ETV Bharat / bharat

ರಾಮಚರಿತಮಾನಸ ಮಹಾಕಾವ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ : ಸಮಾಜವಾದಿ ಪಕ್ಷದ ಎಂಎಲ್​ಸಿ ವಿರುದ್ಧ ಎಫ್​ಐಆರ್​

author img

By

Published : Jan 25, 2023, 4:50 PM IST

ರಾಮಚರಿತಮಾನಸ ಮಹಾಕಾವ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ - ಸಮಾಜವಾದಿ ಪಕ್ಷದ ಎಂಎಲ್​ಸಿ ವಿರುದ್ಧ ಬಿಜೆಪಿ ಕಾರ್ಯಕರ್ತ ದೂರು - ಐಪಿಸಿ ಸೆಕ್ಷನ್​ 295ಎ, 298, 504, 505(2), 153ಎ ಅಡಿಯಲ್ಲಿ ಪ್ರಕಣ ದಾಖಲು

fir-filed-against-sp-leade
ಸ್ವಾಮಿ ಪ್ರಸಾದ್​ ಮೌರ್ಯ

ಲಕ್ನೋ(ಉತ್ತರಪ್ರದೇಶ): 16ನೇ ಶತಮಾನದ ಮಹಾಕವಿ ಎಂದೇ ಪ್ರಸಿದ್ಧಿ ಪಡೆದಿರುವ ಹನುಮನ ಭಕ್ತ ಸಂತ ತುಳಸಿದಾಸ್​ ರಚಿತ ರಾಮಚರಿತಮಾನಸ ಮಹಾಕಾವ್ಯದ ಬಗ್ಗೆ ಸಮಾಜವಾದಿ ಪಕ್ಷದ ಎಂಎಲ್​ಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಶುಕ್ರವಾರ ಎಂಎಲ್​ಸಿ ಸ್ವಾಮಿ ಪ್ರಸಾದ್​ ಮೌರ್ಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಶಿವೇಂದ್ರ ಮಿಶ್ರಾ ಅವರು ಸ್ವಾಮಿ ಪ್ರಸಾದ್​ ವಿರುದ್ದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಈ ಬಗ್ಗೆ ಡಿಸಿಪಿ ಅಪರ್ಣಾ ಕೌಶಿಕ್ ಮಾತನಾಡಿ, ರಾಮಚರಿತಮಾನಸ ಮಹಾಕಾವ್ಯದ ಬಗ್ಗೆ ಸಮಾಜವಾದಿ ಪಕ್ಷದ ಎಂಎಲ್​ಸಿ ಸ್ವಾಮಿ ಪ್ರಸಾದ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರಿಂದ ಹಿಂದೂ ಧಾರ್ಮಿಕತೆಗೆ ಧಕ್ಕೆ ಉಂಟಾಗಿದ್ದು, ಕೂಡಲೇ ಅವರ ವಿರುದ್ದ ಪ್ರಕರಣ ದಾಖಲಿಸವಂತೆ ಬಿಜೆಪಿ ಪಕ್ಷದ ಕಾರ್ಯಕರ್ತ ದೂರನ್ನು ನೀಡಿದ್ದಾರೆ. ಈ ಹಿನ್ನೆಲೆ ಸ್ವಾಮಿ ಪ್ರಸಾದ್​ ವಿರುದ್ದ ಐಪಿಸಿ ಸೆಕ್ಷನ್​ 295ಎ, 298, 504, 505(2), 153ಎ ಅಡಿಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಅಲ್ಲದೇ ರಾಮಚರಿತಮಾನಸ ಮಹಾಕಾವ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಎಲ್ಲೆಡೆ ಹಿಂದೂ ಸಂಘಟನೆಗಳಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಎಂಎಲ್​ಸಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಇನ್ನು, ಜ.22ರಂದು ಎಂಎಲ್​ಸಿ ಸ್ವಾಮಿ ಪ್ರಸಾದ್​ ಮೌರ್ಯ, ರಾಮಚರಿತಮಾನಸ ಮಹಾಕಾವ್ಯದ ಕೆಲ ಭಾಗಗಳು 'ಜಾತೀಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತವೆ' ಆದ ಕಾರಣ ಕವಿತೆಯನ್ನು ನಿಷೇಧಿಸದಬೇಕು ಎಂದು ಒತ್ತಾಯಿಸಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತ ಶಿವೇಂದ್ರ ಮಿಶ್ರಾ ರಾಮಚರಿತಮಾನಸ ಮತ್ತು ಸಂತ ತುಳಸಿದಾಸ್​ ವಿರುದ್ಧ ಮೌರ್ಯ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಮೌರ್ಯ ಅವರ ಹೇಳಿಕೆ ಹಲವಾರು ನಾಯಕರು, ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ.. ಎಲೆಕ್ಟ್ರಿಕಲ್ ವಾಟರ್ ಹೀಟರ್​​ನಿಂದ ವಿದ್ಯುತ್ ಶಾಕ್: ದಂಪತಿ ಸಾವು

ಇನ್ನು, ಅವರ ಹೇಳಿಕೆಯ ಬೆನ್ನಲ್ಲೇ ಆರ್ಯವರ್ಟ್ ನಿರ್ಮಾಣ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಭೂಪೇಶ್ ಶರ್ಮಾ ಮತ್ತು ಸಂಘಟನೆಯ ರಾಷ್ಟ್ರೀಯ ವಕ್ತಾರ ಉಮೇಶ್ ಪಾಠಕ್ ಅವರು ಮೌರ್ಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಗರದ ಕಾಸ್ಗಂಜ್ ಸಮಾಜವಾದಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಅಲ್ಲದೇ ಮಹಾಕಾವ್ಯದ ಬಗ್ಗೆ ಅವಹೇಳನ ಮಾಡಿರುವ ಸ್ವಾಮಿ ಪ್ರಸಾದ್​ ಮೌರ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಕೃತಿಯನ್ನು ದಹನ ಮಾಡಿದರು.

ಇನ್ನು, ಸಮಾಜವಾದಿ ಪಕ್ಷದ ಎಂಎಲ್​ಸಿ ಸ್ವಾಮಿ ಪ್ರಸಾದ್​ ಮೌರ್ಯ ಈ ಹಿಂದೆ ಭಾರತೀಯ ಜನತಾ ಪಕ್ಷದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2022ರ ವಿಧಾನಸಭಾ ಚುನಾವಣೆಗೆ ಮೊದಲು ಮೌರ್ಯ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು.

ಇದನ್ನೂ ಓದಿ: ಲಖಿಂಪುರ ಹಿಂಸಾಚಾರ ಪ್ರಕರಣ: ಆರೋಪಿ ಆಶಿಶ್ ಮಿಶ್ರಾಗೆ ಮಧ್ಯಂತರ ಜಾಮೀನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.