ETV Bharat / bharat

ಮಾನವೀಯತೆ ಪ್ರತೀಕ ಗಂಭೀರ್​... ಹೃದಯ ಶಸ್ತ್ರ ಚಿಕಿತ್ಸೆಗಾಗಿ ಪಾಕ್​ ಮಗುವಿಗೆ ಮಾಡಿದ್ರು ಸಹಾಯ!

author img

By

Published : Oct 19, 2019, 8:34 PM IST

ಜಮ್ಮು-ಕಾಶ್ಮೀರಕ್ಕಾಗಿ ನೀಡಿದ್ದ ಆರ್ಟಿಕಲ್​ 370 ರದ್ಧುಗೊಂಡ ಬಳಿಕ ಭಾರತ-ಪಾಕ್​ ನಡುವಿನ ಬಾಂಧವ್ಯ ಮತ್ತಷ್ಟು ದುರ್ಬಲಗೊಂಡಿದೆ. ಆದರೆ, ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್​ ಗಂಭೀರ ಮಾನವೀಯ ಕಾರ್ಯ ಮಾಡಿದ್ದಾರೆ.
ಗೌತಮ್​ ಗಂಭೀರ್​

ನವದೆಹಲಿ: ಮಾನವೀಯತೆ, ಸಾಮಾಜಿಕ ಕಳಕಳಿಗೆ ಹೆಸರಾಗಿರುವ ಕ್ರಿಕೆಟರ್ ಗೌತಮ್ ಗಂಭೀರ್ ಈ ಹಿಂದಿನಿಂದಲೂ ತಮ್ಮ ಕೈಯಿಂದ ಆಗುವ ಸಹಾಯ ಮಾಡುತ್ತಲೇ ಬಂದಿದ್ದಾರೆ. ಸದ್ಯ ಪಾಕಿಸ್ತಾನದ ಮಗುವಿಗಾಗಿ ಮಾಜಿ ಕ್ರಿಕೆಟರ್​ ಮನಸು ಕರಗಿದ್ದು, ಅವರಿಗೆ ಸಹಾಯ ಮಾಡಿದ್ದಾರೆ.

ಭಾರತ-ಪಾಕಿಸ್ತಾನದ ನಡುವೆ ಈ ಹಿಂದಿನಿಂದಲೂ ರಾಜಕೀಯ ಗುದ್ದಾಟ ನಡೆಯತ್ತಲೇ ಇದೆ. ಆದರೆ, ಇದೆಲ್ಲವನ್ನು ಬಂದಿಗಿಟ್ಟಿರುವ ಭಾರತ ಅನೇಕ ಸಲ ಮಾನವೀಯ ದೃಷ್ಠಿಯಿಂದ ನಡೆದುಕೊಂಡಿದೆ. ಸದ್ಯ ಗಂಭೀರ್​ ಕೂಡ ಅದಕ್ಕೆ ಸೇರಿಕೊಂಡಿದ್ದಾರೆ.

ಪಾಕಿಸ್ತಾನದ ಹೆಣ್ಣು ಮಗು ಹೃದಯ ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಬರಬೇಕಾಗಿತ್ತು. ಆದರೆ, ಅವರಿಗೆ ಭಾರತದ ವೀಸಾ ಸಿಕ್ಕಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟರ್​ ಹಾಗೂ ಬಿಜೆಪಿ ಸಂಸದ ಗಂಭೀರ್​ಗೆ ಟ್ವೀಟ್​ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ, ಭಾರತದ ವಿದೇಶಾಂಗ ಸಚಿವ ಜೈ ಶಂಕರ್​​ ಅವರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಅವರಿಗೆ ವೀಸಾ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

BJP MP Gautam Gambhir
ವೀಸಾ ಕೂಡಿಸಿದ ಗಂಭೀರ್​​

ಇದೇ ವಿಷಯವನ್ನ ಪಾಕ್​​ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ತಿಳಿಸಿರುವ ವಿದೇಶಾಂಗ ಸಚಿವರು, ತಕ್ಷಣವೇ ಅವರಿಗೆ ವೀಸಾ ನೀಡುವಂತೆ ತಿಳಿಸಿದ್ದಾರೆ. ಈಗಾಗಲೇ ಅವರಿಗೆ ವೀಸಾ ಲಭ್ಯವಾಗಿದ್ದು, ಹೆಣ್ಣು ಮಗು ಒಮೈಮಾ ಅಲಿ ಶಸ್ತ್ರ ಚಿಕಿತ್ಸೆಗಾಗಿ ಆಕೆಯ ಪೋಷಕರೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ಹಿಂದೆ ಕೂಡ ಭಾರತದ ವಿದೇಶಾಂಗ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್​ ಈ ರೀತಿಯ ಸಹಾಯ ಮಾಡಿ ಮಾನವೀಯತೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗಂಭೀರ್​, ನನಗೆ ಈ ಹಿಂದಿನಿಂದಲೂ ಪಾಕಿಸ್ತಾನ ಸರ್ಕಾರದ ಬಗ್ಗೆ ಸಿಟ್ಟಿದೆ. ಐಎಸ್​ಐ ಹಾಗೂ ಉಗ್ರ ಸಂಘಟನೆಗಳಿಗೆ ಅವರು ಸಹಾಯ ಮಾಡುತ್ತಿವೆ. ಪಾಕಿಸ್ತಾನದ ಆರು ವರ್ಷದ ಬಾಲಕಿ ಭಾರತದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾಳೆ ಎಂದರೆ ಅದಕ್ಕಿಂತಲೂ ಭಾರತದಲ್ಲಿ ಇನ್ನೇನು ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

Intro:Body:

ಮಾನವೀಯತೆ ಪ್ರತೀಕ ಗಂಭೀರ್​... ಹೃದಯ ಶಸ್ತ್ರ ಚಿಕಿತ್ಸೆಗಾಗಿ ಪಾಕ್​ ಮಗುವಿಗೆ ಮಾಡಿದ್ರು ಸಹಾಯ!



ನವದೆಹಲಿ: ಮಾನವೀಯತೆ, ಸಾಮಾಜಿಕ ಕಳಕಳಿಗೆ ಹೆಸರಾಗಿರುವ ಕ್ರಿಕೆಟರ್ ಗೌತಮ್ ಗಂಭೀರ್ ಈ ಹಿಂದಿನಿಂದಲೂ ತಮ್ಮ ಕೈಯಿಂದ ಆಗುವ ಸಹಾಯ ಮಾಡುತ್ತಲೇ ಬಂದಿದ್ದಾರೆ. ಸದ್ಯ ಪಾಕಿಸ್ತಾನದ ಮಗುವಿಗಾಗಿ ಮಾಜಿ ಕ್ರಿಕೆಟರ್​ ಮನಸು ಕರಗಿದ್ದು, ಅವರಿಗೆ ಸಹಾಯ ಮಾಡಿದ್ದಾರೆ. 

ಭಾರತ-ಪಾಕಿಸ್ತಾನದ ನಡುವೆ ಈ ಹಿಂದಿನಿಂದಲೂ ರಾಜಕೀಯ ಗುದ್ದಾಟ ನಡೆಯತ್ತಲೇ ಇದೆ. ಆದರೆ ಇದೆಲ್ಲವನ್ನು ಬಂದಿಗಿಟ್ಟಿರುವ ಭಾರತ ಅನೇಕ ಸಲ ಮಾನವೀಯ ದೃಷ್ಠಿಯಿಂದ ನಡೆದುಕೊಂಡಿದೆ. ಸದ್ಯ ಗಂಭೀರ್​ ಕೂಡ ಅದಕ್ಕೆ ಸೇರಿಕೊಂಡಿದ್ದಾರೆ. 



ಪಾಕಿಸ್ತಾನದ ಹೆಣ್ಣು ಮಗು ಹೃದಯ ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಬರಬೇಕಾಗಿತ್ತು. ಆದರೆ ಅವರಿಗೆ ಭಾರತದ ವೀಸಾ ಸಿಕ್ಕಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟರ್​ ಹಾಗೂ ಬಿಜೆಪಿ ಸಂಸದ ಗಂಭೀರ್​ಗೆ ಟ್ವೀಟ್​ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ .ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ, ಭಾರತದ ವಿದೇಶಾಂಗ ಸಚಿವ ಜೈ ಶಂಕರ್​​ ಅವರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಅವರಿಗೆ ವೀಸಾ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 



ಇದೇ ವಿಷಯವನ್ನ ಪಾಕ್​​ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ತಿಳಿಸಿರುವ ವಿದೇಶಾಂಗ ಸಚಿವರು, ತಕ್ಷಣವೇ ಅವರಿಗೆ ವೀಸಾ ನೀಡುವಂತೆ ತಿಳಿಸಿದ್ದಾರೆ. ಈಗಾಗಲೇ ಅವರಿಗೆ ವೀಸಾ ಲಭ್ಯವಾಗಿದ್ದು ಹೆಣ್ಣು ಮಗು ಒಮೈಮಾ ಅಲಿ ಶಸ್ತ್ರ ಚಿಕಿತ್ಸೆಗಾಗಿ ಆಕೆಯ ಪೋಷಕರೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ಹಿಂದೆ ಕೂಡ ಭಾರತದ ವಿದೇಶಾಂಗ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್​ ಈ ರೀತಿಯ ಸಹಾಯ ಮಾಡಿ ಮಾನವೀಯತೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದರು. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.