ETV Bharat / bharat

ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಸೋಗಿನಲ್ಲಿ ವಂಚಿಸಿ ಯುವಕನ ಕೊಲೆ: ಆರೋಪಿ ಬಂಧನ

author img

By

Published : May 8, 2023, 4:16 PM IST

ಯುವತಿಯ ಸೋಗಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಯುವಕನಿಗೆ ವಂಚಿಸಿ, ಬಣ್ಣ ಬಯಲಾದ ಮೇಲೆ ಯುವಕನನ್ನು ಕೊಲೆ ಮಾಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

chhattisgarh-police-crack-murder-mystery-of-dongargarh-youth-accused-held
ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಸೋಗಿನಲ್ಲಿ ವಂಚಿಸಿ ಯುವಕನ ಕೊಲೆ : ಆರೋಪಿ ಬಂಧನ

ರಾಜನಂದಗಾಂವ್ (ಛತ್ತೀಸ್‌ಗಢ): ಯುವತಿಯ ಸೋಗಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬನಿಗೆ ವಂಚಿಸಿ, ಬಳಿಕ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಛತ್ತೀಸ್​​ಗಢದ ಮೇಧಾ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಎಲ್​ಬಿ ನಗರ ನಿವಾಸಿ ಕೋಮೇಶ್​ ಸಾಹು ಎಂದು ಗುರುತಿಸಲಾಗಿದೆ.

ಇಲ್ಲಿನ ಮೇಧಾ ಗ್ರಾಮದಲ್ಲಿ ಕೋಮೇಶ್​​ ಸಾಹು ಎಂಬವರನ್ನು ಚೂರಿ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಮತ್ತು ಕೋಮೇಶ್​ನ ಬ್ಯಾಂಕ್​ ಖಾತೆಗಳ ವಿವರವನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಕೋಮೇಶ್​ ಸಾಹು ಮತ್ತೋರ್ವ ವ್ಯಕ್ತಿಗೆ ಬ್ಯಾಂಕ್​ ಖಾತೆಯಿಂದ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ದೇವೇಂದ್ರ ಸಿನ್ಹಾ ಅಲಿಯಾಸ್​ ಸೋನು ಎಂಬವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ದೇವೇಂದ್ರ ಸಿನ್ಹಾ ಕೋಮೇಶ್​ ಸಾಹುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ದೇವೇಂದ್ರ ಸಿನ್ಹಾ, ಯುವತಿಯ ಸೋಗಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮೇಶ್​ ಸಾಹುವೊಂದಿಗೆ ಗೆಳೆತನ ಮಾಡಿದ್ದ. ತನ್ನನ್ನು ತಾನು ಮಾನಸಿ ಎಂದು ಹೇಳಿಕೊಂಡಿದ್ದ ದೇವೇಂದ್ರ, ಕಳೆದ ಎಂಟು ತಿಂಗಳುಗಳಿಂದ ಯುವತಿಯ ಸೋಗಿನಲ್ಲಿ ಸಂದೇಶ ರವಾನಿಸುತ್ತಿದ್ದ. ಅಲ್ಲದೇ ದೇವೇಂದ್ರ ಮತ್ತು ಕೋಮೇಶ್​ ಸಾಹು ವಾಟ್ಸ್​ಆ್ಯಪ್​​ನಲ್ಲಿ ಪರಸ್ಪರ ಸಂದೇಶ ರವಾನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ಕಳೆದ ಮೇ.3 ರಂದು ದೇವೇಂದ್ರ ಕೋಮೇಶ್​ಗೆ ಕರೆ ಮಾಡಿ ಮೇಧಾ ಗ್ರಾಮಕ್ಕೆ ಬರುವಂತೆ ಹೇಳಿದ್ದ. ಇಲ್ಲಿ ಕೋಮೇಶ್​ ಮಾನಸಿಗಾಗಿ ಕಾದು ಕುಳಿತಿದ್ದ.

ಈ ವೇಳೆ ಕೋಮೇಶ್​​ ದೇವೇಂದ್ರನ ಮೊಬೈಲ್​​​ ನೋಡಿದ್ದಾನೆ. ಇದರಲ್ಲಿ ಮಾನಸಿ ಎಂಬ ಹೆಸರಿನ ವಾಟ್ಸ್ಆ್ಯಪ್​​​ ಚಾಟ್​ ಇರುವುದನ್ನು ಕಂಡು ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಕೋಮೇಶ್​ ಮತ್ತು ದೇವೇಂದ್ರ ನಡುವೆ ಈ ವಿಚಾರವಾಗಿ ವಾಗ್ವಾದ ನಡೆದಿದೆ. ಈ ಸಂಬಂಧ ಕೋಮೇಶ್ ಪೊಲೀಸ್​ ಠಾಣೆಗೆ ದೂರು ನೀಡುವುದಾಗಿ ದೇವೇಂದ್ರನನ್ನು ಬೆದರಿಸಿದ್ದಾನೆ. ಹಾಗಾಗಿ ದೇವೇಂದ್ರ ಕೋಮೇಶ್​ಗೆ ಹಣ ಕೊಡುವುದಾಗಿ ಹೇಳಿದ್ದ. ಬಳಿಕ ಇಬ್ಬರು ತಮ್ಮ ತಮ್ಮ ಮನೆಗೆ ತೆರಳಿದ್ದು, ಮತ್ತೆ ಇಬ್ಬರೂ ಸಂಜೆ ಭೇಟಿ ಮಾಡಿದ್ದಾರೆ. ಈ ವೇಳೆ, ದೇವೇಂದ್ರ ಕೋಮೇಶ್ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಕೋಮೇಶ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ​ಪೊಲೀಸ್​ ಅಧಿಕಾರಿ ಲಖನ್ ಪಟ್ಲೆ​​, ಯುವತಿಯ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿ ಕೊಲೆ ಮಾಡಲಾಗಿದೆ. ಮೋಸ ಹೋದ ವ್ಯಕ್ತಿಯನ್ನೇ ಆರೋಪಿಯು ಚೂರಿನಿಂದ ಇರಿದು ಕೊಂದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಯಿಂದ ಒಂದು ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ ಚಾಕು ಮತ್ತು ಮೊಬೈಲ್​ ಫೋನ್​ನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಪೋಷಕರೇ ಎಚ್ಚರ! ಪ್ಲೇ ಝೋನ್​ನಲ್ಲಿ ಆಟವಾಡಲು ಹೋಗಿ 4 ಬೆರಳು ಕಳ್ಕೊಂಡ 3 ವರ್ಷದ ಮಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.