ETV Bharat / bharat

ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ, ಮೋದಿ ಅಮಿತ್ ಶಾ, ಅದಾನಿ ಮಾತು ಮಾತ್ರ ಕೇಳ್ತಿದ್ದಾರೆ: ರಾಹುಲ್​ ವಾಗ್ದಾಳಿ

author img

By

Published : Aug 9, 2023, 12:55 PM IST

Updated : Aug 9, 2023, 2:44 PM IST

ಅವಿಶ್ವಾಸ ಗೊತ್ತುವಳಿಯ ಮೇಲೆ ರಾಹುಲ್​ ಗಾಂಧಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ಟೀಕಾಪ್ರಹಾರ
ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ಟೀಕಾಪ್ರಹಾರ

ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ಟೀಕಾಪ್ರಹಾರ

ನವದೆಹಲಿ: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ಆಡಳಿತ ಪಕ್ಷ ದೇಶದ ಮಾನ ಹರಾಜು ಹಾಕಿದೆ. ನೀವು ದೇಶದ್ರೋಹಿಗಳು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದರು.

ಅವಿಶ್ವಾಸ ಗೊತ್ತುವಳಿ ಮೇಲೆ ಮಾತನಾಡಿದ ರಾಹುಲ್​ ಗಾಂಧಿ, ರಾಮಾಯಣದ ಉದಾಹರಣೆ ನೀಡುತ್ತಾ ವಾಗ್ದಾಳಿ ನಡೆಸಿದರು. ರಾವಣ ಹಿಂದೆ ಇಬ್ಬರ ಮಾತನ್ನ ಮಾತ್ರ ಕೇಳುತ್ತಿದ್ದರು. ಅದು ಮೇಘನಾಥ ಮತ್ತು ಕುಂಭಕರ್ಣ. ಹಾಗೆಯೇ ಪ್ರಧಾನಿ ಮೋದಿ ಅವರು ಗೃಹ ಸಚಿವ ಅಮಿತ್​ ಶಾ, ಅದಾನಿ ಅವರ ಮಾತನ್ನ ಮಾತ್ರ ಕೇಳುತ್ತಿದ್ದಾರೆ. ರಾವಣನನ್ನು ಕೊಂದಿದ್ದು ರಾಮ ಮಾತ್ರವಲ್ಲ, ಆತನ ಅಹಂಕಾರ ಎಂದು ಟೀಕಾ ಪ್ರಹಾರ ನಡೆಸಿದರು.

ಜನರ ಧ್ವನಿಯೇ ಭಾರತವಾಗಿದೆ. ಬಿಜೆಪಿಯವರು ಮಣಿಪುರದಲ್ಲಿ ಭಾರತ ಮಾತೆಯನ್ನುಕೊಂದಿದ್ದೀರಿ. ನೀವು ಭಾರತ ಮಾತೆಯ ರಕ್ಷಕರಲ್ಲ, ಕೊಲೆಗಡುಕರು. ನಾನು ಪ್ರೀತಿಯಿಂದ ಮಾತನಾಡಿದರೆ, ನೀವು ಹಿಂಸೆಯನ್ನು ಪ್ರಚೋದಿಸುತ್ತಿದ್ದೀರಿ. ನೀವು ನನ್ನ ತಾಯಿಯನ್ನು ಮಣಿಪುರದಲ್ಲಿ ಕೊಂದು ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ಭಾರಿ ವಿರೋಧ ವ್ಯಕ್ತವಾಯಿತು. ಆ ಬಳಿಕ ಮಾತು ಮುಂದುವರಿಸಿದ ರಾಹುಲ್​, ಈಗ ನಾನು ಅದಾನಿ ಹೆಸರು ಬಳಸುವುದಿಲ್ಲ ಎಂದರು. ಅಷ್ಟೇ ಅಲ್ಲ ಅಹಂಕಾರದಿಂದ ಮಾತನಾಡುವುದಿಲ್ಲ, ಹೃದಯದಿಂದ ಮಾತನಾಡುತ್ತೇನೆ ಎಂದರು. ಇದೇ ವೇಳೆ, ಭಾರತ ಜೋಡೋ ಯಾತ್ರೆ ಬಗ್ಗೆ ಪ್ರಸ್ತಾಪಿಸಿದರು. ಜನರಿಂದ ಸಿಕ್ಕ ಅಭೂತ ಪೂರ್ವ ಸ್ವಾಗತವನ್ನು ನೆನಪಿಸಿಕೊಂಡರು.

ಕೇಂದ್ರ ನೀತಿಗಳ ಬಗ್ಗೆ ಜನರು ಹೇಳಿದ ಸಂಕಷ್ಟಗಳನ್ನು ಸದನದ ಮುಂದಿಟ್ಟರು. ಮೋದಿ ಆಡಳಿತದ ಕಾರ್ಯವೈಖರಿಯನ್ನು ಖಂಡಿಸಿದರು. ದೇಶವೇ ತಲೆತಗ್ಗಿಸುವ ಘಟನೆ ನಡೆದರೂ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕಳೆದ ಮಾರ್ಚ್​​ನಲ್ಲಿ ಸಂಸದ ಸ್ಥಾನದಿಂದ ಅನರ್ಹತೆ ಆಗಿದ್ದ ರಾಹುಲ್​ ಸುಪ್ರೀಂಕೋರ್ಟ್​ ಮಧ್ಯಂತರ ತೀರ್ಪಿನಿಂದ ಸಂಸದ ಸ್ಥಾನಕ್ಕೆ ಮರಳಿದ್ದಾರೆ. ಹೀಗೆ ಸಂಸತ್​ಗೆ ಮರಳಿದ ರಾಹುಲ್​ ಇದೇ ಮೊದಲ ಬಾರಿಗೆ ಮಾತನಾಡಿದರು. ಕೇಂದ್ರದ ವಿರುದ್ಧ ಈ ಹಿಂದಿನಂತೆ ವಾಗ್ದಾಳಿ ನಡೆಸಿದರು.

ರಾಹುಲ್​ ಕ್ಷಮೆಯಾಚನೆಗೆ ಆಗ್ರಹ: ಸದನದಲ್ಲಿ ಭಾರತ ಮಾತೆಯ ಕೊಲೆಯಾಗಿದೆ ಎಂದು ಹೇಳುವ ಮೂಲಕ ದೇಶಕ್ಕೆ ಅವಮಾನ ಮಾಡಿದ ರಾಹುಲ್​ ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿತು. ದೇಶದ ಸುಳ್ಳು ಹೇಳಿ, ಭಾರತ ಮಾತೆಯ ಕೊಲೆಯಾಗಿದೆ ಎಂದು ಹೇಳಿ, ಮೇಜು ಕುಟ್ಟಿದ ವಿಪಕ್ಷಗಳ ವಿರುದ್ಧ ಆಡಳಿತಾರೂಢ ಪಕ್ಷ ಟೀಕಾಪ್ರಹಾರ ನಡೆಸಿತು.

ಇದನ್ನೂ ಓದಿ: ಕೊಲೆ ಯತ್ನ, ಗಲಭೆಗೆ ಸಂಚು ಆರೋಪ: ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಪ್ರಕರಣ ದಾಖಲು

Last Updated : Aug 9, 2023, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.