ಹೂ ಬೆಳೆ ಕಾಪಾಡಿಕೊಳ್ಳಲು ನೀರಿನ ಮೂಲ ಹುಡುಕುವ ಪ್ರಯತ್ನದಲ್ಲಿದ್ದ ರೈತನಿಗೆ ಕೃಷಿಹೊಂಡದಲ್ಲಿ ವ್ಯರ್ಥವಾಗಿ ಹೋಗುತ್ತಿದ್ದ ಮಳೆನೀರನ್ನು ಸಂಗ್ರಹಿಸಿ ಬೆಳೆ ಕಾಪಾಡಿಕೊಳ್ಳುವ ಉಪಾಯ ಹೊಳೆಯಿತು. ಪರಿಣಾಮ, ಒಂದೂವರೆ ತಿಂಗಳ ಶ್ರಮದಿಂದ 10 ಮೀಟರ್ ಅಳದ ಬೃಹತ್ ಹೊಂಡ ನಿರ್ಮಿಸಿದ್ರು. 1,400 ಅಡಿ ಬೋರ್ವೆಲ್ಗಳನ್ನು ಕೊರೆದು ಲಕ್ಷಾಂತರ ರೂಪಾಯಿ ವ್ಯರ್ಥ ಮಾಡಿದ್ದ ರೈತನಿಗೆ ಹೊಳೆದ ಹೊಸ ಆಲೋಚನೆ ಇದೀಗ ಮಾದರಿಯಾಗಿದೆ.