ETV Bharat / bharat

ಸೋದರಿಬ್ಬರು ಎಲ್ಲರೆದುರೆ ಯುವಕನೊಬ್ಬನನ್ನ ಥಳಿಸಿ ಕೊಲೆಗೈದರು.. ಸಿಸಿಟಿವಿ ದೃಶ್ಯ

author img

By

Published : Jun 4, 2022, 6:36 PM IST

ಆಜಾದ್‌ಪುರ ಗ್ರಾಮದಲ್ಲಿ ಯುವಕನೊಬ್ಬನನ್ನು ಸಹೋದರರಿಬ್ಬರು ಸೇರಿ ಬರ್ಬರವಾಗಿ ಹೊಡೆದು ಕೊಂದಿದ್ದಾರೆ..

man thrashed to death for demanding money for drugs in Delhi
ಯುವಕನನ್ನು ಥಳಿಸಿ ಕೊಂದ ಸಹೋದರರು

ನವದೆಹಲಿ : ಸಹೋದರರಿಬ್ಬರು ಸೇರಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನವದೆಹಲಿಯ ಆದರ್ಶ್‌ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಆಜಾದ್‌ಪುರ ಗ್ರಾಮದಲ್ಲಿ ನಡೆದಿದೆ. ಆದರೆ, ಇಡೀ ಘಟನೆ ನಡೆಯುವಾಗ ಸ್ಥಳೀಯರು ಮೂಕ ಪ್ರೇಕ್ಷಕರಂತೆ ನಿಂತುಕೊಂಡಿರುವುದು ಸಿಸಿ ಟಿವಿಯೊಂದರಲ್ಲಿ ದೃಶ್ಯ ಸೆರೆಯಾಗಿದೆ. ಯಾರೊಬ್ಬರು ಅಮಾಯಕ ಯುವಕನ ಪ್ರಾಣ ಉಳಿಸಲು ಮುಂದಾಗಿಲ್ಲ.

ಆರೋಪಿಗಳಿಬ್ಬರೂ ಯುವಕ ಸಾಯುವವರೆಗೂ ತಲೆಗೆ ದೊಡ್ಡ ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆಯುತ್ತಲೇ ಇದ್ದರು. ನರೇಂದ್ರ (28) ಎಂಬಾ ಮೃತ ಯುವಕ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಸೋದರರಿಬ್ಬರು ಯುವಕನೊಬ್ಬನನ್ನು ಥಳಿಸಿ ಕೊಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ..

ಈ ಮೂವರು ಆದರ್ಶನಗರ ನಿವಾಸಿಗಳು ಎನ್ನಲಾಗಿದೆ. ಆರೋಪಿ ರಾಹುಲ್ ಕಲಿ ಎಂಬಾತನ ಬಳಿ ಡ್ರಗ್ಸ್​ಗಾಗಿ ಮೃತ ನರೇಂದ್ರ ಪದೇಪದೆ ಹಣ ಕೇಳುತ್ತಿದ್ದನಂತೆ. ರಾಹುಲ್ ಕಲಿ ಕೋಪಗೊಂಡು ಆಜಾದ್‌ಪುರ ಗ್ರಾಮದ ದೇವಸ್ಥಾನದ ಬಳಿ ಬರುವಂತೆ ನರೇಂದ್ರನನ್ನು ಕರೆದಿದ್ದಾನೆ. ರಾಹುಲ್ ಕಲಿ ತನ್ನ ಸಹೋದರ ರೋಹಿತ್ ಕಲಿಯೊಂದಿಗೆ ದೇವಸ್ಥಾನ ತಲುಪಿದ್ದಾನೆ. ಅಲ್ಲಿಗೆ ನರೇಂದ್ರ ಬರುತ್ತಿದ್ದಂತೆ ಸಹೋದರರಿಬ್ಬರೂ ಸೇರಿ ಆತನನ್ನು ಥಳಿಸಿದ್ದಾರೆ.

ಇದನ್ನೂ ಓದಿ: ಅನಧಿಕೃತ ಕೇಬಲ್ ವಿರುದ್ಧ ಸಮರ ಸಾರಿದ ಬೆಸ್ಕಾಂ: ನಿರ್ದಾಕ್ಷಿಣ್ಯ ತೆರವು ಕಾರ್ಯಾಚರಣೆ

ಮೊದಲಿಗೆ ಬ್ಲೇಡ್​ನಿಂದ ಹಲ್ಲೆ ಮಾಡಿ ನಂತರ ಇಟ್ಟಿಗೆ, ಕಲ್ಲುಗಳಿಂದ ಹೊಡೆದು ಸಾಯಿಸಿ ಅಲ್ಲಿಂದ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವ ಆದರ್ಶ್‌ನಗರ ಪೊಲೀಸರು ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಆರೋಪಿಗಳು ಅಪರಾಧ ಕೃತ್ಯ ನಡೆಸಿದ್ದು ಸ್ಪಷ್ಟವಾಗಿ ಕಂಡಿದೆ. ಆರೋಪಿ ರಾಹುಲ್ ಕಲಿಯನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಸಹೋದರ ರೋಹಿತ್ ಕಲಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.