ಕರ್ನಾಟಕ

karnataka

ರಾಹುಲ್​ ಗಾಂಧಿ ಕೈಸನ್ನೆ ಸೂಚನೆ.. ಸಿದ್ದರಾಮಯ್ಯರನ್ನು ಅಪ್ಪಿಕೊಂಡ ಡಿಕೆಶಿ: ವಿಡಿಯೋ ನೋಡಿ

By

Published : Aug 4, 2022, 3:41 PM IST

Updated : Feb 3, 2023, 8:25 PM IST

ದಾವಣಗೆರೆ: ಬುಧವಾರ ಬೆಣ್ಣೆ ನಗರಿಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ವೇಳೆ ಕುತೂಹಲಕಾರಿ ಘಟನೆಯೊಂದು ಜರುಗಿದೆ. ಸಿದ್ದರಾಮಯ್ಯರಿಗೆ ಸನ್ಮಾನ ಮಾಡಿ ಬಳಿ ತಮ್ಮ ಆಸನದಲ್ಲಿ ಕೂರಲು ಹೋಗುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಕೈಸನ್ನೆ ಮೂಲಕ ಸಿದ್ದರಾಮಯ್ಯರನ್ನು ತಬ್ಬಿಕೊಳ್ಳುವಂತೆ ರಾಹುಲ್​ಗಾಂಧಿ ಸೂಚಿಸಿದ್ದಾರೆ. ಈ ಸನ್ನೆ ನೋಡಿದ್ದೇ ತಡ, ಶಿವಕುಮಾರ್​ ಅವರು ಮತ್ತೆ ಹಿಂತಿರುಗಿ ಸಿದ್ದರಾಮಯ್ಯರನ್ನು ಅಪ್ಪಿಕೊಂಡು ನಗೆ ಬೀರಿದ್ದಾರೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
Last Updated :Feb 3, 2023, 8:25 PM IST

ABOUT THE AUTHOR

...view details