೆ ಮೀಸಲಾಗಿರುವ ವಸ್ತುಸಂಗ್ರಹಾಲಯವಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.