ETV Bharat / bharat

ಶುಕ್ರವಾರದ ಪಂಚಾಂಗ, ರಾಶಿ ಭವಿಷ್ಯ: ಇಂದು ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಿರಿ

author img

By ETV Bharat Karnataka Team

Published : Dec 22, 2023, 5:00 AM IST

Etv bharat horoscope today
ಶುಕ್ರವಾರದ ಪಂಚಾಂಗ, ರಾಶಿ ಭವಿಷ್ಯ: ಇಂದು ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಿರಿ

Friday Horoscope: ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

ಇಂದಿನ ಪಂಚಾಂಗ:

ದಿನಾಂಕ : 22-12-2023, ಶುಕ್ರವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಶಿಶಿರ

ಮಾಸ: ಮಾರ್ಗಶಿರ

ಪಕ್ಷ: ಶುಕ್ಲ

ತಿಥಿ: ದಶಮಿ

ನಕ್ಷತ್ರ: ಅಶ್ವಿನಿ

ಸೂರ್ಯೋದಯ: ಮುಂಜಾನೆ 06:36 ಗಂಟೆಗೆ

ಅಮೃತಕಾಲ: ಬೆಳಗ್ಗೆ 08:01 ರಿಂದ 09:26 ಗಂಟೆ ತನಕ

ವರ್ಜ್ಯಂ : ಸಂಜೆ 6:15 ರಿಂದ 7:50 ಗಂಟೆವರೆಗೆ

ದುರ್ಮುಹೂರ್ತ: ಬೆಳಗ್ಗೆ 9:00 ರಿಂದ 9:48 ಹಾಗೂ 3:24 ರಿಂದ 4:12 ಗಂಟೆ ತನಕ

ರಾಹುಕಾಲ: ಬೆಳಗ್ಗೆ 10:51 ರಿಂದ 12:16 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:56 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ : ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ, ಆದರೆ ಕಠಿಣ ನಿರ್ಧಾರ ನಿಮಗೆ ಬದ್ಧರಾಗಿರಲು ನೆರವಾಗುತ್ತದೆ. ಭಾವನಾತ್ಮಕತೆ ನಿಮ್ಮ ಉದ್ದೇಶವನ್ನು ಅಲ್ಲಾಡಿಸುತ್ತದೆ, ಆದರೆ ಒಮ್ಮೆ ನಿರ್ಧರಿಸಿದ ನಂತರ ನೀವು ಅದಕ್ಕೆ ಅಂಟಿಕೊಳ್ಳುವುದು ಅಗತ್ಯ. ಅಲ್ಲದೆ, ನಿಮ್ಮ ದಾಪುಗಾಲು ಇಡುವಲ್ಲಿ ಆಘಾತವನ್ನು ತಡೆದುಕೊಳ್ಳಲು ಕಲಿಯಿರಿ.

ವೃಷಭ : ಇಂದು ಖಂಡಿತವಾಗಿಯೂ ನಿಮ್ಮ ಕಾಲು ಕೊಳೆ ಮಾಡಿಕೊಳ್ಳುವ ಯೋಜನೆಗೆ ದಿನವಲ್ಲ(ಪೆಡಿಕ್ಯೂರ್ ಆಗಬಹುದು). ನೀವು ಹೊಸ ಯೋಜನೆ ಪ್ರಾರಂಭಿಸುವುದನ್ನು ತಡ ಮಾಡಬಹುದು. ನಿಮ್ಮ ಪ್ರಿಯತಮೆಯೊಂದಿಗೆ ರೊಮ್ಯಾಂಟಿಕ್ ಪ್ರಯಾಣ ಅಥವಾ ನಿಮ್ಮನ್ನು ಸ್ಪಾದಲ್ಲಿ ದುಬಾರಿ ಮೇಕೋವರ್ ನಲ್ಲಿ ದಿನ ನಿಮ್ಮ ಇಂದಿನ ಜಡತ್ವವನ್ನು ಮೌಲ್ಯೀಕರಿಸುತ್ತದೆ. ಹೇಗೇ ಆದರೂ ಇದು ನಿಮ್ಮ ಜೇಬಿಗೆ ಭಾರವೇ ಸರಿ.

ಮಿಥುನ : ನೀವು ತರ್ಕ ಮತ್ತು ಭಾವನೆಗಳ ನಡುವೆ ಸಮತೋಲನ ಸಾಧಿಸಲು ಬಹಳ ಕಷ್ಟಪಡುತ್ತೀರಿ. ಜಗತ್ತಿನ ಮುಂದೆ ಅದರಲ್ಲಿ ನೀವು ಯಶಸ್ವಿಯಾದರೂ, ನೀವು ನಿಮ್ಮ ಮಿತ್ರರೊಂದಿಗೆ ವಿವೇಚನಾಯುಕ್ತರಾಗಿರುವುದಿಲ್ಲ. ನಿಮ್ಮ ಪ್ರಿಯತಮೆಯೊಂದಿಗೆ ನಿಮಗೆ ಅದ್ಭುತ ಸಮಯ ಕಳೆಯುತ್ತೀರಿ, ಆದರೆ ನಿಮ್ಮ ದೈಹಿಕ ಹೊರನೋಟ ನಿಮಗೆ ಕಾಳಜಿ ಉಂಟು ಮಾಡುತ್ತದೆ.

ಕರ್ಕಾಟಕ : ಈ ದಿನ ನಿಮಗೆ ಅದರಲ್ಲಿಯೂ ನಿಮ್ಮ ಬದಲಾಗುತ್ತಿರುವ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತೀವ್ರತೆಗಳ ದಿನವಾಗಿದೆ. ಆದಾಗ್ಯೂ, ನೀವು ನಿಮ್ಮನ್ನು ಅತಿಯಾದ ಭಾವನಾತ್ಮಕತೆ ಅಥವಾ ಅಪ್ರಾಯೋಗಿಕತೆಗೆ ತೊಡಗಿಕೊಳ್ಳಬಾರದು ಎಂದು ನಿಮ್ಮನ್ನು ನೀವು ನೆನಪಿಸಿಕೊಳ್ಳುತ್ತಿರಬೇಕು. ಇಲ್ಲದಿದ್ದಲ್ಲಿ, ನೀವು ಸಂಕೀರ್ಣ ಸನ್ನಿವೇಶಗಳಿಗೆ ಸಿಲುಕಿಕೊಳ್ಳಬಹುದು. ನೀವು ನಿಮ್ಮ ಆರೋಗ್ಯ ಮತ್ತು ತಿನ್ನುವ ಅಭ್ಯಾಸಗಳಿಗೆ ಗಮನ ನೀಡಬೇಕಾದ ಪ್ರಮುಖ ಸಮಯವಾಗಿದೆ. ಜಾಗರೂಕತೆಯಿಂದ ಬದಲಾವಣೆಯನ್ನು ಬೆಳೆಸಿಕೊಳ್ಳಿ. ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚಾಗಿದೆ!

ಸಿಂಹ : ನೀವು ನಿಮ್ಮ ಕುಟುಂಬದ ಕಿರಿಯ ಸದಸ್ಯರ ಕುರಿತು ಹೆಚ್ಚು ಗಮನ ನೀಡುತ್ತೀರಿ. ನೀವು ಮಕ್ಕಳನ್ನು ಅವರ ದೈನಂದಿನ ವೇಳಾಪಟ್ಟಿ ಸುಧಾರಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತೀರಿ. ಸಂಭ್ರಮಿಸುವ ಸಂದರ್ಭ ತಾನಾಗಿಯೇ ಬರುತ್ತದೆ. ಯಾವುದೇ ಒಂದು ಸ್ಪರ್ಧೆ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಯಕೆ ನಿಮಗೆ ಉಂಟಾಗುತ್ತದೆ.

ಕನ್ಯಾ : ನೀವು ಹಿಂದೆ ಮಾಡಿದ ಎಲ್ಲ ಒಳ್ಳೆಯ ಕೆಲಸಗಳಿಗೆ ನಿಮಗೆ ಇಂದು ಪುರಸ್ಕಾರ ಲಭಿಸುತ್ತದೆ. ನೀವು ಇತರರಿಂದ ಆದೇಶಗಳನ್ನು ಪಡೆಯುವ ಬದಲಿಗೆ ನಿಮ್ಮದೇ ರೀತಿಯಲ್ಲಿ ಕೆಲಸಗಳನ್ನು ನಿಭಾಯಿಸುತ್ತೀರಿ. ಆದಾಗ್ಯೂ, ಅತಿಯಾದ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ, ಶಾಂತ ಮತ್ತು ಸಮಚಿತ್ತತೆಯಿಂದ ಇರುವುದು ಉತ್ತಮ.

ತುಲಾ : ನೀವು ನಿಮ್ಮ ಸೌಂದರ್ಯ ಮತ್ತು ಹೊರನೋಟದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೀರಿ ಹಾಗೂ ಬ್ಯೂಟಿ ಪಾರ್ಲರ್ ಗೆ ಭೇಟಿ ಅಥವಾ ದುಬಾರಿ ಸೌಂದರ್ಯವರ್ಧಕಗಳನ್ನು ಕೊಳ್ಳುವುದರಿಂದ ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಹೊರನೋಟ ಹಾಗೂ ವ್ಯಕ್ತಿತ್ವ ಉತ್ತಮಪಡಿಸಲು, ಬಟ್ಟೆಗಳನ್ನು ಕೊಳ್ಳಲು ಶಾಪಿಂಗ್ ಮಾಡುವ ಸಾಧ್ಯತೆಯೂ ಇದೆ.

ವೃಶ್ಚಿಕ : ನಿಮ್ಮ ಜೀವನದಲ್ಲಿ ಮತ್ತೊಂದು ಸಾಧಾರಣ ದಿನವಾಗಿದ್ದು, ಉತ್ಸಾಹ ಹುಟ್ಟಿಸುವ ಯಾವುದೂ ನಿಮಗಾಗಿ ಇಲ್ಲ. ಆದಾಗ್ಯೂ, ಉತ್ಸಾಹದಿಂದಿರಿ ಮತ್ತು ಜೀವನಕ್ಕೆ ಕೊಂಚ ಮಸಾಲೆ ತರಲು ಪ್ರಯತ್ನ ನಡೆಸುತ್ತಲೇ ಇರಿ. ಗ್ರಹಗಳು ತಮ್ಮ ಮನಸ್ಥಿತಿ ಎಂದು ಬದಲಾಯಿಸಿಕೊಳ್ಳುತ್ತವೆ ಹಾಗೂ ಉತ್ಸಾಹದ ಭವಿಷ್ಯ ರೂಪಿಸುತ್ತವೆ ಎಂದು ನಿಮಗೆ ಗೊತ್ತಿಲ್ಲ. ಭರವಸೆಯನ್ನು ಜೀವಂತವಾಗಿರಿಸಿ.

ಧನು : ಕಷ್ಟಪಡದೇ ಇದ್ದರೆ ಫಲ ದೊರೆಯುವುದಿಲ್ಲ. ಆದ್ದರಿಂದ, ನಿಮ್ಮ ಕೆಲಸದಲ್ಲಿ ನೀವು ಅಪಾರ ತಳಮಳ ಎದುರಿಸಿದರೆ ಮತ್ತು ಕಷ್ಟಪಟ್ಟರೆ, ಅದಕ್ಕೆ ಪ್ರತಿಫಲ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಎಲ್ಲರೂ ಒಟ್ಟಿಗೆ ಸೇರಲು ಮತ್ತು ಬಂಧುಮಿತ್ರರೊಂದಿಗೆ ಸಂಜೆಯ ಸಂತೋಷ ಕೂಟ ನಡೆಸಲು ಇದು ಸಕಾಲ! ಒಟ್ಟಿನಲ್ಲಿ, ಸಾಕಷ್ಟು ವಿನೋದಮಯ ಚಟುವಟಿಕೆಗಳ ದಿನವಾಗಿದೆ.

ಮಕರ : ಯಶಸ್ಸಿನ ಬಾಗಿಲುಗಳನ್ನು ತೆರೆಯಲು ವಿಶ್ವಾಸವೇ ಮುಖ್ಯ. ಇಂದು, ನಿಮ್ಮ ಧನಾತ್ಮಕ ಪ್ರವೃತ್ತಿಯಿಂದ ನೀವು ನಿಮ್ಮ ಅಸ್ತಿತ್ವ ಸಾಬೀತುಪಡಿಸುತ್ತೀರಿ ಮತ್ತು ಯಶಸ್ಸಿಗೆ ಒಂದು ಹೆಜ್ಜೆ ಮುಂದೆ ಬರುತ್ತೀರಿ. ನೀವು ಉದಾಸೀನದ ವ್ಯಕ್ತಿಯಲ್ಲ. ನಿಮ್ಮ ಸಾಧನೆಗಳಿಗೆ ನೀವು ಮೌಲ್ಯ ನೀಡುತ್ತೀರಿ ಮತ್ತು ಪ್ರತಿ ನಿರ್ಧಾರವನ್ನೂ ಜಾಣ್ಮೆಯಿಂದ ಕೈಗೊಳ್ಳುತ್ತೀರಿ.

ಕುಂಭ : ನಿಮಗೆ ಇಂದು ಪಾರ್ಟಿ ಮಾಡಲು ಕಾರಣ ಬೇಕಿಲ್ಲ. ಅದು ನಿಮ್ಮ ಮಿತ್ರನ ವಿವಾಹವಾಗಿರಬಹುದು ಅಥವಾ ಹೊಸ ಕಾರು ಕೊಳ್ಳುವುದಿರಬಹುದು; ನೀವು ಜೀವನವನ್ನು ಇನ್ನಿಲ್ಲದಂತೆ ಸಂಭ್ರಮಿಸುವ ಮನಸ್ಥಿತಿಯಲ್ಲಿದ್ದೀರಿ! ಇದಲ್ಲದೆ, ಇಡೀ ದಿನ ನೀವು ಸರಾಗವಾಗಿ ಮುನ್ನಡೆಯುತ್ತೀರಿ. ನೀವು ವ್ಯಾಪಾರಿ ಅಥವಾ ವೃತ್ತಿಪರರಾಗಿರಲಿ, ನೀವು ನಿಮ್ಮ ಗುರಿಗೆ ಒಂದು ಹೆಜ್ಜೆ ಮುಂದೆ ಸಾಗುತ್ತೀರಿ.

ಮೀನ : ಗೊಂದಲ ಮತ್ತು ಅನಿಶ್ಚಿತತೆ ಕಪ್ಪುಮೋಡಗಳ ಹಾಗೆ ಇಂದಿನ ಆಕಾಶದಲ್ಲಿ ಮೂಡುತ್ತವೆ ಅವು ನಿಮ್ಮ ನಿರ್ಧಾರ ಕೈಗೊಳ್ಳುವ ನಡೆಯಲ್ಲಿ ಮಳೆ ಸುರಿಸುತ್ತವೆ ಮತ್ತು ನಿಮಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಕಷ್ಟವಾಗಿಸುತ್ತವೆ. ಗೊಂದಲದಿಂದ ದೂರವಿರಿ ಮತ್ತು ಯಾವುದೇ ಪ್ರಮುಖ ನಿರ್ಧಾರಗಳನ್ನು ಪ್ರಯತ್ನಿಸಿ ಮತ್ತು ತಡ ಮಾಡಿರಿ ಹಾಗೂ ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬದ್ಧರಾಗಿರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.