ETV Bharat / bharat

ವಿಪಸ್ಸನ ಧ್ಯಾನದ ಮೊರೆ ಹೋದ ಸಿಎಂ ಅರವಿಂದ್ ಕೇಜ್ರಿವಾಲ್.. ಮುಂದಿನ ಒಂದು ವಾರ ನಾಟ್​ ರಿಚೇಬಲ್​

author img

By

Published : Dec 24, 2022, 4:46 PM IST

ಇಂದಿನಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಒಂದು ವಾರ ವಿಪಸ್ಸನ ಧ್ಯಾನ- ಇವರ ಅನುಪಸ್ಥಿಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಕಾರ್ಯ ನಿರ್ವಹಣೆ- ಮುಖ್ಯಮಂತ್ರಿ ಧ್ಯಾನಕ್ಕೆ ತೆರಳುತ್ತಿರುವ ಸ್ಥಳದ ಹೆಸರು ನಿಗೂಢ

Chief Minister Arvind Kejriwal has undertaken Vipassan meditation for 1 week
ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ 1 ವಾರ ವಿಪಸ್ಸನ ಧ್ಯಾನ ಕೈಗೊಂಡಿದ್ದಾರೆd Kejriwal has undertaken Vipassan meditation for 1 week

ನವದೆಹಲಿ: ಚುನಾವಣಾ ಒತ್ತಡದಿಂದ ಹೊರಬಂದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದಿನಿಂದ ಒಂದು ವಾರ ಅಂದರೆ ಶನಿವಾರ ವಿಪಸ್ಸನ ಧ್ಯಾನಕ್ಕೆ ತೆರಳಿದ್ದು, ಜನವರಿ 1 ರಂದು ದೆಹಲಿಗೆ ಮರಳಲಿದ್ದಾರಂತೆ.

ಪ್ರತಿ ಬಾರಿಯೂ ಅರವಿಂದ್ ಕೇಜ್ರಿವಾಲ್ ವಿಪಸ್ಸನ ಧ್ಯಾನಕ್ಕಾಗಿ ಹಿಮಾಚಲ, ಜೈಪುರ, ಬೆಂಗಳೂರು ಮತ್ತು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು. ಆದರ ಈ ಬಾರಿ ಯಾವ ರಾಜ್ಯಕ್ಕೆ ಹೋಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗೆ ಮುಖ್ಯವಾಗಿ ವಿಪಸ್ಸನ ಧ್ಯಾನದ ನಿಯಮಗಳ ಪ್ರಕಾರ, ಮುಖ್ಯಮಂತ್ರಿ ಕೇಜ್ರಿವಾಲ್ ಇಂದಿನಿಂದ ಮುಂದಿನ ಏಳು ದಿನಗಳವರೆಗೆ ಯಾರೊಂದಿಗೂ ಸಂಪರ್ಕದಲ್ಲಿರುವುದಿಲ್ಲ. ಜೊತೆಗೆ ಅವರ ಈ ಅನುಪಸ್ಥಿಯಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕರ್ತವ್ಯ ನಿಭಾಯಿಸಲಿದ್ದಾರೆ.

  • आज विपासना साधना के लिये जा रहा हूँ। साल में एक बार जाने की कोशिश करता हूँ। 1 जनवरी को लौटूँगा

    कई सौ साल पहले भगवान बुद्ध ने ये विद्या सिखाई थी। क्या आपने विपासना की है? अगर नहीं, तो एक बार ज़रूर कीजिए। मानसिक, शारीरिक और आध्यात्मिक बहुत लाभ होता है।

    सबका मंगल हो!

    — Arvind Kejriwal (@ArvindKejriwal) December 24, 2022 " class="align-text-top noRightClick twitterSection" data=" ">

ಅರವಿಂದ್ ಕೇಜ್ರಿವಾಲ್​ ಅವರು ಕೈಗೊಳ್ಳುವ ವಿಪಸ್ಸನ ಧ್ಯಾನ ಸುಮಾರು ಏಳು ದಿನಗಳ ಕಾಲ ನಿರಂತರವಾಗಿ ಕುಳಿತು ಧ್ಯಾನ ಮಾಡಬೇಕು. ಅಲ್ಲದೆ ಈ ಸಮಯದಲ್ಲಿ ಮೌನವಾಗಿರುವುದರ ಜೊತೆಗೆ ಹೆಚ್ಚು ಮಾತನಾಡದೆ, ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದದೇ ಕಠಿಣ ನಿಯಮಗಳನ್ನು ಅನುಸರಿಸಬೇಕು.

ಕೇಜ್ರಿವಾಲ್ ಟ್ವೀಟ್: ಇಂದು ನಾನು ವಿಪಸ್ಸನ ಧ್ಯಾನಕ್ಕೆ ಹೋಗುತ್ತಿದ್ದೇನೆ. ನಾನು ವರ್ಷಕ್ಕೊಮ್ಮೆ ಹೋಗಲು ಪ್ರಯತ್ನಿಸುತ್ತೇನೆ. ಅಲ್ಲದೆ ಜನವರಿ 1 ರಂದು ದೆಹಲಿಗೆ ಹಿಂತಿರುಗುತ್ತೇನೆ. ನೂರಾರು ವರ್ಷಗಳ ಹಿಂದೆ ಭಗವಾನ್ ಬುದ್ಧನು ಈ ಜ್ಞಾನವನ್ನು ಬೋಧಿಸಿದನು. ನೀವು ವಿಪಸ್ಸನ ಮಾಡಿದ್ದೀರಾ? ಇಲ್ಲದಿದ್ದರೆ, ಒಮ್ಮೆ ಮಾಡಿ. ಇದರಿಂದ ಅನೇಕ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳಿವೆ. ಎಲ್ಲರಿಗೂ ಶುಭವಾಗಲಿ! ಎಂದು ತೆರಳುವ ಮುನ್ನ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ರೀತಿಯಾಗಿ ಟ್ವೀಟ್​ ಮಾಡಿದ್ದಾರೆ.

ವಿಪಸ್ಸನಾ ಎಂದರೇನು?: ಮುಂಜಾನೆಯಿಂದ ತಡರಾತ್ರಿಯವರೆಗೂ ಕಾರ್ಯನಿರತರಾಗಿ ಜನರು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಸಾಕಷ್ಟು ದೈಹಿಕ ಮತ್ತು ಮಾನಸಿಕ ಆಯಾಸವನ್ನು ಎದುರಿಸಬೇಕಾಗುತ್ತದೆ. ಇದರಿಂದ ಒಮ್ಮೆ ಹೊರಬರಲು ಜನರು ಎಲ್ಲ ಸಂಪರ್ಕವನ್ನು ಬಿಟ್ಟು ಕೆಲವು ಗಡಿಬಿಡಿಯನ್ನು ದೂರವಿಟ್ಟು ಶಾಂತಿಯುತವಾಗಿ ಕಳೆಯಲು ಈ ಧ್ಯಾನವನ್ನು ಅನುಸರಿಸುತ್ತಾರೆ. ಜೊತೆಗೆ ಈ ವಿಪಸ್ಸನ ಒತ್ತಡದಲ್ಲಿರುವ ಜನರಿಗೆ ಹೊಸ ಶಕ್ತಿಯನ್ನು ನೀಡುವ ಕೆಲಸ ಮಾಡುತ್ತದೆ.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ: ವಾಜಪೇಯಿ ಸೇರಿ ಮಾಜಿ ಪ್ರಧಾನಿಗಳ ಸ್ಮಾರಕಗಳಿಗೆ ರಾಹುಲ್ ಗಾಂಧಿ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.