ETV Bharat / bharat

ವಿರೋಧದ ನಡುವೆ ಬಿಹಾರ ಜಾತಿ ಗಣತಿ ಸಮೀಕ್ಷೆ ಪ್ರಕಟ: ರಾಜ್ಯದಲ್ಲಿ ಶೇ.63 ರಷ್ಟು ಇಬಿಸಿ, ಒಬಿಸಿ ಜನಸಂಖ್ಯೆ

author img

By ANI

Published : Oct 2, 2023, 3:29 PM IST

ಬಿಹಾರದಲ್ಲಿ ನಡೆಸಲಾಗಿದ್ದ ಜಾತಿ ಗಣತಿಯನ್ನು ಅಲ್ಲಿನ ಸರ್ಕಾರ ಇಂದು ಪ್ರಕಟ ಮಾಡಿದೆ. ಸಮೀಕ್ಷೆಯನ್ನು ಕೇಂದ್ರ ಸರ್ಕಾರವೇ ನಡೆಸಬೇಕು ಎಂಬ ವಾದದ ಮಧ್ಯೆ ಈ ವರದಿ ಬಿಡುಗಡೆ ಮಾಡಲಾಗಿದೆ.

ಬಿಹಾರ ಜಾತಿ ಗಣತಿ ಸಮೀಕ್ಷೆ ಪ್ರಕಟ
ಬಿಹಾರ ಜಾತಿ ಗಣತಿ ಸಮೀಕ್ಷೆ ಪ್ರಕಟ

ಪಾಟ್ನಾ (ಬಿಹಾರ) : ರಾಜಕೀಯ ರಣತಂತ್ರಕ್ಕೆ ಅಗತ್ಯ ಅಸ್ತ್ರವಾಗಿರುವ ಜಾತಿಗಣತಿಯನ್ನು ದೇಶಾದ್ಯಂತ ನಡೆಸಬೇಕು ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಬಿಹಾರದಲ್ಲಿ ಜಾತಿ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ನಿತೀಶ್​ಕುಮಾರ್​ ನೇತೃತ್ವದ ಮೈತ್ರಿ ಸರ್ಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಶೇಕಡಾ 63 ಪ್ರತಿಶತ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಇದ್ದಾರೆ ಎಂದು ಅಂಕಿಅಂಶಗಳು ಹೇಳಿವೆ.

ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅತ್ಯಂತ ಹಿಂದುಳಿದ ವರ್ಗದವರಿದ್ದಾರೆ. ಅವರ ಸಂಖ್ಯೆ ಶೇಕಡಾ 36.01 ರಷ್ಟಿದೆ. ಹಿಂದುಳಿದ ವರ್ಗದವರು ಶೇಕಡಾ 27.12 ರಷ್ಟಿದ್ದಾರೆ. ಈ ಎರಡು ಸಮುದಾಯಗಳ ಒಟ್ಟು ಪ್ರಮಾಣ 63 ಪ್ರತಿಶತದಷ್ಟಿದೆ. ಕುರ್ಮಿಗಳು 2.87 ಪ್ರತಿಶತದಷ್ಟಿದ್ದು, ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸಬೇಕು ಎಂಬ ವಾದವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್​, ಯಾವುದೇ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಬೆನ್ನಲ್ಲೇ, ಬಿಹಾರ ಸರ್ಕಾರ ತಾನು ನಡೆಸಿದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.

ರಾಜ್ಯದ ಆಡಳಿತಾರೂಢ ರಾಷ್ಟ್ರೀಯ ಜನತಾ ದಳ (ಯುನೈಟೆಡ್) ಕಳೆದ ವರ್ಷ ಜಾತಿ ಸಮೀಕ್ಷೆ ನಡೆಸುವ ಪ್ರಸ್ತಾಪ ಮುಂದಿಟ್ಟಿತ್ತು. ಪ್ರಸ್ತುತ ಇರುವ ಮೀಸಲು ಕೋಟಾಗಳು ಹಿಂದುಳಿದ ವರ್ಗಗಳ ಈಗಿನ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿತ್ತು. ಈ ಕಾರಣಕ್ಕಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿಯನ್ನು ನೀಡುವ ಸಲುವಾಗಿ ಜಾತಿ ಗಣತಿ ನಡೆಸಲು ಮುಂದಾಗಿತ್ತು. ಇದರ ಜೊತೆಗೆ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಟಕ್ಕರ್​ ನೀಡುವ ಉದ್ದೇಶವೂ ಇದರಲ್ಲಿತ್ತು.

ಎರಡು ಹಂತದಲ್ಲಿ ಸಮೀಕ್ಷೆ: ಜಾತಿ ಗಣತಿ ಸಮೀಕ್ಷೆಯನ್ನು ರಾಜ್ಯದಲ್ಲಿ 2 ಹಂತದಲ್ಲಿ ನಡೆಸಲಾಯಿತು. ಮೊದಲು ಜನವರಿ 7 ರಿಂದ 21ರ ವರೆಗೆ ನಡೆದರೆ, 2ನೇ ಹಂತದ ಸಮೀಕ್ಷೆ ಏಪ್ರಿಲ್ ಮತ್ತು ಆಗಸ್ಟ್​ನಲ್ಲಿ ನಡೆಸಲಾಗಿತ್ತು. ಸಾಮಾಜಿಕ, ಆರ್ಥಿಕ, ಜಾತಿ, ಉದ್ಯೋಗ, ಶಿಕ್ಷಣ, ವೈವಾಹಿಕ ಸ್ಥಿತಿ, ಭೂ ಹಿಡುವಳಿಗಳು ಮತ್ತು ಆಸ್ತಿ ಮಾಲೀಕತ್ವದ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ.

ವಿವಿಧ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ನೈಜ ಚಿತ್ರಣವನ್ನು ಅರಿಯಲು ಸಮೀಕ್ಷೆ ನಡೆಸಲಾಗಿದೆ. ಅದು ಪೂರ್ಣಗೊಂಡು ದಾಖಲೆಗಳ ವಿಶ್ಲೇಷಣೆ ನಡೆಸಿ ಈಗ ಪ್ರಕಟಿಸಲಾಗಿದೆ. ದೇಶಾದ್ಯಂತ ಸಮೀಕ್ಷೆಯನ್ನು ನಡೆಸದ ಕಾರಣ ನಮ್ಮ ಸರ್ಕಾರವೇ ಮುಂದಾಗಿ ಮಾಡಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.

ರಾಜ್ಯದಲ್ಲಿರುವ ಜಾತಿಗಳ ಪ್ರಮಾಣ: ಅತ್ಯಂತ ಹಿಂದುಳಿದ ವರ್ಗಗಳ(EBC) ಜನಸಂಖ್ಯೆಯು 36.01% ರಷ್ಟು ಇದ್ದು, ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣವಾಗಿದೆ. ಹಿಂದುಳಿದ ವರ್ಗಗಳು ಶೇಕಡಾ 27.12, ಮೇಲ್ಜಾತಿಗಳು ಶೇಕಡಾ 15.52, ಪರಿಶಿಷ್ಟ ಜಾತಿಗಳು ಶೇಕಡಾ 19.65, ಪರಿಶಿಷ್ಟ ಪಂಗಡಗಳು ಶೇಕಡಾ 1.68 ರಷ್ಟಿದ್ದಾರೆ ಎಂದು ಎಂದು ಸಮೀಕ್ಷೆ ಹೇಳಿದೆ. ಹಿಂದುಳಿದ ವರ್ಗಗಳಲ್ಲಿ ಯಾದವರ ಜನಸಂಖ್ಯೆಯು 14.26% ರಷ್ಟಿದ್ದರೆ, ಕುಶ್ವಾಹ ಮತ್ತು ಕುರ್ಮಿಗಳು ಕ್ರಮವಾಗಿ ಶೇಕಡಾ 4.27 ಮತ್ತು ಶೇಕಡಾ 2.87 ರಷ್ಟಿದ್ದಾರೆ.

ವಿಪಕ್ಷಗಳೆಲ್ಲಾ ಸೇರಿಕೊಂಡು ರಚಿಸಿಕೊಂಡಿರುವ I.N.D.I.A ಕೂಟ ಕೂಡ ರಾಷ್ಟ್ರೀಯ ಜಾತಿ ಗಣತಿ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ಓದಿ: ಜಾತಿ ಗಣತಿ ತಡೆ ವಿಚಾರ.. ಶೀಘ್ರ ವಿಚಾರಣೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ಬಿಹಾರ ಸರ್ಕಾರ

ಪಾಟ್ನಾ (ಬಿಹಾರ) : ರಾಜಕೀಯ ರಣತಂತ್ರಕ್ಕೆ ಅಗತ್ಯ ಅಸ್ತ್ರವಾಗಿರುವ ಜಾತಿಗಣತಿಯನ್ನು ದೇಶಾದ್ಯಂತ ನಡೆಸಬೇಕು ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಬಿಹಾರದಲ್ಲಿ ಜಾತಿ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ನಿತೀಶ್​ಕುಮಾರ್​ ನೇತೃತ್ವದ ಮೈತ್ರಿ ಸರ್ಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಶೇಕಡಾ 63 ಪ್ರತಿಶತ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಇದ್ದಾರೆ ಎಂದು ಅಂಕಿಅಂಶಗಳು ಹೇಳಿವೆ.

ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅತ್ಯಂತ ಹಿಂದುಳಿದ ವರ್ಗದವರಿದ್ದಾರೆ. ಅವರ ಸಂಖ್ಯೆ ಶೇಕಡಾ 36.01 ರಷ್ಟಿದೆ. ಹಿಂದುಳಿದ ವರ್ಗದವರು ಶೇಕಡಾ 27.12 ರಷ್ಟಿದ್ದಾರೆ. ಈ ಎರಡು ಸಮುದಾಯಗಳ ಒಟ್ಟು ಪ್ರಮಾಣ 63 ಪ್ರತಿಶತದಷ್ಟಿದೆ. ಕುರ್ಮಿಗಳು 2.87 ಪ್ರತಿಶತದಷ್ಟಿದ್ದು, ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸಬೇಕು ಎಂಬ ವಾದವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್​, ಯಾವುದೇ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಬೆನ್ನಲ್ಲೇ, ಬಿಹಾರ ಸರ್ಕಾರ ತಾನು ನಡೆಸಿದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.

ರಾಜ್ಯದ ಆಡಳಿತಾರೂಢ ರಾಷ್ಟ್ರೀಯ ಜನತಾ ದಳ (ಯುನೈಟೆಡ್) ಕಳೆದ ವರ್ಷ ಜಾತಿ ಸಮೀಕ್ಷೆ ನಡೆಸುವ ಪ್ರಸ್ತಾಪ ಮುಂದಿಟ್ಟಿತ್ತು. ಪ್ರಸ್ತುತ ಇರುವ ಮೀಸಲು ಕೋಟಾಗಳು ಹಿಂದುಳಿದ ವರ್ಗಗಳ ಈಗಿನ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿತ್ತು. ಈ ಕಾರಣಕ್ಕಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿಯನ್ನು ನೀಡುವ ಸಲುವಾಗಿ ಜಾತಿ ಗಣತಿ ನಡೆಸಲು ಮುಂದಾಗಿತ್ತು. ಇದರ ಜೊತೆಗೆ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಟಕ್ಕರ್​ ನೀಡುವ ಉದ್ದೇಶವೂ ಇದರಲ್ಲಿತ್ತು.

ಎರಡು ಹಂತದಲ್ಲಿ ಸಮೀಕ್ಷೆ: ಜಾತಿ ಗಣತಿ ಸಮೀಕ್ಷೆಯನ್ನು ರಾಜ್ಯದಲ್ಲಿ 2 ಹಂತದಲ್ಲಿ ನಡೆಸಲಾಯಿತು. ಮೊದಲು ಜನವರಿ 7 ರಿಂದ 21ರ ವರೆಗೆ ನಡೆದರೆ, 2ನೇ ಹಂತದ ಸಮೀಕ್ಷೆ ಏಪ್ರಿಲ್ ಮತ್ತು ಆಗಸ್ಟ್​ನಲ್ಲಿ ನಡೆಸಲಾಗಿತ್ತು. ಸಾಮಾಜಿಕ, ಆರ್ಥಿಕ, ಜಾತಿ, ಉದ್ಯೋಗ, ಶಿಕ್ಷಣ, ವೈವಾಹಿಕ ಸ್ಥಿತಿ, ಭೂ ಹಿಡುವಳಿಗಳು ಮತ್ತು ಆಸ್ತಿ ಮಾಲೀಕತ್ವದ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ.

ವಿವಿಧ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ನೈಜ ಚಿತ್ರಣವನ್ನು ಅರಿಯಲು ಸಮೀಕ್ಷೆ ನಡೆಸಲಾಗಿದೆ. ಅದು ಪೂರ್ಣಗೊಂಡು ದಾಖಲೆಗಳ ವಿಶ್ಲೇಷಣೆ ನಡೆಸಿ ಈಗ ಪ್ರಕಟಿಸಲಾಗಿದೆ. ದೇಶಾದ್ಯಂತ ಸಮೀಕ್ಷೆಯನ್ನು ನಡೆಸದ ಕಾರಣ ನಮ್ಮ ಸರ್ಕಾರವೇ ಮುಂದಾಗಿ ಮಾಡಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.

ರಾಜ್ಯದಲ್ಲಿರುವ ಜಾತಿಗಳ ಪ್ರಮಾಣ: ಅತ್ಯಂತ ಹಿಂದುಳಿದ ವರ್ಗಗಳ(EBC) ಜನಸಂಖ್ಯೆಯು 36.01% ರಷ್ಟು ಇದ್ದು, ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣವಾಗಿದೆ. ಹಿಂದುಳಿದ ವರ್ಗಗಳು ಶೇಕಡಾ 27.12, ಮೇಲ್ಜಾತಿಗಳು ಶೇಕಡಾ 15.52, ಪರಿಶಿಷ್ಟ ಜಾತಿಗಳು ಶೇಕಡಾ 19.65, ಪರಿಶಿಷ್ಟ ಪಂಗಡಗಳು ಶೇಕಡಾ 1.68 ರಷ್ಟಿದ್ದಾರೆ ಎಂದು ಎಂದು ಸಮೀಕ್ಷೆ ಹೇಳಿದೆ. ಹಿಂದುಳಿದ ವರ್ಗಗಳಲ್ಲಿ ಯಾದವರ ಜನಸಂಖ್ಯೆಯು 14.26% ರಷ್ಟಿದ್ದರೆ, ಕುಶ್ವಾಹ ಮತ್ತು ಕುರ್ಮಿಗಳು ಕ್ರಮವಾಗಿ ಶೇಕಡಾ 4.27 ಮತ್ತು ಶೇಕಡಾ 2.87 ರಷ್ಟಿದ್ದಾರೆ.

ವಿಪಕ್ಷಗಳೆಲ್ಲಾ ಸೇರಿಕೊಂಡು ರಚಿಸಿಕೊಂಡಿರುವ I.N.D.I.A ಕೂಟ ಕೂಡ ರಾಷ್ಟ್ರೀಯ ಜಾತಿ ಗಣತಿ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ಓದಿ: ಜಾತಿ ಗಣತಿ ತಡೆ ವಿಚಾರ.. ಶೀಘ್ರ ವಿಚಾರಣೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ಬಿಹಾರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.