ಕರ್ನಾಟಕ

karnataka

ಸಮಯ ನಿರ್ಬಂಧಿತ ಆಹಾರ ಪದ್ಧತಿ ಅನುಸರಿಸಿ.. ಕ್ಯಾನ್ಸರ್‌ನಂತಹ ಗಂಭೀರ ಖಾಯಿಲೆಯಿಂದ ದೂರವಿರಿ!

By

Published : Jan 23, 2023, 7:17 PM IST

representative image
ಸಾಂದರ್ಭಿಕ ಚಿತ್ರ ()

ಮಧ್ಯಂತರದಲ್ಲಿ ತಿನ್ನುವುದು ದೇಹದ ಸಿರ್ಕಾಡಿಯನ್ ಲಯವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖವಾದ ಜೀನ್‌ಗಳ ಸಕ್ರಿಯಗೊಳಿಸುವಿಕೆಯನ್ನು ಸುಧಾರಿಸುತ್ತದೆ.

ಹೈದರಾಬಾದ್:ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿ ಶಿಸ್ತು ಬಹಳ ಮುಖ್ಯ ಎಂದು ವೈದ್ಯರು ನಿರಂತರವಾಗಿ ಹೇಳುತ್ತಾರೆ. ಇತ್ತೀಚೆಗೆ ಇಲಿಗಳ ಮೇಲಿನ ಪರೀಕ್ಷಾ-ಆಧಾರಿತ ಸಂಶೋಧನೆಯ ಫಲಿತಾಂಶಗಳು ಸಹ ಈ ಸಿದ್ಧಾಂತವನ್ನು ದೃಢಪಡಿಸಿವೆ. ಸಮಯ ನಿರ್ಬಂಧಿತ ಆಹಾರವು ದೇಹದಲ್ಲಿ ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಅಲ್ಲದೇ, ಸಮಯ ನಿರ್ಬಂಧಿತ ಆಹಾರವು ದೇಹದಲ್ಲಿನ ಅನೇಕ ಅಂಗಾಂಶಗಳಲ್ಲಿ ಜೀನ್ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಂಶೋಧನೆಯು ಪೀರ್-ರಿವ್ಯೂಡ್ ಜರ್ನಲ್ 'ಸೆಲ್ ಮೆಟಾಬಾಲಿಸಂ' ನಲ್ಲಿ ಪ್ರಕಟವಾಗಿದೆ.

ಆರೋಗ್ಯ ಸುಧಾರಣೆ:ಸಮಯ ನಿರ್ಬಂಧಿತ ತಿನ್ನುವ (TRE) ಆಹಾರ ಸಂಶೋಧನೆಯಲ್ಲಿ ಇಲಿಗಳು ಕರುಳು, ಹೃದಯ, ಶ್ವಾಸಕೋಶಗಳು, ಯಕೃತ್ತು ಮತ್ತು ಮೆದುಳು ಸೇರಿದಂತೆ 22 ವಿವಿಧ ಅಂಗಾಂಶಗಳಲ್ಲಿ ಜೀನ್ ಚಟುವಟಿಕೆಯಲ್ಲಿ ವ್ಯತ್ಯಾಸವನ್ನು ತೋರಿಸಿದೆ ಎಂದು ಕಂಡು ಹಿಡಿದಿದೆ. ಸಮಯ ನಿರ್ಬಂಧಿತ ಆಹಾರವು ದೀರ್ಘಾಯುಷ್ಯವನ್ನು ಸೃಷ್ಟಿಸುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಅಧ್ಯಯನಗಳು ಪುರಾವೆಗಳನ್ನು ನೀಡಿವೆ.

ಸಮಯ ನಿರ್ಬಂಧಿತ ಆಹಾರವನ್ನು ಅನುಸರಿಸುವುದರಿಂದ ದೇಹದ ನೈಸರ್ಗಿಕ ದೈನಂದಿನ ವಿಶ್ರಾಂತಿ, ಸಕ್ರಿಯಗೊಳಿಸುವಿಕೆ ಮತ್ತು ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡುವ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಇದು ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಸಮಯ ನಿರ್ಬಂಧಿತ ಆಹಾರದ ಪ್ರಯೋಜನಗಳು: ಸಮಯ ನಿರ್ಬಂಧಿತ ಆಹಾರವು "ಮಧ್ಯಂತರ ಉಪವಾಸ"ದ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಜನರು ನಿಗದಿತ ಅವಧಿಯಲ್ಲಿ ತಮಗೆ ಬೇಕಾದುದನ್ನು ತಿನ್ನಬಹುದು. ಆದರೆ, ಅವರು ದಿನದ ಉಳಿದ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಇದಕ್ಕೂ ಮೊದಲು, ಪ್ರಾಣಿಗಳ ಮಾದರಿಗಳು ಮತ್ತು ವಿಷಯಕ್ಕೆ ಸಂಬಂಧಿಸಿದ ಮಾನವ ಮಾದರಿಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಬಹುತೇಕ ಎಲ್ಲವನ್ನೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಚಯಾಪಚಯ ಕ್ರಿಯೆಗೆ ಸಹಾಯ: 2022ರಲ್ಲಿ ಸಮಯನಿರ್ಬಂಧಿತ ಆಹಾರದ ವರದಿಯು ಬೊಜ್ಜು, ಮಧುಮೇಹ, ಹೃದ್ರೋಗ, ನಿದ್ರೆ ಮತ್ತು ಮಾನಸಿಕ ಆರೋಗ್ಯದ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ ಎಂದು ಬಹಿರಂಗಪಡಿಸಿತು. ಈ ಆಹಾರ ಪದ್ದತಿ ಉತ್ತಮ ನಿದ್ರೆ ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ ತೂಕ ಹೆಚ್ಚಾಗುವುದು ಅಥವಾ ಸ್ಥೂಲಕಾಯತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಸಂಶೋಧನೆ ಹೇಳಿದೆ. ಇದು ಹೃದಯ ಮತ್ತು ಕರುಳಿನ ಸಮಸ್ಯೆಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ.

ಕ್ಯಾನ್ಸರ್​ನಂತಹ ರೋಗಗಳ ವಿರುದ್ಧ ಹೋರಾಟ: ಪ್ರತಿಷ್ಠಿತ "ರಿಚರ್ಡ್ ಮತ್ತು ರೀಟಾ ಅಟ್ಕಿನ್ಸನ್ ಚೇರ್" ಹೋಲ್ಡರ್, ಪ್ರೊಫೆಸರ್ ಸಚಿನ್ ಪಾಂಡಾ ಮತ್ತು ಅವರ ತಂಡವು ಆಹಾರ ತಜ್ಞರನ್ನು ಒಳಗೊಂಡಿರುವ ಲಾಸ್ ಏಂಜಲೀಸ್ನ ಲಾ-ಜೊಲ್ಲಾದ ಸಾಲ್ಕ್ ಇನ್ಸ್ಟಿಟ್ಯೂಟ್​​ನಲ್ಲಿ ಇಲಿಗಳ ಮೇಲಿನ ಸಂಶೋಧನೆ ನಡೆಸಿತು. ಸಂಶೋಧನೆಯಲ್ಲಿ, ಸಮಯ ನಿರ್ಬಂಧಿತ ಆಹಾರದ ಆಧಾರದ ಮೇಲೆ ಪೌಷ್ಟಿಕಾಂಶದ ಪ್ರಕ್ರಿಯೆಯು ಕ್ಯಾನ್ಸರ್​ನಂತಹ ರೋಗಗಳ ವಿರುದ್ಧ ಹೋರಾಡುವ ಜೀನ್​​ಗಳನ್ನು ಹೇಗೆ ಸಕ್ರಿಯಗೊಳಿಸುತ್ತದೆ ಎಂಬುದರ ಕುರಿತು ಪ್ರೊಫೆಸರ್ ಪಾಂಡಾ ಬೆಳಕು ಚೆಲ್ಲುತ್ತಾರೆ.

ಇನ್ಸುಲಿನ್ ಪ್ರತಿಕ್ರಿಯೆ ನಿಯಂತ್ರಣ:ಸೇವಿಸುವ ಆಹಾರವು ಹೆಚ್ಚಿನ ಕ್ಯಾಲೋರಿಗಳು ಅಥವಾ ಯಾವುದೇ ರೀತಿಯ ಆಹಾರ ಕ್ರಮವನ್ನು ಲೆಕ್ಕಿಸದೆ ದಿನದ ಯಾವುದೇ ಸಮಯದಲ್ಲಿ ಏನನ್ನೂ ತಿನ್ನುವುದಕ್ಕಿಂತ ಸಮಯದ ನಿರ್ಬಂಧಿತ ಆಹಾರವನ್ನು ಅನುಸರಿಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಸಮಯ ನಿರ್ಬಂಧಿತ ಆಹಾರವು ದೇಹದಲ್ಲಿ ಇನ್ಸುಲಿನ್ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯು ಉಲ್ಲೇಖಿಸುತ್ತದೆ.

ಈ ಆಹಾರ ಪದ್ದತಿ ದೇಹವು ವಿವಿಧ ಪ್ರಕ್ರಿಯೆಗಳನ್ನು ಸಂಘಟಿಸಲು ಅನುವು ಮಾಡಿಕೊಡುತ್ತದೆ ಮತ್ತು ಎರಡು ಊಟಗಳ ನಡುವಿನ ಸಮಯದ ಅಂತರವನ್ನು ಕಡಿಮೆ ಮಾಡುವುದರ ಜೊತೆಗೆ ಅವುಗಳನ್ನು ಸಿಂಕ್ರೊನೈಸ್ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯು ಕಂಡು ಕೊಂಡಿದೆ ಎಂದು ಪ್ರೊಫೆಸರ್ ಪಾಂಡಾ ವಿವರಿಸಿದ್ದಾರೆ.

ಸಚಿನ್ ಪಾಂಡಾ ಪ್ರಕಾರ, "ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಯಸ್ಕರು "ಅನಿಯಮಿತ" ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಇದರಲ್ಲಿ ಅವರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ಆಹಾರ, ತಿಂಡಿಗಳು ಮತ್ತು ಪಾನೀಯಗಳು ಇತ್ಯಾದಿಗಳನ್ನು ಸೇವಿಸುತ್ತಾರೆ. ಅಲ್ಲದೆ, ಹಗಲು ಮತ್ತು ರಾತ್ರಿಯ ವಿವಿಧ ಪಾಳಿಯಲ್ಲಿ ಕೆಲಸ ಮಾಡುವ ಜನರ ಊಟದ ಸಮಯವನ್ನು ನಿಗದಿಪಡಿಸಲಾಗಿಲ್ಲ. ಈ ಕಾರಣದಿಂದಾಗಿ, ಅವರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳಲ್ಲಿ ಸಮಯ ನಿರ್ಬಂಧಿತ ಆಹಾರ ಪದ್ಧತಿಯನ್ನು ಅನುಸರಿಸುವುದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ" ಎಂದು ಹೇಳಿದ್ದಾರೆ.

ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಅಧಿಕ ತೂಕದ ಸಮಸ್ಯೆಗಳಲ್ಲಿ ಅದರ ಪ್ರಯೋಜನಗಳ ಬಗ್ಗೆ ವಿಭಿನ್ನ ಮಾದರಿಗಳೊಂದಿಗೆ ಸಮಯ ನಿರ್ಬಂಧಿತ ಆಹಾರದ ಪ್ರಯೋಜನಗಳ ಕುರಿತು ಪ್ರಸ್ತುತ 150 ಕ್ಕೂ ಹೆಚ್ಚು ಅಧ್ಯಯನಗಳನ್ನು ಮಾಡಲಾಗುತ್ತಿದೆ ಎಂದು ಸಚಿನ್ ಪಾಂಡಾ ವಿವರಿಸಿದ್ದಾರೆ.

ಇದನ್ನೂ ಓದಿ:ಚಳಿಗಾಲದಲ್ಲಿ ಕಾಡುವ ವಿವಿಧ ಚರ್ಮದ ಕಾಯಿಲೆಗಳು.. ಇಲ್ಲಿದೆ ಸಿಂಪಲ್ ಸಲ್ಯೂಷನ್

ABOUT THE AUTHOR

...view details