ಕರ್ನಾಟಕ

karnataka

ರಾಜಕಾರಣಿಗಳು ಭ್ರಷ್ಟರಲ್ಲ, ವ್ಯವಸ್ಥೆ ನಮ್ಮನ್ನು ಕೆಡಿಸ್ತಿದೆ: ಸಚಿವ ಮಾಧುಸ್ವಾಮಿ

By

Published : Sep 24, 2022, 8:51 PM IST

ಚಿತ್ರದುರ್ಗ: ರಾಜಕಾರಣಿಗಳನ್ನು ಭ್ರಷ್ಟರು ಎಂದು ಹೇಳಲ್ಲ. ಏಕೆಂದ್ರೆ ಭ್ರಷ್ಟರನ್ನಾಗಿಸಿದ್ದು ಜನ. ವೋಟ್ ಹಾಕೋದ್ರಿಂದ ಹಿಡಿದು ಹಬ್ಬ ಹರಿದಿನಗಳಿಗೂ ಅವರನ್ನು ಪೀಡಿಸಿದ್ರೆ ಭ್ರಷ್ಟರಾಗದೇ ಇನ್ನೇನ್ ಆಗ್ತಾರೆ ಅಂತಾ ಸ್ವಾಮೀಜಿ ಈ ಹಿಂದೆ ಹೇಳಿದ್ದನ್ನು ನಾನು ಮೆಚ್ಚಿದ್ದೆ. ವ್ಯವಸ್ಥೆ ನಮ್ಮನ್ನು ಕೆಡಿಸ್ತಿದೆ, ನಾವು ಕೆಡ್ತಿಲ್ಲ. ನಮ್ಮ ಸ್ವಂತಕ್ಕೆ ಆಗುವಷ್ಟು ಇರುವವರೇ ರಾಜಕೀಯದಲ್ಲಿ ನಾವೆಲ್ಲ ಇರೋದು. ಕ್ರಿಯೆ ಮತ್ತು ಒತ್ತಡಗಳು ನಮ್ಮನ್ನು ಭ್ರಷ್ಟರನ್ನಾಗಿಸುತ್ತಿವೆ. ಭ್ರಷ್ಟಾಚಾರ ಮೂಲ ಆಲೋಚನೆ. ಭ್ರಷ್ಟಾಚಾರ ರಹಿತ ಬದುಕು ಅಷ್ಟೊಂದು ಸುಲಭಲ್ಲ. ಆದರೆ ಭ್ರಷ್ಟಾಚಾರ ಕಡಿಮೆ ಮಾಡುವ ಬಗ್ಗೆ ದೊಡ್ಡ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ABOUT THE AUTHOR

...view details