ಚಿಕ್ಕಮಗಳೂರು: ಇಲ್ಲಿನ ಜನರು ಸದಾ ಜೀವ ಕೈಯಲ್ಲಿಡಿದು ಓಡಾಡ್ತಾರೆ, ಹೇಗೆ ಜೀವ ಉಳಿಸಿಕೊಳ್ಳಬೇಕೋ ಎನ್ನುವ ಗೊಂದಲ ಅವರನ್ನು ಪ್ರತಿನಿತ್ಯ ಕಾಡುತ್ತಿರುತ್ತೆ. ರಸ್ತೆಯಲ್ಲಿ ಸಾಗುತ್ತಿದ್ದರೆ ಯಾವ ಸಂದರ್ಭದಲ್ಲಿ ಆತಂಕ ಎದುರಾಗಬಹುದೋ ಎನ್ನುವ ಭಯ, ಆನೆ ಹಾವಳಿಯಿಂದ ತತ್ತರಿಸಿ ಹೋಗಿರುವ ಚಿಕ್ಕಮಗಳೂರು ಜಿಲ್ಲೆ ಸಂತವೇರಿ ಘಾಟಿ ರಸ್ತೆ ಕಥೆ ಇದು, ಇಷ್ಟಕ್ಕೂ ಇದು ಅಷ್ಟೊಂದು ಅಪಾಯಕಾರಿ ಜಾಗಾನಾ.. ಇಲ್ಲಿನ ಜನರ ಬದುಕು ಅಷ್ಟೊಂದು ದುಸ್ತರವಾಗಿದೆಯಾ ಅನ್ನೋದರ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.......