ಕರ್ನಾಟಕ

karnataka

'ಮುತ್ತುರಾಜ ಹೆತ್ತ ಮುತ್ತೇ ಎತ್ತ ಹೋದೆಯೋ..' ಹಾಡಿನ ಮೂಲಕ ಪುನೀತ್​ಗೆ 'ಗೀತ ನಮನ'

By

Published : Nov 16, 2021, 8:03 PM IST

ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ 'ಪುನೀತ್​ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೊಂಬತ್ತಿ ಬೆಳಗಿಸುವ ಮೂಲಕ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. Candle ಬೆಳಗಿಸುವ ಮೂಲಕ ಪುನೀತ್​ ರಾಜ್​ಕುಮಾರ್​ ಅವರಿಗೆ 'ದೀಪ ನಮನ' ಸಲ್ಲಿಸಲಾಯಿತು. ಇದೇ ಸಮಯದಲ್ಲಿ ಗೀತೆಯೊಂದರ ಮೂಲಕ 'ಗೀತ ನಮನ' ಸಲ್ಲಿಸಲಾಯಿತು. ಪುನೀತ್​ ರಾಜ್​ಕುಮಾರ್​ ಅಗಲಿಕೆಯ ನೋವಿನಲ್ಲಿ 'ಮುತ್ತುರಾಜ ಹೆತ್ತ ಮುತ್ತೇ ಎತ್ತ ಹೋದೆಯೋ' ಎಂಬ ಹಾಡನ್ನು ಸಾಹಿತಿ ನಾಗೇಂದ್ರ ಪ್ರಸಾದ್​ ರಚಿಸಿ, ಸಂಯೋಜಿಸಿದ್ದಾರೆ. ಇದಕ್ಕೆ ಗಾಯಕ ವಿಜಯ್​ ಪ್ರಕಾಶ್​ ಈ ಹಾಡನ್ನು ಹಾಡಿದ್ದಾರೆ.

ABOUT THE AUTHOR

...view details