ಕರ್ನಾಟಕ

karnataka

ತಂದೆಗೆ ಬೆಂಕಿ ಹಚ್ಚಿ, ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ ಮಗ - son killed his father

By ETV Bharat Karnataka Team

Published : Apr 5, 2024, 1:55 PM IST

ಹೈದರಾಬಾದ್​ನಲ್ಲಿ ಮದ್ಯವ್ಯಸನಿ ಮಗನೊಬ್ಬ ಸ್ವಂತ ತಂದೆಗೆ ಬೆಂಕಿ ಹಚ್ಚಿದ್ದಲ್ಲದೇ, ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

ತಂದೆ ಹತ್ಯೆಗೈದ ಮಗ
ತಂದೆ ಹತ್ಯೆಗೈದ ಮಗ

ಹೈದರಾಬಾದ್:ಕುಡಿತದ ಚಟಕ್ಕೆ ಒಳಗಾಗಿದ್ದ ಮಗ ಸ್ವಂತ ತಂದೆಗೆ ಬೆಂಕಿ ಹಚ್ಚಿದ್ದಲ್ಲದೇ, ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೈದರಾಬಾದ್​ನ ಆದಿಭಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣದ ಪೂರ್ಣ ವಿವರ: ಪೊಲೀಸರು ಹಾಗೂ ಸ್ಥಳೀಯರ ಮಾಹಿತಿ ಪ್ರಕಾರ, ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಕೊಲ್ಹಾಪುರದ ತಿರುಪತಿ ರವೀಂದರ್​ (60) ನಗರದ ಗಚ್ಚಿಬೌಲಿಯಲ್ಲಿ ವಾಸಿಸುತ್ತಿದ್ದರು. ಇವರು ರಿಯಲ್ ಎಸ್ಟೇಟ್ ಉದ್ಯಮಿ. ಇವರ ಮೊದಲ ಹೆಂಡತಿಯ ಮರಣದ ಬಳಿಕ, ಸುಧಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಇವರ ಮೊದಲ ಪತ್ನಿಯಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. ಅದರಲ್ಲಿ ಹಿರಿ ಮಗ ತೀರಿಕೊಂಡು ಹಲವು ವರ್ಷಗಳಾಗಿವೆ. ಕಿರಿಯ ಮಗ ವಿದೇಶದಲ್ಲಿ ನೆಲೆಸಿದ್ದಾನೆ.

ತಿರುಪತಿ ರವೀಂದರ್ ಕಳೆದ ಎರಡು ತಿಂಗಳ ಹಿಂದೆ ತುರ್ಕಯಾಂಜಲ್‌ನ ಆರೆಂಜ್ ಅವೆನ್ಯೂ ಕಾಲೋನಿಯಲ್ಲಿ ಹೊಸದಾಗಿ ಮನೆ ಖರೀದಿಸಿ ಎರಡನೇ ಪತ್ನಿ ಸುಧಾ ಅವರೊಂದಿಗೆ ವಾಸಿಸುತ್ತಿದ್ದರು. ತನ್ನ 2ನೇ ಹೆಂಡತಿಯಿಂದ ಅನುರಾಗ್ ಮತ್ತು ಅಭಿಷೇಕ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. ಇದರಲ್ಲಿ ಹಿರಿಯ ಮಗ ಅನುರಾಗ್ ಯಾವುದೇ ಕೆಲಸ ಮಾಡದೇ ಬರೀ ಗಾಂಜಾ ಮತ್ತಿತರ ಮಾದಕ ವ್ಯಸನಿಯಾಗಿದ್ದು, ಎಲ್ಲರ ಜತೆ ಸದಾ ಜಗಳವಾಡುತ್ತಿದ್ದ. ಈತನನ್ನು ಮದ್ಯವರ್ಜನ ಶಿಬಿರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದರೂ ಆತನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಈತನ ವಿರುದ್ಧ ಈಗಾಗಲೇ ಎರಡು ಪೊಲೀಸ್ ಪ್ರಕರಣಗಳಿದ್ದು, ಜೈಲಿಗೂ ಸೇರಿದ್ದ. ಮೂರು ದಿನಗಳ ಹಿಂದೆ ಈತ ಮನೆಗೆ ಪೆಟ್ರೋಲ್ ತಂದಿದ್ದ. ಇದನ್ನು ಪೋಷಕರು ಪ್ರಶ್ನಿಸಿದಾಗ ದ್ವಿಚಕ್ರ ವಾಹನಕ್ಕೆ ಎಂದು ಹೇಳಿದ್ದ. ಇದಾದ ಬಳಿಕ ಗುರುವಾರ ಮಧ್ಯಾಹ್ನ ಅನುರಾಗ್​ ತನ್ನ ಪೋಷಕರೊಂದಿಗೆ ಮನೆಯಲ್ಲಿ ಒಬ್ಬನೇ ಇದ್ದ. ತಾಯಿ ಕೋಣೆಯಲ್ಲಿ ಮಲಗಿದ್ದು ಆ ಕೋಣೆಯ ಬಾಗಿಲು ಹಾಕಿ ತನ್ನ ತಂದೆ ರವೀಂದರ್ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತೆರಳಿ ಅನುರಾಗ್​ ತನ್ನ ತಂದೆಯ ಮೇಲೆ ಪೆಟ್ರೋಲ್ ಸುರಿದಿದ್ದಾನೆ.

ಇದರಿಂದ ತಪ್ಪಿಸಿಕೊಂಡು ರವೀಂದರ್​ ಭಯದಿಂದ ಹೊರಗೆ ಓಡಿದ್ದ. ಆದರೂ ಬಿಡದ ಆತ ತಂದೆಯನ್ನು ಹಿಂಬಾಲಿಸಿ ಮನೆಯಿಂದ ಸ್ವಲ್ಪ ದೂರದಲ್ಲಿ ಮತ್ತೆ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೇ ತಂದೆಗೆ ಕಲ್ಲಿನಿಂದ ಹೊಡೆದು ಕೊಂದು ಪರಾರಿಯಾಗಿದ್ದಾನೆ. ಘಟನೆ ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಆದಿಭಟ್ಲ ಸಿಐ ರಾಘವೇಂದ್ರ ರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಮೃತನ ಪತ್ನಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ವಿವಾಹಿತ ಮಹಿಳೆಯನ್ನ ಪ್ರೀತಿಸುವ ನಾಟಕವಾಡಿ, ಬೇರೊಂದು ಯುವತಿ ಜೊತೆ ಮದುವೆ: ಯುವಕನ ವಿರುದ್ಧ ದೂರು - LOVE CHEATING CASE

ABOUT THE AUTHOR

...view details