ETV Bharat / bharat

ಶಿರಡಿ ಸಾಯಿ ಸಂಸ್ಥಾನಕ್ಕೆ ಒಂದು ಕೋಟಿ ರೂ ದೇಣಿಗೆ ನೀಡಿದ ಭಕ್ತ.. ಹರಿದು ಬರುತ್ತಲೇ ಇದೆ ಭಕ್ತ ಸಾಗರ

author img

By

Published : Jan 11, 2023, 4:44 PM IST

mh-devotees-1-crore-donation-to-sai-baba-at-the-beginning-of-the-new-year-in-shirdi
ಮಹರಾಷ್ಟ್ರ: ಶಿರಡಿ ಸಾಯಿ ಸಂಸ್ಥಾನಕ್ಕೆ ಒಂದು ಕೋಟಿ ರೂ ದೇಣಿಗೆ ನೀಡಿದ ಭಕ್ತ

ಹೈದರಾಬಾದ್​ ಮೂಲದ ಭಕ್ತನಿಂದ ಸಾಯಿ ಸಂಸ್ಥಾನಕ್ಕೆ ಒಂದು ಕೋಟಿ ರೂ ದೇಣಿಗೆ - ದೇವರು ನನಗೆ ಕೊಟ್ಟಿದ್ದನು ವಾಪಸ್​ ನೀಡುತ್ತಿದ್ದೇನೆ ಎಂದ ಭಕ್ತ - 46 ಲಕ್ಷದ ಎಕ್ಸ್​ ರೇ ಯಂತ್ರವನ್ನು ದೇಣಿಗೆಯಾಗಿ ನೀಡಲು ಸಂಕಲ್ಪ

ಶಿರಡಿ(ಮಹಾರಾಷ್ಟ್ರ): ಹೈದರಾಬಾದ್​ ಮೂಲದ ಸಾಯಿ ಬಾಬಾ ಭಕ್ತ ರಾಜೇಶ್ವರ್​ ಎಂಬುವವರು ಸಾಯಿ ಸಂಸ್ಥಾನಕ್ಕೆ 25 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಡಿಡಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಅವರು ಸಾಯಿ ಬಾಬಾ ಅವರಿಗೆ ವಿಶೇಷ ರೀತಿಯಲ್ಲಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್ವರ್,​ ’’ಸಾಯಿಬಾಬಾ ಅವರು ನನಗೆ ಕೊಟ್ಟಿದ್ದನ್ನು ವಾಪಸ್​​ ಹಿಂದಿರುಗಿಸುತ್ತಿದ್ದೇನೆ, ದೇವರ ಸೇವೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಾಯಿಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ಆರೋಗ್ಯ ಭಾಗ್ಯ ಎಂದು ನಂಬಿ ಆರೋಗ್ಯ ರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಅದೇ ರೀತಿ, ಸಾಯಿ ಸಂಸ್ಥಾನ ಕೂಡ ಬಾಬಾ ಅವರು ಮಾಡುತ್ತಿದ್ದ ಆರೋಗ್ಯ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ. ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಶಿರಡಿ ಕ್ಷೇತ್ರದಲ್ಲಿ ಉಚಿತ ಆಸ್ಪತ್ರೆ ಕಟ್ಟಿಸಿದ್ದಾರೆ. ಇದರಿಂದಾಗಿ ಎಷ್ಟೋ ಬಡ ಕುಟುಂಬಗಳಿಗೆ ಅನುಕೂಲವಾಗತ್ತಿದೆ. ಅದಕ್ಕಾಗಿ ಸಾಯಿ ಸಂಸ್ಥಾನಕ್ಕೆ ಒಂದು ಕೋಟಿ ದೇಣಿಗೆ ನೀಡಿದ್ದೇನೆ‘‘ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಎಕ್ಸ್​ ರೇ ಯಂತ್ರ ದೇಣಿಗೆ ನೀಡಲು ಮುಂದಾದ ಭಕ್ತ: ದೇಶಾದ್ಯಂತ ಶಿರಡಿ ಸಾಯಿಬಾಬಾ ಭಕ್ತರಿದ್ದು, ನಿತ್ಯ ಶಿರಡಿ ಸಾಯಿಬಾಬಾ ಸನ್ನಿದಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹಾಗೇ ಅತಿ ಹೆಚ್ಚು ಭಕ್ತರು ಆಗಮಿಸುವುದರಿಂದ ದೇವಸ್ಥಾನಕ್ಕೆ ದೇಣಿಗೆಯು ಸಹ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಸುಬ್ಬಾ ರೆಡ್ಡಿ ಎಂಬ ಭಕ್ತರೊಬ್ಬರು ಸಾಯಿ ಸಂಸ್ಥಾನ ನಡೆಸುತ್ತಿರುವ ಆಸ್ಪತ್ರೆಗೆ ಬರೋಬ್ಬರಿ 46 ಲಕ್ಷ ಮೌಲ್ಯದ ಎಕ್ಸ್​ ರೇ ಯಂತ್ರವನ್ನು ದೇಣಿಗೆ ಯಾಗಿ ನೀಡಲು ಸಂಕಲ್ಪ ಮಾಡಿಕೊಂಡಿದ್ದಾರೆ.

ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್​ ಜಾಧವ್, ’’ಭಕ್ತರು ದೇಣಿಗೆ ರೂಪದಲ್ಲಿ ನೀಡುವ ಹಣವನ್ನು ಸಾಯಿಬಾಬಾ ಸಂಸ್ಥಾನವು ದೈನಂದಿನ ಕೆಲಸಕ್ಕಾಗಿ ಮತ್ತು ಶಿರಡಿ ಕ್ಷೇತ್ರದ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತದೆ. ಬುಧವಾರ ಸಾಯಿ ಸಂಸ್ಥಾನಕ್ಕೆ ಭಕ್ತರೊಬ್ಬರು ಒಂದು ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ‘‘ ಎಂದು ತಿಳಿಸಿದ್ದಾರೆ. ಒಂದು ಕೋಟಿ ದೇಣಿಗೆ ನೀಡಿದ ಹೈದರಾಬಾದ್​ ಮೂಲದ ರಾಜೇಶ್ವರ್​ ಎಂಬುವವರಿಗೆ ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್​ ಜಾಧವ್​ ಶಾಲು ಹೊದಿಸಿ, ಸಾಯಿಬಾಬಾ ಮೂರ್ತಿಯನ್ನು ನೀಡಿ ಗೌರವಿಸಿದರು.

ಕೊರೊನಾ ನಂತರ ಭಕ್ತರ ಸಂಖ್ಯೆ ಹೆಚ್ಚಳ: ಕೋವಿಡ್​ ಸಾಂಕ್ರಮಿಕ ರೋಗದ ಅಟ್ಟಹಾಸದ ಸಮಯುದಲ್ಲಿ ಹಲವಾರು ದೇವಸ್ಥಾನಗಳು ಭಕ್ತರಿಗೆ ಪ್ರವೇಶ ನಿಷೇಧಿಸಿತ್ತು, ಕೋವಿಡ್​ ಅವಧಿಯ ನಂತರ ದೇವಸ್ಥಾನಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಲು ಶುರು ಮಾಡಿದ್ದು, ಇದರಿಂದಾಗಿ ದೇವಸ್ಥಾನಗಳಲ್ಲಿ ದೊಡ್ಡ ಮೊತ್ತದ ಕಾಣಿಕೆಗಳು ಹರಿದು ಬರುತ್ತಿದೆ. ಅದೇ ರೀತಿ ಕೋವಿಡ್​ ಅವಧಿಯ ನಂತರ ಶಿರಡಿಯಲ್ಲಿ ಭಕ್ತರ ದಂಡು ಹರಿದು ಬಂದಿದ್ದು, ಸಾಯಿ ಬಾಬಾ ಅವರ ಕಾಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಈ ಸಮಯದಲ್ಲಿ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.

2 ರಿಂದ 3 ಕೋಟಿ ಭಕ್ತರ ಭೇಟಿ: ದೇಶದ ಶ್ರೀಮಂತ ದೇವಾಸ್ಥಾನಗಳ ಪಟ್ಟಿಯಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನವು ಒಂದಾಗಿದ್ದು, ವರ್ಷಕ್ಕೆ ಸುಮಾರು 398 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಇಲ್ಲಿಗೆ ಹರಿದು ಬರುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಸುಮಾರು ಎರಡರಿಂದ ಮೂರು ಕೋಟಿ ಭಕ್ತರು ಶಿರಡಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಎಂದು ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: 2ನೇ ರ‍್ಯಾಂಕ್‌ ಪಡೆದು ಸಿಎ ಪಾಸಾದ ಶಿಖಾ ಜೈನ್: ಟ್ಯೂಷನ್ ಇಲ್ಲದೇ ಉನ್ನತ ಸಾಧನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.