ETV Bharat / bharat

ಕೇಸರಿ ಧ್ವಜ ನಮ್ಮ ತತ್ವಗಳ ಸಂಕೇತ, ದೇಶ ಸೇವೆಗಾಗಿ ಸ್ವಯಂಸೇವಕರು ಶಾಖೆಗಳಿಗೆ ಬರ್ತಾರೆ: ಮೋಹನ್‌ ಭಾಗವತ್‌

author img

By

Published : Jan 13, 2023, 10:54 AM IST

ನಾಗ್ಪುರದ ಯಶವಂತ್​ ಸ್ಟೇಡಿಯಂನಲ್ಲಿ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಉದ್ದೇಶಿಸಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಮಾತನಾಡಿದರು.

ಹನುಮಂತ- ಛತ್ರಪತಿ ಶಿವಾಜಿ ನಮ್ಮ ಆದರ್ಶ ವ್ಯಕ್ತಿಗಳು; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​​
hanuman-chhatrapati-shivaji-are-our-role-models-rss-chief-mohan-bhagwat

ನಾಗ್ಪುರ್ (ಮಹಾರಾಷ್ಟ್ರ) ​: ಪುರಾಣ ಕಾಲದ ಹನುಮಂತ ಮತ್ತು 17ನೇ ಶತಮಾನದ ಐತಿಹಾಸಿಕ ಯುಗದ ಮರಾಠ ದೊರೆ ಛತ್ರಪತಿ ಶಿವಾಜಿ ನಮ್ಮ ಸ್ವಯಂ ಸೇವಕರಿಗೆ ಮಾದರಿಯಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದರು. ಆರ್​ಎಸ್​ಎಸ್​ ಸಂಸ್ಥಾಪಕ ಡಾ.ಕೇಶವ್​ ಬಲಿರಾಮ್​ ಹೆಗ್ಡೆವಾರ್​ ಮತ್ತು ಎಂ.ಎಸ್.​ಗೋಲ್ವಾಕರ್​ ಹಾಗೂ ಬಾಲಸಾಹೇಬ್​ ದೆರೊಸ್ (ಆರ್​ಎಸ್​ಎಸ್​ನ ಮೂರು ಮುಖ್ಯಸ್ಥರು) ಅವರು ಕೇಸರಿ ಧ್ವಜ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂದಿದ್ದರು. ಕೇಸರಿ ಧ್ವಜ ನಮ್ಮ ತತ್ವಗಳ ಸಂಕೇತ. ನಮ್ಮ ಚಿಂತನೆಗಳು ತತ್ವರೂಪದಲ್ಲಿದ್ದು, ಕೇಸರಿ ಧ್ವಜವೂ ಆ ತತ್ವವೇ ಆಗಿದೆ ಎಂದು ಪ್ರತಿಪಾದಿಸಿದರು.

ಹನುಮಂತ-ಶಿವಾಜಿ ಆದರ್ಶವಾಗಲಿ: ಆರ್​ಎಸ್​ಎಸ್​ನ ಮೂವರು ಮುಖ್ಯಸ್ಥರು, ಪುರಾಣ ಕಾಲದ ರಾಮಭಕ್ತ ಹನುಮಂತ ಮತ್ತು ಇತಿಹಾಸಕಾಲದ ರಾಜ ಛತ್ರಪತಿ ಶಿವಾಜಿ ಮಹಾರಾಜರನ್ನು ಅನುಸರಿಸಬೇಕೆಂದು ಸ್ವಯಂ ಸೇವಕರಿಗೆ ಕರೆಕೊಟ್ಟರು. ಮುಂದುವರೆದು ಮಾತನಾಡಿದ ಅವರು, ಸ್ವಯಂ ಸೇವಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಂಘ, ಶಾಖೆಗೆ ಬರುವುದಿಲ್ಲ. ಅವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಈ ಮೊದಲು ಬಾಲ್ಯದಲ್ಲೇ ಸ್ವಯಂ ಸೇವಕರು ಶಾಖೆಯ ಕಾರ್ಯಕ್ರಮಗಳಿಂದ ಆಕರ್ಷಿತರಾಗುತ್ತಿದ್ದರು. ವಯೋಮಾನಕ್ಕೆ ಬಂದಾಗ ಅವರಿಗೆ ತಾವು ಶಾಖೆಗೆ ಬಂದಿರುವುದು ದೇಶ ಸೇವೆಗಾಗಿ ಎಂಬುದು ಅರಿವಾಗುತ್ತದೆ ಎಂದರು.

ಭಾರತ ವಿಶ್ವಗುರುವಾಗಬೇಕು: ದೇಶಕ್ಕಾಗಿ ಸೇವೆ ಸಲ್ಲಿಸುವ ಚಿಂತನೆಯು ಸ್ವಯಂಸೇವಕರನ್ನು ಅತ್ಯಂತ ಸಮರ್ಥ ಮನುಷ್ಯರನ್ನಾಗಿ ಮಾಡುತ್ತದೆ. ಇದರಿಂದ ಅವರು ಜೀವನದಲ್ಲಿ ಉನ್ನತ ಗುರಿ ಹೊಂದುತ್ತಾರೆ. ಇದೇ ವೇಳೆ, ಹನುಮಂತನ ಮೌಲ್ಯ ಮತ್ತು ಸಾಮರ್ಥ್ಯವನ್ನು ಅಳವಡಿಸಿಕೊಳ್ಳುವಂತೆಯೂ ಆರ್​ಎಸ್​ಎಸ್​ ಸ್ವಯಂ ಸೇವಕರಿಗೆ ಕರೆ ನೀಡಿದರು. ಭಾರತವನ್ನು ವಿಶ್ವ ಗುರು ಮಾಡುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ನಾವು ದೊಡ್ಡ ಕಾರಣಕ್ಕಾಗಿ ಕೆಲಸ ಮಾಡಿದರೆ, ಬರುವ ಮುಂದಿನ ಪೀಳಿಗೆಯ ಜನರು ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

ಧರ್ಮವೇ ಮೂಲ: ನಾವು ನಮ್ಮ ಧರ್ಮಕ್ಕೆ ಪ್ರಾಣ ತ್ಯಾಗ ಮಾಡಬೇಕಾದರೂ ದೃಢವಾಗಿರಬೇಕು. ಸನಾತನ ಧರ್ಮ ಎಂಬುದು ಕೇವಲ ಹಿಂದೂ ರಾಷ್ಟ್ರ. ಹಿಂದೂ ರಾಷ್ಟ್ರದಲ್ಲಿ ಪ್ರಗತಿ ಆದರೆ, ಅದು ಧರ್ಮದಲ್ಲಿ ಪ್ರಗತಿಯಾದಂತೆ. ಸನಾತನ ಧರ್ಮವನ್ನು ಮೇಲೆತ್ತುವುದು ದೇವರ ಇಚ್ಛೆಯಾಗಿದೆ. ಭಾರತವು ಯಾವಾಗಲೂ ಅಮರ ಮತ್ತು ಅಜೇಯವಾಗಿದೆ. ಧರ್ಮವೇ ಈ ದೇಶದ ಸತ್ವವಾಗಿದ್ದು, ಅದುವೇ ಸಾರವಾಗಿದೆ.

ಧರ್ಮದ ಮೌಲ್ಯಗಳು ಅಂದರೆ ಸತ್ಯ, ಕರುಣೆ, ಶುದ್ಧತೆ ಮತ್ತು ತಪಸ್ಸು ಸಮಾನವಾಗಿ ಮುಖ್ಯವಾಗಿದೆ. ಅನೇಕ ಆಕ್ರಮಣಗಳ ಹೊರತಾಗಿಯೂ ಭಾರತದ ಧರ್ಮದ ಸತ್ವದಿಂದಾಗಿ ಅದು ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿ ಉಳಿದಿದೆ. ಧರ್ಮವಿಲ್ಲದೇ ಯಾವುದೂ ಕೆಲಸ ಮಾಡುವುದಿಲ್ಲ. ಎಲ್ಲಾ ಯುಗಗಳಲ್ಲಿ ಧರ್ಮದ ಅವಶ್ಯಕತೆಯಿದೆ. ಯಾವುದೇ ಧರ್ಮವಿಲ್ಲದಿದ್ದರೆ ಸೃಷ್ಟಿಯ ನಿಯಮಗಳು ಇರುವುದಿಲ್ಲ. ಆಚರಣೆಯಿಂದ ಧರ್ಮ ಬೆಳೆಯುತ್ತದೆ ಎಂದು ಭಾಗವತ್‌ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಚುನಾವಣೆಗಳಲ್ಲಿ ಹಣ ಬಲದ ಕಾರುಬಾರು: ಸುಪ್ರೀಂ ಕೋರ್ಟ್​ನಲ್ಲಿ ಚು.ಆಯೋಗ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.