ಭಾರತ - ಆಸ್ಟ್ರೇಲಿಯಾ ಟಿ20 ಪಂದ್ಯ: ಹೈದರಾಬಾದ್​ನಲ್ಲಿ ಟಿಕೆಟ್​ಗಾಗಿ​ ಕಾಲ್ತುಳಿತ, 7 ಗಂಟೆ ನಂತರ ಆನ್​ಲೈನ್​ನಲ್ಲಿ ವಿತರಣೆ

author img

By

Published : Sep 22, 2022, 4:36 PM IST

Updated : Sep 22, 2022, 5:33 PM IST

india-and-australia-t20-match-stampede-at-gymkhana-grounds-hyderabad
ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ: ಹೈದರಾಬಾದ್​ನಲ್ಲಿ ಟಿಕೆಟ್​ಗಾಗಿ​ ನೂಕುನುಗ್ಗಲು, ಕಾಲ್ತುಳಿತ ()

ಸಿಕಂದರಾಬಾದ್ ಜಿಮ್ಖಾನಾ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ 20 ಪಂದ್ಯದ ಟಿಕೆಟ್​ಗಾಗಿ​ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾಗಿದೆ.

ಹೈದರಾಬಾದ್​ (ತೆಲಂಗಾಣ): ಹೈದರಾಬಾದ್​ನಲ್ಲಿ ಸೆಪ್ಟೆಂಬರ್​ 25ರಂದು ನಡೆಯಲಿರುವ ಭಾರತ - ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದ ಟಿಕೆಟ್​ ಖರೀದಿಗೆ ಕ್ರಿಕೆಟ್​ ಖರೀದಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇಂದು ಸಿಕಂದರಾಬಾದ್ ಜಿಮ್ಖಾನಾ ಮೈದಾನದಲ್ಲಿ ಟಿಕೆಟ್​ಗಾಗಿ​ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾಗಿದೆ. ಇದರಿಂದ ನಾಲ್ಕಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಇಂದಿನಿಂದ ಆಫ್​ಲೈನ್​ನಲ್ಲಿ ಟಿಕೆಟ್​ ಮಾರಾಟದ ಬಗ್ಗೆ ಘೋಷಿಸುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಜಿಮ್ಖಾನಾ ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಟಿಕೆಟ್​ ಖರೀದಿಗೆ ಸಾಕಷ್ಟು ಜನ ಬರುವ ನಿರೀಕ್ಷೆಯಿದ್ದರೂ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ ಎಂದು ಹೇಳಲಾಗಿದೆ.

ಹೈದರಾಬಾದ್​ನಲ್ಲಿ ಟಿಕೆಟ್​ಗಾಗಿ​ ನೂಕುನುಗ್ಗಲು, ಕಾಲ್ತುಳಿತ

ಹೀಗಾಗಿ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಇನ್ನು ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಬಹಳ ದಿನಗಳ ನಂತರ ಕ್ರಿಕೆಟ್​ ಪಂದ್ಯ: ಪಾಸ್ ವಿತರಣೆ ವಿಚಾರದಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ಹೈದರಾಬಾದ್​ ಸೇರಿದಂತೆ ತೆಲಂಗಾಣದ ಅಭಿಮಾನಿಗಳಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಅವಕಾಶವಿರಲಿಲ್ಲ.

  • #WATCH | Telangana: A stampede broke out at Gymkhana Ground after a huge crowd of cricket fans gathered there to get tickets for #INDvsAUS match, scheduled for 25th Sept at Rajiv Gandhi International Stadium, Hyderabad. Police baton charged to disperse the crowd

    4 people injured pic.twitter.com/J2OiP1DMlH

    — ANI (@ANI) September 22, 2022 " class="align-text-top noRightClick twitterSection" data=" ">

ಹೈದರಾಬಾದ್‌ನಲ್ಲಿ ಐಪಿಎಲ್ ಪಂದ್ಯಗಳನ್ನೂ ಆಯೋಜಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಬಹಳ ದಿನಗಳ ನಂತರ ಹೈದರಾಬಾದ್​ನಲ್ಲಿ ಪಂದ್ಯ ನಡೆಯುತ್ತಿದೆ. ಆದರೆ, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಈಗ ಅಭಿಮಾನಿಗಳಿಗೆ ಸುಲಭ ಪ್ರಕ್ರಿಯೆಯಲ್ಲಿ ಟಿಕೆಟ್ ನೀಡಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಕೇವಲ 2 ಕೌಂಟರ್‌ ತೆರೆದಿದ್ದ ಎಚ್‌ಸಿಎ: ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಕ್ರಮದ ವಿರುದ್ಧ ಪೊಲೀಸರು ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಟಿಕೆಟ್​ ಖರೀದಿ ವೇಳೆ ನಡೆದ ಘಟನೆಗೆ ಮುಖ್ಯ ಕಾರಣವೆಂದರೆ ಎಚ್‌ಸಿಎ ಮಾಡಿದ ತಪ್ಪು. ಯಾಕೆಂದರೆ, ಕೇವಲ 2 ಕೌಂಟರ್‌ಗಳನ್ನು ತೆರೆಯಲಾಗಿತ್ತು.

ಅಲ್ಲದೇ, ಈ ವೇಳೆ ಮಳೆ ಕೂಡ ಸುರಿಯಿತು. ಆಗ ಎಲ್ಲರೂ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಹೀಗಾಗಿ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗಡೆ ಬಿದ್ದಿದ್ದಾರೆ. ಒಟ್ಟಾರೆ ಘಟನೆ ಬಗ್ಗೆ ತನಿಖೆ ನಡಲಾಗುತ್ತಿದೆ ಎಂದು ಹೈದರಾಬಾದ್​ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್​ ಆಯುಕ್ತ ತಿಳಿಸಿದ್ದಾರೆ.

7 ಗಂಟೆ ನಂತರ ಆನ್​ಲೈನ್​ ಟಿಕೆಟ್​: ಜಿಮ್ಖಾನಾ ಮೈದಾನದಲ್ಲಿ ಟಿಕೆಟ್​​ಗಾಗಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾದ ಬೆನ್ನಲ್ಲೇ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಎಚ್ಚೆತ್ತುಕೊಂಡಿದೆ. ಇದೀಗ ಇಂದು ಸಂಜೆ 7 ಗಂಟೆಯ ನಂತರ ಆನ್‌ಲೈನ್ ಟಿಕೆಟ್‌ಗಳು ಲಭ್ಯವಿರುತ್ತವೆ ಎಂದು ಎಚ್‌ಸಿಎ ಸಂಘಟಕರು ಘೋಷಿಸಿದ್ದಾರೆ.

ಇನ್ನು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಈಗಾಗಲೇ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಪಂಜಾಬ್​ನಲ್ಲಿ ಮೊಹಾಲಿಯಲ್ಲಿ ಸೆಪ್ಟೆಂಬರ್​ 20ರಂದು ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನಾಲ್ಕು ವಿಕೆಟ್​ಗಳಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಸೆಪ್ಟೆಂಬರ್​ 23ರಂದು ನಾಗ್ಪುರದಲ್ಲಿ ಎರಡನೇ ಪಂದ್ಯ ಜರುಗಲಿದ್ದು, ಸೆಪ್ಟೆಂಬರ್​ 25ರಂದು ಹೈದರಾಬಾದ್​ನಲ್ಲಿ ನಡೆಯಲಿದೆ.

ಇದನ್ನು ಓದಿ:CPL 2022: ಒಂದೇ ಓವರ್​​ನಲ್ಲಿ 5 ಸಿಕ್ಸರ್​​ ಸಿಡಿಸಿದ ಸ್ಮಿತ್: 3 ಓವರ್​​​​ಗಳಲ್ಲಿ 74 ರನ್​​​​ಗಳಿಸಿದ ತಂಡ!

Last Updated :Sep 22, 2022, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.