ETV Bharat / bharat

Karnataka Exit polls: ಮತದಾನೋತ್ತರ ಸಮೀಕ್ಷೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

author img

By

Published : May 10, 2023, 7:35 PM IST

Updated : May 11, 2023, 3:13 PM IST

ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ.

karnataka-assembly-election-2023-exit-poll
Karnataka Exit polls: ಮತದಾನೋತ್ತರ ಸಮೀಕ್ಷೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಮುಕ್ತಾಯವಾಗಿದೆ. ಮತದಾನೋತ್ತರ ಸಮೀಕ್ಷೆಗಳು ಪ್ರಕಟಿಸುತ್ತಿದೆ. ರಿಪಬ್ಲಿಕ್ ಟಿವಿ, ಟಿವಿ9 ಭಾರತವರ್ಷ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್​ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ, ಮತ್ತೆ ಅತಂತ್ರ ಫಲಿತಾಂಶದ ಭವಿಷ್ಯ ನುಡಿದಿದೆ. ಸಿ ವೋಟರ್ ಕಾಂಗ್ರೆಸ್​ಗೆ ಬಹುಮತದ ಅಂಚಿಗೆ ತಲುಪಲಿದೆ ಎಂದು ಭವಿಷ್ಯ ಹೇಳಿದ್ದರೆ, ನ್ಯೂಸ್ ನೇಷನ್ ಸಮೀಕ್ಷೆಯು ಬಿಜೆಪಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.

ರಿಪಬ್ಲಿಕ್ ಟಿವಿ
ರಿಪಬ್ಲಿಕ್ ಟಿವಿ
  • ರಿಪಬ್ಲಿಕ್ ಟಿವಿ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 85ರಿಂದ 100 ಸ್ಥಾನ, ಕಾಂಗ್ರೆಸ್​ಗೆ 94ರಿಂದ 108 ಸ್ಥಾನ, ಜೆಡಿಎಸ್​ಗೆ 24ರಿಂದ 32 ಸ್ಥಾನ ಬಂದಿದ್ದರೆ, 2ರಿಂದ 6 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
    ಟಿವಿ 9 ಭಾರತವರ್ಷ್
    ಟಿವಿ 9 ಭಾರತವರ್ಷ್
  • ಟಿವಿ 9 ಭಾರತವರ್ಷ್ ತನ್ನ ಚುನಾಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 88ರಿಂದ 98 ಸ್ಥಾನ, ಕಾಂಗ್ರೆಸ್​ಗೆ​ 99ರಿಂದ 109 ಸ್ಥಾನ, ಜೆಡಿಎಸ್​ಗೆ 21ರಿಂದ 26 ಸ್ಥಾನ ಹಾಗೂ 0ರಿಂದ 4 ಸ್ಥಾನಗಳಲ್ಲಿ ಇತರರು ಜಯ ದಾಖಲಿಸಿದ್ದಾರೆ ಎಂದು ಹೇಳಿದೆ.
    ಝೀ ನ್ಯೂಸ್​
    ಝೀ ನ್ಯೂಸ್​
  • ಝೀನ್ಯೂಸ್ ತನ್ನ ಸಮೀಕ್ಷೆಯಲ್ಲಿ ಬಿಜೆಪಿಗೆ 79ರಿಂದ 94 ಸ್ಥಾನ, ಕಾಂಗ್ರೆಸ್​ಗೆ 103ರಿಂದ 118 ಸ್ಥಾನ, ಜೆಡಿಎಸ್​ಗೆ​​ 25ರಿಂದ 33 ಸ್ಥಾನ ಮತ್ತು 2ರಿಂದ 5 ಸ್ಥಾನಗಳಲ್ಲಿ ಇತರರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
    ನ್ಯೂಸ್ ನೇಷನ್
    ನ್ಯೂಸ್ ನೇಷನ್
  • ನ್ಯೂಸ್ ನೇಷನ್ ತನ್ನ ಸಮೀಕ್ಷೆಯಲ್ಲಿ ಬಿಜೆಪಿಗೆ 114 ಸ್ಥಾನ, ಕಾಂಗ್ರೆಸ್​ಗೆ 86 ಸ್ಥಾನ, ಜೆಡಿಎಸ್​ಗೆ​ 21 ಸ್ಥಾನ ಹಾಗೂ ಇತರರೆಗೆ ಮೂರು ಸ್ಥಾನಗಳನ್ನು ನೀಡಿದೆ.
    ಸಿ ವೋಟರ್
    ಸಿ ವೋಟರ್
  • ಸಿ ವೋಟರ್ ​ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 83ರಿಂದ 95 ಸ್ಥಾನ, ಕಾಂಗ್ರೆಸ್​ಗೆ​ 100ರಿಂದ 112 ಸ್ಥಾನ, ಜೆಡಿಎಸ್​ಗೆ 21ರಿಂದ 29 ಸ್ಥಾನ ನೀಡಿದ್ದರೆ, ಇತರರು 2ರಿಂದ 8 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಯಾವುದೇ ಪಕ್ಷ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲು ಕನಿಷ್ಠ 113 ಸ್ಥಾನಗಳ ಅಗತ್ಯ ಇದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿತ್ತು. ಬಿಜೆಪಿ 104 ಸ್ಥಾನ, ಕಾಂಗ್ರೆಸ್​ 80, ಜೆಡಿಎಸ್​ 37 ಹಾಗೂ ಮೂವರು ಇತರರು ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್​ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಅತಿ ಕಡಿಮೆ ಸ್ಥಾನ ಹೊಂದಿದ್ದರೂ ಜೆಡಿಎಸ್​ಗೆ ಕಾಂಗ್ರೆಸ್ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಟ್ಟಿತ್ತು.

ಹೆಚ್​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್ ಮೈತ್ರಿಕೂಟವು 13 ತಿಂಗಳು ಅಧಿಕಾರ ನಡೆಸಿತ್ತು. ಆದರೆ, ನಂತರದಲ್ಲಿ ಕಾಂಗ್ರೆಸ್​ನ 14 ಮತ್ತು ಜೆಡಿಎಸ್​ನ ಮೂವರು ಸೇರಿ ಒಟ್ಟು 17 ಶಾಸಕರು ಬಂಡಾಯ ಎದ್ದಿದ್ದರು. ನಂತರ ಎಲ್ಲರೂ ಬಿಜೆಪಿ ಸೇರಿದ್ದರಿಂದ ಹೊಸ ಸರ್ಕಾರ ರಚನೆ ಮಾಡಲಾಗಿತ್ತು. ಇದಾದ ಬಳಿಕ ನಡೆದ ಉಪ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ತನ್ನ ಅಧಿಕಾರವನ್ನು ಭದ್ರ ಪಡಿಸಿಕೊಂಡಿತ್ತು. ಬಿಎಸ್​ ಯಡಿಯೂರಪ್ಪ ಎರಡು ವರ್ಷ ಅಧಿಕಾರಾವಧಿ ಪೂರೈಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಬಿಜೆಪಿ ನೇಮಿಸಿತ್ತು.

ಇದನ್ನೂ ಓದಿ: ಕರ್ನಾಟಕ ಎಲೆಕ್ಷನ್​ ಹವಾ: ಮತ ಚಲಾಯಿಸಿದ ರಾಜಕೀಯ ನಾಯಕರು, ಅಭ್ಯರ್ಥಿಗಳು! ಫೋಟೋಗಳಲ್ಲಿ ನೋಡಿ!!

Last Updated : May 11, 2023, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.