ಕರ್ನಾಟಕ

karnataka

ಎರಡು ಮಕ್ಕಳ ತಾಯಿಗೆ ವಂಚಿಸಿ ವ್ಯಕ್ತಿ ಎಸ್ಕೇಪ್; ಪ್ರಿಯಕರನ ಮನೆ ಮುಂದೆ ತಮಟೆ ಹೊಡೆದು ಮಹಿಳೆಯ ಧರಣಿ - Love Dhoka Case

By ETV Bharat Karnataka Team

Published : Mar 22, 2024, 10:14 AM IST

ಮೋಸ ಮಾಡಿದ ಪ್ರಿಯಕರನ ಮನೆ ಮುಂದೆ ಮಹಿಳೆ ತಮಟೆ ಬಾರಿಸಿ ಪ್ರತಿಭಟನೆಗೆ ಕುಳಿತಿರುವ ಘಟನೆ ದೇವನಹಳ್ಳಿ ನಡೆದಿದೆ.

Etv Bharat
Etv Bharat

ದೇವನಹಳ್ಳಿ:ಹಣದಾಸೆಗೆ ಎರಡು ಮಕ್ಕಳ ತಾಯಿ ಜೊತೆ ಸಂಬಂಧ ಬೆಳೆಸಿ ಬಳಿಕ ಕೈ ಕೊಟ್ಟು ವಂಚಿಸಿರುವ ಆರೋಪ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಸ ಹೋದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡುವ ಜೊತೆಗೆ ತನ್ನ ಪ್ರಿಯಕರನ ಮನೆ ಮುಂದೆ ತಮಟೆ ಹೊಡೆದು, ಧರಣಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಜಯಮಹಲ್ ಲೇಔಟ್​ನ ಮಹಿಳೆ ವಂಚನೆಗೊಳಗಾದವರು. ಗಂಡ, ಇಬ್ಬರು ಮಕ್ಕಳ ಜೊತೆ ಮಹಿಳೆ ಜೀವನ ಮಾಡುತ್ತಿದ್ದರು. ಐದು ವರ್ಷದ ಹಿಂದೆ ಪುರುಷೋತ್ತಮ ಎಂಬ ವ್ಯಕ್ತಿ ಪರಿಚಯವಾಗಿದೆ. ಆ ಬಳಿಕ ಆತ ಬೆದರಿಕೆ ಹಾಕಿ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದಲ್ಲದೇ, ಗಂಡನಿಂದ ದೂರ ಮಾಡಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಮಹಿಳೆಗೆ ತವರು ಮನೆಯಿಂದ 10 ಲಕ್ಷ ರೂ ಹಣ ಬಂದಿತ್ತು. ಈ ಹಣದಲ್ಲಿ ಈತ ಸೈಟ್ ಖರೀದಿ ಮಾಡಿ, ಮನೆ ಕಟ್ಟಿಸಿದ್ದಾನೆ. ಮಹಿಳೆಯ ಬಳಿ ಹಣ ಖಾಲಿ ಆಗುತ್ತಿದ್ದಂತೆ ಕೆಳ ಜಾತಿ ಎಂದು ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದರಿಂದ ಮಹಿಳೆ ಬೀದಿಗೆ ಬಿದ್ದಿದ್ದಾರೆ. ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಆತನ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ಧಾರೆ. ಇದರಿಂದ ಆತ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಹಿಳೆ ಧರಣಿ ಮಾಡುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು, ವಿಚಾರಣೆ ನಡೆಸಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಇನ್ನು ಸಂತ್ರಸ್ತ ಮಹಿಳೆಗೆ ದಲಿತ ಸಂಘಟನೆ ಕೂಡ ಸಾಥ್ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಕಲ್ಯಾಣ ಮಂಟಪಕ್ಕೆ ಬಂದು ಮಂಗಳ ಸೂತ್ರ ಕಿತ್ತುಕೊಂಡ ಪ್ರಿಯಕರ! ಹಾಸನದಲ್ಲಿ ಮುರಿದು ಬಿತ್ತು ಮದುವೆ - Boyfriend Snatched Mangalasutra

ABOUT THE AUTHOR

...view details