ETV Bharat / bharat

ಸರ್ಕಾರಿ ನೌಕರರಿಗೆ ಬಂಪರ್‌.. ಶೇ.23ರಷ್ಟು ವೇತನ ಹೆಚ್ಚಳ.. ನಿವೃತ್ತಿ ವಯಸ್ಸು 2 ವರ್ಷ ಏರಿಕೆ ಮಾಡಿದ ಜಗನ್‌..

author img

By

Published : Jan 8, 2022, 12:51 PM IST

ವಿತ್ತ ಸಚಿವ ಬುಗ್ಗನ ರಾಜೇಂದ್ರನಾಥ್ ಮತ್ತು ಸರ್ಕಾರಿ ಸಲಹೆಗಾರರಾದ ಸಜ್ಜಲ ರಾಮಕೃಷ್ಣ ರೆಡ್ಡಿ ಅವರೊಂದಿಗೆ ಮುಖ್ಯಮಂತ್ರಿಗಳು ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಎರಡು ದಿನಗಳ ಕಾಲ ಮಾತುಕತೆ ನಡೆಸಿದ ನಂತರ ಈ ಘೋಷಣೆಗಳು ಹೊರ ಬಿದ್ದಿವೆ..

Andhra announces 23 percent pay hike  Andhra state govt staff retirement age raises  Andhra Pradesh news  Jagan Mohan Reddy govt hike government salary  Andhra CM Jagan Mohan Reddy news  ಶೇಕಡ 23ರಷ್ಟು ವೇತನ ಹೆಚ್ಚಳ ಮಾಡಿದ ಆಂಧ್ರ ಸರ್ಕಾರ  ಆಂಧ್ರ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಏರಿಕೆ  ಆಂಧ್ರಪ್ರದೇಶ ಸುದ್ದಿ  ವೇತನ ಹೆಚ್ಚಿಸಿದ ಜಗನ್​ ಮೋಹನ್​ ರೆಡ್ಡಿ ಸರ್ಕಾರ  ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಸುದ್ದಿ
ಶೇ.23ರಷ್ಟು ವೇತನ ಹೆಚ್ಚಳ, ನಿವೃತ್ತಿ ವಯಸ್ಸು 2 ವರ್ಷಕ್ಕೇರಿಸಿದ ಆಂಧ್ರ ಸರ್ಕಾರ

ಅಮರಾವತಿ : ರಾಜ್ಯ ಸರ್ಕಾರಿ ನೌಕರರು ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ತೆರೆ ಎಳೆದಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿರುವ ಅವರು, ಶೇ.23ರಷ್ಟು ವೇತನ ಹೆಚ್ಚಳ ಮಾಡಿದ್ದಲ್ಲದೇ ರಾಜ್ಯ ಸರ್ಕಾರಿ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು ಎರಡು ವರ್ಷಗಳಷ್ಟು ಹೆಚ್ಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಎತ್ತಿರುವ ಬೇಡಿಕೆಗಳ ಮೇಲಿನ ಚರ್ಚೆಯ ಎರಡನೇ ದಿನದಲ್ಲಿ ಈ ಘೋಷಣೆ ಹೊರ ಬಿದ್ದಿದೆ.

ಓದಿ: ಈಶ್ವರಪ್ಪ ಬಿಡಿ, ಅವರು ಈಶ್ವರ.. ಒಂದೊಂದು ಬಾರಿ ಒಂದೊಂದು ರೀತಿ ಇರುತ್ತಾರೆ.. ಸಚಿವ ಸೋಮಣ್ಣ

ಶುಕ್ರವಾರ ಇಲ್ಲಿನ ವಿವಿಧ ನೌಕರರ ಸಂಘಗಳ ಜತೆಗಿನ ಸಭೆಯಲ್ಲಿ ಮಾತನಾಡಿದ್ದ ಸಿಎಂ ಜಗನ್​ಮೋಹನ್​ ರೆಡ್ಡಿ,ಶೇ.23ರಷ್ಟು ಫಿಟ್‌ಮೆಂಟ್‌ ಘೋಷಿಸಿದ್ದರು. ಹೊಸ ವೇತನ ಶ್ರೇಣಿಗಳು ಜನವರಿ 2022ರಿಂದ ಜಾರಿಗೆ ಬರುತ್ತವೆ ಎಂದು ಘೋಷಿಸಿದ್ದಾರೆ. ಸರ್ಕಾರಿ ನೌಕರರಿಗೆ ಇನ್ನೊಂದು ಒಳ್ಳೆಯ ಸುದ್ದಿ ಅಂದ್ರೆ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದಿದ್ದಾರೆ.

ಮುಖ್ಯ ಕಾರ್ಯದರ್ಶಿ ಸಮಿತಿ ಸೂಚಿಸಿದ ಶೇ.14.29ರ ಪಿಆರ್‌ಸಿಗಿಂತ ಶೇ.9ರಷ್ಟು ಹೆಚ್ಚು ಫಿಟ್‌ಮೆಂಟ್‌ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಇದೇ ವೇಳೆ ಹೇಳಿದ್ದಾರೆ. ವೇತನ ಹೆಚ್ಚಳವು ಜುಲೈ 1, 2018ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಅದೇ ರೀತಿ, ವಿತ್ತೀಯ ಪ್ರಯೋಜನಗಳನ್ನು ಏಪ್ರಿಲ್ 1, 2020ರಿಂದ ಅನ್ವಯಿಸಲಾಗುತ್ತದೆ. ಆದರೆ, ವರ್ಧಿತ ವೇತನ ಶ್ರೇಣಿಯು ಬಾಕಿ ಇರುವ ಡಿಎಗಳೊಂದಿಗೆ ಜನವರಿ 2022 ರಿಂದ ಜಾರಿಗೆ ಬರಲಿದೆ ಸಿಎಂ ಜಗನ್​ ತಿಳಿಸಿದ್ದಾರೆ.

ರಾಜ್ಯಕ್ಕೆ ಪರಿಷ್ಕೃತ ನಿವೃತ್ತಿ ವಯಸ್ಸು ಹೆಚ್ಚಳ ಆದೇಶ ಜನವರಿ 2022ರಿಂದ ಜಾರಿಗೆ ಬರಲಿದೆ. ಎಲ್ಲ ಬಾಕಿ ಉಳಿದಿರುವ ಪಿಎಫ್, ಜಿಎಲ್‌ಐ, ರಜೆ ಎನ್‌ಕ್ಯಾಶ್‌ಮೆಂಟ್‌ಗಳು ಸೇರಿದಂತೆ ಇತ್ಯಾದಿಗಳನ್ನು ಏಪ್ರಿಲ್ 2022ರೊಳಗೆ ತೆರವುಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.

ಓದಿ: 'ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ': ಕೊರಗಜ್ಜ ದೈವದ ನುಡಿ

ರಾಜ್ಯ ಸರ್ಕಾರಕ್ಕೆ 10 ಸಾವಿರ ಕೋಟಿ ರೂ. ಹೊರೆ

ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸದ ಮೇಲೆ 10,247 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ. ಜೂನ್ ಅಂತ್ಯದೊಳಗೆ ಕೋವಿಡ್​ದಿಂದ ಮರಣ ಹೊಂದಿದ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಸಹಾನುಭೂತಿಯ ಆಧಾರದ ಮೇಲೆ ಉದ್ಯೋಗಗಳನ್ನು ಒದಗಿಸಲಾಗುವುದು ಎಂದು ರೆಡ್ಡಿ ಭರವಸೆ ನೀಡಿದ್ದಾರೆ.

ಉದ್ಯೋಗಿ ಆರೋಗ್ಯ ಯೋಜನೆಯನ್ನು (ಇಹೆಚ್ಎಸ್) ಉತ್ತಮಗೊಳಿಸಲು ಅವರು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿದರು. ಅನುಷ್ಠಾನಗೊಳಿಸಿ ಎರಡು ವಾರಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಆಂಧ್ರ ಸರ್ಕಾರ ಸೂಚಿಸಿದೆ. ಕೇಂದ್ರ ಸರ್ಕಾರದ ವೇತನ ಪರಿಷ್ಕರಣೆಯನ್ನು ಈಗಾಗಲೇ ಹಲವು ರಾಜ್ಯಗಳು ಜಾರಿಗೆ ತರುತ್ತಿವೆ. ಇನ್ನು ಮುಂದೆ ರಾಜ್ಯ ಸರ್ಕಾರವೂ ಅದನ್ನೇ ಅನುಸರಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ವಿತ್ತ ಸಚಿವ ಬುಗ್ಗನ ರಾಜೇಂದ್ರನಾಥ್ ಮತ್ತು ಸರ್ಕಾರಿ ಸಲಹೆಗಾರರಾದ ಸಜ್ಜಲ ರಾಮಕೃಷ್ಣ ರೆಡ್ಡಿ ಅವರೊಂದಿಗೆ ಮುಖ್ಯಮಂತ್ರಿಗಳು ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಎರಡು ದಿನಗಳ ಕಾಲ ಮಾತುಕತೆ ನಡೆಸಿದ ನಂತರ ಈ ಘೋಷಣೆಗಳು ಹೊರ ಬಿದ್ದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.