ETV Bharat / bharat

ರಾಜಭವನ ಕರ್ತವ್ಯ ಭವನ, ರಾಜಸ್ಥಾನ ಕರ್ತವ್ಯ ಸ್ಥಾನವಾಗಲಿ: ಶಶಿ ತರೂರ್​ ಟೀಕೆ

author img

By

Published : Sep 11, 2022, 6:01 PM IST

ರಾಜಪಥವನ್ನು ಕರ್ತವ್ಯಪಥ ಎಂದು ಬದಲಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್​ ಪ್ರಶ್ನಿಸಿದ್ದಾರೆ. ರಾಜಭವನಗಳ ಹೆಸರನ್ನೂ ಬದಲಿಸಿ ಎಂದು ಸಲಹೆ ನೀಡುವ ಮೂಲಕ ಟೀಕಿಸಿದ್ದಾರೆ.

shashi-tharoor-on-renaming-rajpath
ಶಶಿ ತರೂರ್​ ಟ್ವೀಟ್​ ಟೀಕೆ

ನವದೆಹಲಿ: ದೆಹಲಿಯ ಇಂಡಿಯಾ ಗೇಟ್​ ಬಳಿಯ ರಾಜಪಥವನ್ನು, ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, "ಎಲ್ಲಾ ರಾಜಭವನಗಳನ್ನು ಕರ್ತವ್ಯ ಭವನಗಳನ್ನಾಗಿ ಮಾಡಬಾರದೇಕೆ" ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್​​ ಮಾಡಿರುವ ಕಾಂಗ್ರೆಸ್​ ಹಿರಿಯ ನಾಯಕ, "ರಾಜಪಥಕ್ಕೆ ಕರ್ತವ್ಯಪಥ ಎಂದು ಮರುನಾಮಕರಣ ಮಾಡಬೇಕಾದರೆ, ಎಲ್ಲ ರಾಜಭವನಗಳು ಕರ್ತವ್ಯ ಭವನಗಳಾಗಬೇಕಲ್ಲವೇ" ಎಂದು ಪ್ರಶ್ನಿಸಿರುವ ತರೂರ್​, "ಹೆಸರು ಬದಲಾವಣೆ ಇಲ್ಲಿಗೆ ನಿಲ್ಲಿಸಬೇಡಿ. ರಾಜಸ್ಥಾನವನ್ನೂ ಕರ್ತವ್ಯಸ್ಥಾನ ಎಂದು ಬದಲಿಸಿ" ಎಂದು ಸಲಹೆ ನೀಡಿದ್ದಾರೆ.

ಸೆಪ್ಟೆಂಬರ್ 8 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂಡಿಯಾ ಗೇಟ್​ ಬಳಿಯಿರುವ ರಾಜಪಥಕ್ಕೆ ಕರ್ತವ್ಯಪಥ ಎಂದು ಬದಲಿಸಿದ ರಸ್ತೆಗೆ ಚಾಲನೆ ನೀಡಿದರು. ರಾಜಪಥ ಎಂಬುದು ವಸಾಹತುಶಾಹಿಯ, ದಾಸ್ಯದ ಸಂಕೇತವಾಗಿದೆ. ನವಭಾರತ ಮತ್ತು ಸ್ವಾಭಿಮಾನದ ಸಂಕೇತವಾಗಿ ಕರ್ತವ್ಯಪಥ ಎಂದು ಮರು ನಾಮಕರಣ ಮಾಡಲಾಗಿದೆ.

ಇದಲ್ಲದೇ, ಇಂಡಿಯಾ ಗೇಟ್​ ಬಳಿ ಇದ್ದ ಕಿಂಗ್​ ಜಾರ್ಜ್​ ಪುತ್ಥಳಿ ಜಾಗದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ 28 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಅನಾವರಣ ಮಾಡಲಾಗಿದೆ.

ಓದಿ: ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್​ನಿಂದ ಸಮಿತಿ: ಬೆಟರ್ ಬೆಂಗಳೂರು ಕ್ರಿಯಾ ಸಮಿತಿಯಲ್ಲಿ ಯಾರೆಲ್ಲಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.