ಕರ್ನಾಟಕ

karnataka

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಳಿಕ ದೂರು ನೀಡಲು ಹಿಂಜರಿಯುವುದೇಕೆ?

By

Published : Jun 10, 2023, 11:37 AM IST

ಲೈಂಗಿಕ ಕಿರುಕುಳವನ್ನು ಅನುಭವಿಸಿದ ಜನರಿಂದ ಗೌಪ್ಯ ಆನ್‌ಲೈನ್ ಸಮೀಕ್ಷೆಗಳನ್ನು ನಡೆಸಲಾಗಿದೆ. ಈ ವೇಳೆ ಅವರು ನ್ಯಾಯಕ್ಕಾಗಿ ಹೋರಾಡುವ ಸಂಬಂಧ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಲಾಗಿದೆ.

Why hesitate to file a complaint after being sexually assaulted?
Why hesitate to file a complaint after being sexually assaulted?

ಲಂಡನ್​: ಲೈಂಗಿಕ ದೌರ್ಜನ್ಯದ ಬಳಿಕ ನ್ಯಾಯ ಕೇಳುವುದಕ್ಕಿಂತ ಹೆಚ್ಚಾಗಿ ರಕ್ಷಣೆ ಮುಖ್ಯವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಳಿಕ ಹೆಚ್ಚಿನ ಜನರು ದೂರು ನೀಡಲು ನ್ಯಾಯ ಕೇಳಲು ಮುಂದಾಗುವುದಿಲ್ಲ. ಯಾಕೆ ತಕ್ಷಣಕ್ಕೆ ಜನರು ಮುಂದೆ ಬರುವುದಿಲ್ಲ. ಅಥವಾ ತಮಗೆ ಬೇಕಾದ ನ್ಯಾಯದ ವಿರುದ್ಧ ಹೋರಾಡುವುದಿಲ್ಲ ಎಂಬುದರ ಕುರಿತು ಎರಡು ಅಧ್ಯಯನಗಳಲ್ಲಿ ನಡೆಸಲಾಗಿದೆ.

ಬ್ರಿಟನ್​ನ ಎಕ್ಸೆಟೆರ್​ ಯುನಿರ್ವಸಿಟಿ ತ್ತು ಡೆನ್ಮಾರ್ಕ್​ನ ಕೂಪನ್​ಹೆಗನ್​ ಯುನಿವರ್ಸಿಟಿ ಈ ಅಧ್ಯಯನ ನಡೆಸಿದೆ. ಲೈಂಗಿಕ ಕಿರುಕುಳವನ್ನು ಅನುಭವಿಸಿದ ಜನರಿಂದ ಗೌಪ್ಯ ಆನ್‌ಲೈನ್ ಸಮೀಕ್ಷೆಗಳನ್ನು ನಡೆಸಲಾಗಿದೆ. ಈ ವೇಳೆ, ಅವರು ನ್ಯಾಯಕ್ಕಾಗಿ ಹೋರಾಡುವ ಸಂಬಂಧ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಲಾಗಿದೆ.

ಸೈಕಲಾಜಿ ಆಫ್​ ವುಮೆನ್​ನ ತ್ರೈಮಾಸಿಕದಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಇದರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಅಗತ್ಯತೆ ಮತ್ತು ಅವರ ಅಗತ್ಯತೆ ಪೂರೈಸಲು ಅನುಸರಿಸುವ ಇತರ ಕ್ರಮಗಳ ಬಗ್ಗೆ ವರದಿ ಮಾಡಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ಪೊಲೀಸರ ದೂರಿನಂತಹ ಔಪಚಾರಿಕ ಕ್ರಿಯೆಗಿಂತ ರಕ್ಷಣೆ, ನಿಯಂತ್ರಣ ಮತ್ತು ಸಾಮಾಜಿಕ ಬೆಂಬಲ ಅಗತ್ಯವಾಗಿದೆ. ಮತ್ತೆ ಕೆಲವು ಮಂದಿ ಇದಕ್ಕೆ ವ್ಯತಿರಿಕ್ತವಾಗಿದ್ದು, ಲೈಂಗಿಕ ದೌರ್ಜನ್ಯ ಎದುರಿಸಿದಾಗ ಅದರ ವಿರುದ್ಧ ಔಪಚಾರಿಕವಾದ ಬಲವಾದ ಅಗತ್ಯತೆ ಮತ್ತು ನಿರೀಕ್ಷೆ ತೆಗೆದುಕೊಳ್ಳುವುದನ್ನು ನಿರೀಕ್ಷಿಸುತ್ತಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಆ ವ್ಯಕ್ತಿ ಮುಂದೆ ಬಂದು ತಕ್ಷಣಕ್ಕೆ ಈ ಸಂಬಂಧ ಔಪಚಾರಿಕ ವರದಿ ಸಲ್ಲಿಸುವುದು ನಂಬಲಾಗಿದೆ. ಆದರೆ, ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ, ಈ ಸಂಬಂಧ ಔಪಚಾರಿಕ ದೂರಿಗೆ ಮುಂದಾಗುವುದಿಲ್ಲ. ಇದರಲ್ಲಿ ಕೆಲವರು ದೂರು ಸಲ್ಲಿಸಿದರು ಅವರು ಘಟನೆ ನಡೆದ ತಕ್ಷಣಕ್ಕೆ ಬರುವುದಿಲ್ಲ. ಅವರು ತಡವಾಗಿ ಈ ಸಂಬಂಧ ದೂರು ಸಲ್ಲಿಕೆ ಮಾಡುತ್ತಾರೆ ಎಂಬುದು ತಿಳಿದು ಬಂದಿದೆ ಎಂದು ಪ್ರೊ ಮ್ಯಾನುಯಲ್​ ಬರ್ರೆಟೊ ತಿಳಿಸಿದ್ದಾರೆ.

ದೂರು ಸಲ್ಲಿಕೆ ಬಳಿಕ ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ಕಾರ್ಯವಿಧಾನದ ಅಡೆತಡೆಗಳ ಮೇಲೆ ಕೇಂದ್ರೀಕರಿಸುತ್ತಾರೆ, ಆದರೆ ಲೈಂಗಿಕ ಕಿರುಕುಳವನ್ನು ಅನುಭವಿಸಿದ ವ್ಯಕ್ತಿಯ ನೈಜ ಅಗತ್ಯಗಳಿಗೆ ಕಡಿಮೆ ಗಮನ ನೀಡಲಾಗುತ್ತದೆ ಎಂದು ಬರ್ರೆಟೊ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳವನ್ನು ಅನುಭವಿಸಿದವರ ಭಾವನೆಗಳು ಮತ್ತು ಕ್ರಿಯೆಗಳು ಅನುಭವಿಸದವರಿಗಿಂತ ತುಂಬಾ ಭಿನ್ನವಾಗಿರತ್ತದೆ. ದೌರ್ಜನ್ಯವಾದ ಸಂದರ್ಭದಲ್ಲಿ ಜನರು ಏಕೆ ಮುಂದೆ ಬರುವುದಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ, ಅವರಿಗೆ ವೈಯಕ್ತಿಕವಾಗಿ ಸಿಗುವ ಉತ್ತಮ ಕ್ರಿಯೆ ಏನು ಎಂಬುದು ಮುಖ್ಯವಾಗುತ್ತದೆ ಎಂದಿದ್ದಾರೆ.

ಮೊದಲ ಅಧ್ಯಯನದಲ್ಲಿ 415 ಪುರುಷ ಮತ್ತು ಮಹಿಳಾ ಭಾಗಿದಾರರನ್ನು ಒಳಪಡಿಸಲಾಗಿದೆ. ಇದರಲ್ಲಿ 259 ಮಂದಿ ದೌರ್ಜನ್ಯಕ್ಕೆ ಒಳಗಾದರೆ, 156 ಮಂದಿ ಕಾಲ್ಪನಿಕವಾಗಿದೆ. ಯಾವುದೇ ಲಿಂಗತಾರತಮ್ಯವಿಲ್ಲದೇ ಈ ಅಧ್ಯಯನ ನಡೆಸಲಾಗಿದೆ. ಎರಡನೇ ಅಧ್ಯಯನದಲ್ಲಿ ಕೇವಲ 589 ಮಹಿಳೆಯರನ್ನು ಇದರಲ್ಲಿ 301 ಮಂದಿ ದೌರ್ಜನ್ಯಕ್ಕೆ ಒಳಗಾದರೆ, 288 ಮಂದಿ ಕಾಲ್ಪನಿಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಕೂಪನ್​ ಹೇಗನ್​ ಯುನಿರ್ವಸಿಟಿ ಪ್ರೊ ಥಾಮಸ್​ ಮೊರ್ಟೊನ್​ ಹೇಳುವಂತೆ, ಲೈಂಗಿಕ ಕಿರುಕುಳವನ್ನು ಅನುಭವಿಸುವ ಜನರು ಆ ಸಮಯದಲ್ಲಿ ಅವರು ಮುಂದೆ ಬರದಿದ್ದರೆ ಘಟನೆ ಗಂಭೀರವಾಗಿರಲಿಲ್ಲ ಅಥವಾ ಬಹುಶಃ ಸತ್ಯಾಂಶದಿಂದ ಕೂಡಿರುವುದಿಲ್ಲ.

ಲೈಂಗಿಕ ಕಿರುಕುಳವನ್ನು ಅನುಭವಿಸುವವರು ಪ್ರಾಥಮಿಕವಾಗಿ ನ್ಯಾಯಕ್ಕಾಗಿ ಮುಂದಾಗುತ್ತಾರೆ ಎಂಬ ಊಹೆಯಿದೆ. ಆದರೆ ಈ ಸಂಶೋಧನೆಯು ಇತರರು ನಿರೀಕ್ಷಿಸುವುದಕ್ಕಿಂತ ಹೆಚ್ಚು ವಿಸ್ತಾರವಾಗಿದೆ. ದೌರ್ಜನ್ಯಕ್ಕೆ ಒಳಗಾದವರು ಸುರಕ್ಷತೆ, ವೈಯಕ್ತಿಕ ನಿಯಂತ್ರಣ ಮತ್ತು ಜೀವನಕ್ಕಾಗಿ ಅಗತ್ಯಗಳನ್ನು ಒಳಗೊಂಡಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: Child Labour: 10ರಲ್ಲಿ ಒಂದು ಮಗು ಇಂದಿಗೂ ಬಾಲ ಕಾರ್ಮಿಕ ವ್ಯವಸ್ಥೆಗೆ ಬಲಿ

ABOUT THE AUTHOR

...view details