ETV Bharat / bharat

ಭಾರತದ ಸುಗಂಧದ್ರವ್ಯ, ಕೃತಕ ಚರ್ಮದ ಉತ್ಪನ್ನ ಮೆಚ್ಚಿದ ಇಂಗ್ಲೆಂಡ್​ ರಾಜಕುಮಾರ

author img

By

Published : Feb 2, 2023, 11:48 AM IST

ಇಂಗ್ಲೆಂಡ್​ನಲ್ಲಿ ಭಾರತದ ಸ್ಟಾರ್ಟ್​ಅಪ್​ ಭಾಗಿ- ಉತ್ತರಪ್ರದೇಶದ ಉತ್ಪನ್ನಕ್ಕೆ ಪ್ರಿನ್ಸ್​ ವಿಲಿಯಂ ಮೆಚ್ಚುಗೆ- ಇಂಗ್ಲೆಂಡ್​ ರಾಜಕುಮಾರ ವಿಲಿಯಂ- ಉತ್ತರಪ್ರದೇಶ ಕಾನ್ಪುರ ಮೂಲದ ಸ್ಟಾರ್ಟ್​ಅಪ್​​- ಭಾರತದ ಸುಗಂಧದ್ರವ್ಯ ಮೆಚ್ಚಿದ ಇಂಗ್ಲೆಂಡ್​ ರಾಜಕುಮಾರ

ಕೃತಕ ಚರ್ಮದ ಉತ್ಪನ್ನ ಮೆಚ್ಚಿದ ಇಂಗ್ಲೆಂಡ್​ ರಾಜಕುಮಾರ
ಕೃತಕ ಚರ್ಮದ ಉತ್ಪನ್ನ ಮೆಚ್ಚಿದ ಇಂಗ್ಲೆಂಡ್​ ರಾಜಕುಮಾರ

ಕಾನ್ಪುರ(ಉತ್ತರಪ್ರದೇಶ): ಉತ್ತರಪ್ರದೇಶ ಕಾನ್ಪುರ ಮೂಲದ ಸ್ಟಾರ್ಟ್​ಅಪ್​​ ಹೂವುಗಳಿಂದ ತಯಾರಿಸುವ ಸುಗಂಧದ್ರವ್ಯ ಮತ್ತು ಕೃತಕ ಚರ್ಮದ ವಸ್ತುಗಳನ್ನು ಇಂಗ್ಲೆಂಡ್​ನ ರಾಜಕುಮಾರ ಪ್ರಿನ್ಸ್​ ವಿಲಿಯಂ ಅವರು ಬಹುವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟ್​ಅಪ್​ ಉತ್ಪಾದಿಸುವ ವಸ್ತುಗಳನ್ನು ಇಂಗ್ಲೆಂಡ್​ ರಾಜಕುಮಾರ ವೈಯಕ್ತಿಕವಾಗಿ ಪರಿಶೀಲಿಸಿದ್ದಾರೆ. ಇದು ಸಂಸ್ಥೆಗೆ ಶಕ್ತಿ ನೀಡಿದಂತಾಗಿದೆ ಎಂದು ಸ್ಟಾರ್ಟಅಪ್​ ಆರಂಭಿಸಿ ಅಂಕಿತ್​ ಅಗರ್ವಾಲ್​ ತಿಳಿಸಿದ್ದಾರೆ.

ಲಂಡನ್‌ನ ವಿನ್‌ಸ್ಟರ್‌ನಲ್ಲಿ ನಡೆದ ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಬಹುಕೋಟಿ ಮೌಲ್ಯದ ಅರ್ಥ್‌ಶಾಟ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 15 ಸ್ಟಾರ್ಟ್‌ಅಪ್‌ಗಳಲ್ಲಿ ಕಾನ್ಪುರದ ಉದ್ಯಮಿ ಅಂಕಿತ್ ಅಗರ್ವಾಲ್ ಕೂಡ ಭಾಗವಹಿಸಿದ್ದರು. ಈ ವೇಳೆ ಪ್ರಿನ್ಸ್ ವಿಲಿಯಂ ಅವರು ಭಾರತದ ಸ್ಟಾರ್ಟ್​ಅಪ್​ ನಿರ್ಮಿಸಿದ ಸುಗಂಧದ್ರವ್ಯವನ್ನು ಇಷ್ಟಪಟ್ಟಿದ್ದಾರೆ. ಪ್ರಿನ್ಸ್​ ಕೃತಕ ಚರ್ಮದ ವಸ್ತುವನ್ನು ಪರಿಶೀಲಿಸುತ್ತಿರುವ ಚಿತ್ರ ಕೂಡ ಇದೆ.

ಕಾನ್ಪುರ ಸುಗಂಧದ್ರವ್ಯ
ಕಾನ್ಪುರ ಸುಗಂಧದ್ರವ್ಯ

ಅಂಕಿತ್ ಅಗರ್ವಾಲ್​ ಅವರು ಐಐಟಿ ಕಾನ್ಪುರದ ಜೊತೆಗೂಡಿ ಸ್ಟಾರ್ಟ್ಅಪ್ ಇನ್ನೋವೇಶನ್ ಇನ್ಕ್ಯುಬೇಶನ್ ಸೆಂಟರ್‌ ಆರಂಭಿಸಿದ್ದಾರೆ. ಇದು ಉತ್ತರ ಪ್ರದೇಶದ ವಿವಿಧ ನಗರಗಳಿಂದ ಸಂಗ್ರಹಿಸಿದ ಹೂವುಗಳಿಂದ ಸುಗಂಧದ್ರವ್ಯ ಮತ್ತು ಕೃತಕ ಚರ್ಮವನ್ನು ತಯಾರಿಸುತ್ತದೆ.

ಗಂಗಾನದಿ ದಡದ ಮೇಲೆ ಹೊಳೆದ ಐಡಿಯಾ: 2015 ರಲ್ಲಿ ಮಕರ ಸಂಕ್ರಾಂತಿಯ ದಿನದಂದು ಜೆಕ್​ ಗಣರಾಜ್ಯದಿಂದ ಬಂದಿದ್ದ ತನ್ನ ಸ್ನೇಹಿತ ಮತ್ತು ಅಂಕಿತ್​ ಅಗರ್ವಾಲ್​ ಅವರು ಗಂಗಾನದಿಯ ದಡದ ಮೇಲೆ ಕುಳಿತು ಜನರ ಪೂಜಾ ವಿಧಾನಗಳನ್ನು ಗಮನಿಸುತ್ತಿದ್ದರು. ಈ ವೇಳೆ ಪೂಜೆಯ ನಂತರ ಜನರು ಹೂವುಗಳನ್ನು ಅರ್ಪಿಸುತ್ತಿದ್ದರು. ಇದು ದೇವಾಲಯ ಮುಂದೆ ಹೂವಿನ ರಾಶಿಯನ್ನೇ ಸೃಷ್ಟಿಸಿತ್ತು. ಇದನ್ನು ಕಂಡ ಅಂಕಿತ್​ ಸ್ನೇಹಿತ ಹೂವನ್ನು ಒಂದೆಡೆ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದ.

ಕಾನ್ಪುರ ಸುಗಂಧದ್ರವ್ಯ
ಕಾನ್ಪುರ ಸುಗಂಧದ್ರವ್ಯ

ಓದಿ: ಒಡಿಶಾ ಸಚಿವರಿಗೆ ಗುಂಡೇಟು ಪ್ರಕರಣ; ಮರಣೋತ್ತರ ಪರೀಕ್ಷೆ ವರದಿ ಬಹಿರಂಗ, ನಬಾ ಕಿಶೋರ್ ದಾಸ್​ ಹೃದಯಸ್ತಂಭನದಿಂದ ಸಾವು!

ಇದನ್ನು ಕೇಳಿಸಿಕೊಂಡ ಅಂಕಿತ್​ ಅಗರ್ವಾಲ್​ಗೆ ತಲೆಯಲ್ಲಿ ಮಿಂಚಿನಂತೆ ಐಡಿಯಾ ಬಂದಿದೆ. ಹೂವುಗಳನ್ನು ಬಳಸಿಕೊಂಡು ಸುಗಂಧದ್ರವ್ಯದ ಊದಿನಕಡ್ಡಿಯನ್ನು ಉತ್ಪಾದಿಸುವ ಬಗ್ಗೆ ಯೋಚಿಸಿದ್ದಾರೆ. ಈ ಕಲ್ಪನೆಯನ್ನು ಸ್ನೇಹಿತನೊಂದಿಗೆ ಹಂಚಿಕೊಂಡು, ಸ್ಟಾರ್ಟ್​ಅಪ್​ ಅಡಿಯಲ್ಲಿ ಸಂಸ್ಥೆಯನ್ನು ಆರಂಭಿಸುವ ಬಗ್ಗೆ ಚರ್ಚಿಸಿದ್ದಾರೆ. ಬಳಿಕ 2016 ರಲ್ಲಿ ಐಐಟಿ ಕಾನ್ಪುರದಲ್ಲಿ ತಮ್ಮದೇ ಆದ ಸ್ಟಾರ್ಟ್ಅಪ್ ಅನ್ನು ಆರಂಭಿಸಿದರು.

ನಿತ್ಯ 12 ಟನ್​ ಹೂವು ಆಮದು: ಧೂಪದ್ರವ್ಯದ ತುಂಡುಗಳು ಮತ್ತು ಕೃತಕ ಚರ್ಮದ ಉತ್ಪಾನದೆಯಲ್ಲಿ ತೊಡಗಿಸಿಕೊಂಡು, ಇದಕ್ಕಾಗಿ ಕಾನ್ಪುರ, ಅಯೋಧ್ಯೆ, ವಾರಾಣಸಿ ಸೇರಿದಂತೆ ಹಲವು ನಗರಗಳಿಂದ ಪ್ರತಿದಿನ ಹೂವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸ್ಟಾರ್ಟ್​ಅಪ್​ನಿಂದಾಗಿ ಸ್ಥಳೀಯ ಮಹಿಳೆಯರಿಗೂ ಉದ್ಯೋಗಾವಕಾಶ ಸಿಕ್ಕಿದೆ ಎಂದು ಹೇಳುತ್ತಾರೆ ಉದ್ಯಮಿ ಅಂಕಿತ್. ಪರಿಶೀಲನೆಯ ಬಳಿಕ ಅಂತಿಮ ಉತ್ಪನ್ನಕ್ಕಾಗಿ ಸಂಸ್ಕರಿಸಲು ಪ್ರತಿದಿನ ಸುಮಾರು 12 ಟನ್ ಹೂವನ್ನು ಸಂಗ್ರಹಿಸಲಾಗುತ್ತದೆ. ಈ ಉದ್ಯಮವಲ್ಲದೇ, ಅಂಕಿತ್ ಥರ್ಮಾಕೋಲ್​ ತಯಾರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಓದಿ: ಆರ್​ಎಸ್​ಎಸ್​ ಎಡ- ಬಲವಲ್ಲ, ರಾಷ್ಟ್ರೀಯವಾದಿ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.