ETV Bharat / bharat

ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್​​: 11 ಮಂದಿ ನೀರುಪಾಲು, 3 ಮೃತದೇಹ ಹೊರಕ್ಕೆ

author img

By

Published : Sep 14, 2021, 1:35 PM IST

Updated : Sep 14, 2021, 2:31 PM IST

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವಾರ್ಧಾ ನದಿಯಲ್ಲಿ ಬೋಟ್ ಮುಳುಗಡೆಯಾಗಿ 11 ಮಂದಿ ನೀರುಪಾಲಾಗಿದ್ದಾರೆ.

A boat sank in the Wardha river in Amravati district, drowning 11 people
ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್​​: 11 ಮಂದಿ ನೀರುಪಾಲು, 3 ಮೃತದೇಹ ಹೊರಕ್ಕೆ

ಅಮರಾವತಿ, ಮಹಾರಾಷ್ಟ್ರ: ವಾರ್ಧಾ ನದಿಯಲ್ಲಿ ಬೋಟ್ ಮುಳುಗಿ 11 ಮಂದಿ ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗಲೇಗಾಂವ್ ಬಳಿ ದುರ್ಘಟನೆ ಸಂಭವಿಸಿದ್ದು, 3 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದೇ ಕುಟುಂಬದ ಹನ್ನೊಂದು ಮಂದಿ ಬೆಳಗ್ಗೆ 10 ಗಂಟೆ ಸುಮಾರಿಗೆ, ವಾರ್ಧಾ ನದಿಯ ಮೂಲಕ ಬೋಟ್​​ನಲ್ಲಿ ಮಹಾದೇವನ ದರ್ಶನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ನಿಫಾ ವೈರಸ್​ ಶಂಕಿತ ವ್ಯಕ್ತಿಯ ಸ್ವ್ಯಾಬ್ ಮಾದರಿ ಪುಣೆಯ ಲ್ಯಾಬ್​​ಗೆ ರವಾನೆ, ಒಂದು ದಿನದೊಳಗೆ ವರದಿ: ಜಿಲ್ಲಾಧಿಕಾರಿ

ಅಮರಾವತಿ, ಮಹಾರಾಷ್ಟ್ರ: ವಾರ್ಧಾ ನದಿಯಲ್ಲಿ ಬೋಟ್ ಮುಳುಗಿ 11 ಮಂದಿ ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗಲೇಗಾಂವ್ ಬಳಿ ದುರ್ಘಟನೆ ಸಂಭವಿಸಿದ್ದು, 3 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದೇ ಕುಟುಂಬದ ಹನ್ನೊಂದು ಮಂದಿ ಬೆಳಗ್ಗೆ 10 ಗಂಟೆ ಸುಮಾರಿಗೆ, ವಾರ್ಧಾ ನದಿಯ ಮೂಲಕ ಬೋಟ್​​ನಲ್ಲಿ ಮಹಾದೇವನ ದರ್ಶನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ನಿಫಾ ವೈರಸ್​ ಶಂಕಿತ ವ್ಯಕ್ತಿಯ ಸ್ವ್ಯಾಬ್ ಮಾದರಿ ಪುಣೆಯ ಲ್ಯಾಬ್​​ಗೆ ರವಾನೆ, ಒಂದು ದಿನದೊಳಗೆ ವರದಿ: ಜಿಲ್ಲಾಧಿಕಾರಿ

Last Updated : Sep 14, 2021, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.