ETV Bharat / bharat

ಇಂಧನ ಮುಗಿದು ರೈತನ ಹೊಲದಲ್ಲೇ ಲ್ಯಾಂಡ್​ ಆದ ಚಾರ್ಟೆಡ್​ ವಿಮಾನ

author img

By

Published : Feb 18, 2020, 8:15 AM IST

plane
ವಿಮಾನ

ಅನಂತಪುರ ಜಿಲ್ಲೆಯ ಬ್ರಹ್ಮಸಮುದ್ರಂ ಮಂಡಲದ ಎರಾಡಿಕೆರಾ ಗ್ರಾಮದ ಹೊಲದಲ್ಲಿ ಸೋಮವಾರ ಬೆಳಿಗ್ಗೆ ಇಂಧನ ಕೊರತೆಯಿಂದಾಗಿ ಚಾರ್ಟೆಡ್​ ವಿಮಾನ ತುರ್ತಾಗಿ ಲ್ಯಾಂಡ್​ ಆಗಿದೆ.

ಆಂಧ್ರ ಪ್ರದೇಶ: ಚಾರ್ಟೆಡ್​ ವಿಮಾನವೊಂದು ಸೋಮವಾರ ಬೆಳಗ್ಗೆ ಅನಂತಪುರ ಜಿಲ್ಲೆಯ ಬ್ರಹ್ಮಸಮುದ್ರಂ ಮಂಡಲದ ಎರಾಡಿಕೆರಾ ಗ್ರಾಮದ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ತುರ್ತಾಗಿ ಹೊಲದಲ್ಲೇ ಲ್ಯಾಂಡಿಗ್​ ಆದ ಚಾರ್ಟೆಡ್​ ವಿಮಾನ

ನಾಲ್ಕು ಆಸನಗಳನ್ನು ಹೊಂದಿರುವ ಈ ವಿಮಾನದಲ್ಲಿ ಜಿಂದಾಲ್​ ಸ್ಟೀಲ್​ ಲಿಮಿಟೆಡ್​ನ ಇಬ್ಬರು ವ್ಯಕ್ತಿಗಳನ್ನು ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿ ಇಂಧನ ಕಡಿಮೆಯಿದ್ದ ಕಾರಣ ಹೊಲದಲ್ಲೇ ವಿಮಾನವನ್ನು ಪೈಲಟ್​ ತುರ್ತಾಗಿ ಲ್ಯಾಂಡ್​ ಮಾಡಿದ್ದಾರೆ.

ಹೊಲದಲ್ಲಿ ವಿಮಾನ ಲ್ಯಾಂಡಿಂಗ್​​ ಆಗಿದ್ದೇ ತಡ ಸುತ್ತಮುತ್ತಲ ಗ್ರಾಮಸ್ಥರು ವಿಮಾನವನ್ನು ನೋಡಲು ಮುಗಿಬಿದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.