ಕರ್ನಾಟಕ

karnataka

ಆನೇಕಲ್​: ನಡುರಸ್ತೆಯಲ್ಲೇ ಯುವಕನ ಬರ್ಬರ ಹತ್ಯೆ

By ETV Bharat Karnataka Team

Published : Feb 25, 2024, 10:58 AM IST

ಆನೇಕಲ್‌ನ ಮರಸೂರು ಸಮೀಪ ಯುವಕನೋರ್ವನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಕೊಲೆಗೈದಿದ್ದಾರೆ.

crime spot
ಹತ್ಯೆಗೈದ ಘಟನಾ ಸ್ಥಳ

ಆನೇಕಲ್​(ಬೆಂಗಳೂರು):ಆನೇಕಲ್‌ನ ಮರಸೂರು ಬಳಿ ಹಾದುಹೋಗುವರಸ್ತೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ ಮಾಡಲಾಗಿದೆ. ವಿಜಯ್ ಕುಮಾರ್(27) ಕೊಲೆಯಾದ ಯುವಕ. ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ವಿಜಯ್​ ಕುಮಾರ್‌ನ​ನ್ನು ಮನೆಯಿಂದ ಹೊರ ಕರೆದು ಎದುರಿನ ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ವಿಜಯ್​ ಕುಮಾರ್​ 2017ರಲ್ಲಿ ಮನೋಜ್ ಅಲಿಯಾಸ್ ಬಬ್ಲು ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಏಳು ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ಈ ಹಿಂದೆ ಕೊಲೆಯಾಗಿದ್ದ ಮನೋಜ್ ಕಡೆಯವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೋಜ್ ಕುಮಾರ್​ ಸಹೋದರ ಅರ್ಜುನ್​ ಕೊಲೆ ಮಾಡಿದ್ದಾನೆ ಎಂದು ವಿಜಯ್​ ಪೋಷಕರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಿ ವಿಜ್ಞಾನ ಮತ್ತು ಶ್ವಾನದಳ ಆಗಮಿಸಿ ತನಿಖೆ ನಡೆಸಿದೆ.

ಇದನ್ನೂ ಓದಿ:ಆನೇಕಲ್: ಬಿ.ಟೆಕ್‌ ವಿದ್ಯಾರ್ಥಿಯ ಶವ ನೀಲಗಿರಿ ತೋಪಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

ABOUT THE AUTHOR

...view details