ಕರ್ನಾಟಕ

karnataka

ಹವಾಮಾನ ಬದಲಾವಣೆ ಜಗತ್ತನ್ನು ಅಂತ್ಯಗೊಳಿಸುವುದಿಲ್ಲ: ಮಸ್ಕ್​

By ETV Bharat Karnataka Team

Published : Sep 11, 2023, 2:30 PM IST

ಹವಾಮಾನ ಬದಲಾವಣೆ ಕುರಿತು ಪರಿಸರ ತಜ್ಞರು ಧ್ವನಿ ಎತ್ತುತ್ತಿದ್ದು, ಇದರಿಂದ ಜಗತ್ತು ಅಂತ್ಯವಾಗಲಿದೆ ಎಂದು ಎಚ್ಚರಿಸುತ್ತಿದ್ದಾರೆ.

Musk Says Climate change will not end the world
Musk Says Climate change will not end the world

ನವದೆಹಲಿ: ಜಾಗತಿಕ ತಾಪಮಾನ ಪರಿಹರಿಸುವ ನಿಟ್ಟಿನಲ್ಲಿ ಜಗತ್ತು ತಮ್ಮ ಪ್ರಯತ್ನವನ್ನು ದುಪ್ಪಟ್ಟುಗೊಳಿಸಬೇಕು ಎಂದು ಜಿ20 ಶೃಂಗಸಭೆಯಲ್ಲಿ ಭಾಗಿಯಾದ ನಾಯಕರು ಒತ್ತಿ ಹೇಳಿದ್ದಾರೆ. ಹೆಚ್ಚಾಗುತ್ತಿರುವ ಹವಾಮಾನ ಬದಲಾವಣೆ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮವನ್ನು ಕೂಡ ನಡೆಸಲಾಯಿತು. ಈ ಬಗ್ಗೆ ಮೈಕ್ರೋಬ್ಲಾಗಿಂಗ್​ ತಾಣ ಎಕ್ಸ್​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಟೆಸ್ಲಾ ಸಿಇಒ ಎಲೋನ್​ ಮಸ್ಕ್​, ಜಾಗತಿಕ ತಾಪಮಾನ ಕುರಿತು ಪ್ರಚಾರ ಮಾಡುತ್ತಿರುವಂತೆ ಹವಾಮಾನ ಬದಲಾವಣೆ ಜಗತ್ತನ್ನು ಅಂತ್ಯಗೊಳಿಸುವುದಿಲ್ಲ ಎಂದಿದ್ದಾರೆ.

ಹವಾಮಾನ ಬದಲಾವಣೆ ಜಗತ್ತನ್ನು ಅಂತ್ಯಗೊಳಿಸುತ್ತದೆ 14 ವರ್ಷದ ಪರಿಸರ ಕಾಳಜಿ ಹೊಂದಿರುವ ವಿದ್ಯಾರ್ಥಿಯ ಮಾತನ್ನು ಹೊಂದಿರುವ ಬೆಂಬಲಿಗರ ಪೋಸ್ಟ್​​ಗೆ ಪ್ರತಿಕ್ರಿಯಿಸಿರುವ ಮಸ್ಕ್,​ ಹವಾಮಾನ ಬದಲಾವಣೆ ಖಂಡಿತವಾಗಿಯೂ ಜಗತ್ತನ್ನು ಅಂತ್ಯಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಆದಾಗ್ಯೂ, ನಮ್ಮ ವಾತಾವರಣ ಮತ್ತು ಸಾಗರಗಳನ್ನು ರಾಸಾಯನಿಕಗೊಳಿಸುವ ಮೂಲಕ ತೃಪ್ತಿ ಪಡಬಾರದು. ಜನರು ಒಟ್ಟಾಗಿ ಹುರಿದುಂಬಿಸಿದರೆ, ಸುಸ್ಥಿರ ಶಕ್ತಿಯ ಸಮಸ್ಯೆಯನ್ನು ಮಾನವೀಯತೆ ಪರಿಹರಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.

ಈ ಮುಂಚೆ ಹವಾಮಾನ ಬದಲಾವಣೆ ಕುರಿತು ಮಾತನಾಡಿದ್ದ ಮಸ್ಕ್​, ಇದರಿಂದ ಕೃಷಿ ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತಿದೆ. ವೈಜ್ಞಾನಿಕ ಮತ್ತು ಕೃಷಿ ಸಮುದಾಯದ ಮೇಲೆ ಇದು ಹೆಚ್ಚು ಪರಿಣಾಮ ಹೊಂದಿದೆ ಎಂದಿದ್ದರು.

ಜೂನ್​ನಲ್ಲಿ ಈ ಸಂಬಂಧ ಪೋಸ್ಟ್​ ಮಾಡಿದ ಅವರು, ಬಿಲಿಯನ್‌ಗಟ್ಟಲೆ ಇಂಗಾಲವನ್ನು ವಾತಾವರಣದ ಕೆಳಗೆ ಕಳುಹಿಸುವುದರಿಂದ ಜಾಗತಿಕ ತಾಪಮಾನದ ಅಪಾಯ ಹೆಚ್ಚಿದೆ. ಸಮಯ ಕಳೆದಂತೆ ಇದೇ ರೀತಿ ನಾವು ಮಾಡುತ್ತಿದ್ದಂತೆ ಪರಿಸರದಲ್ಲಿ ವಾತಾವರಣದ ರಾಸಾಯನಿಕ ಸಂಯೋಜನೆಯು ಸಾಕಷ್ಟು ಬದಲಾಗುತ್ತದೆ ಎಂದು ತಿಳಿಸಿದ್ದರು.

ಭಾರತದ ಅತಿಥ್ಯದಲ್ಲಿ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗಿಯಾದ ದೇಶಗಳು ಹವಾಮಾನ ಬದಲಾವಣೆ ಮತ್ತು ಪರಿಸರ ಬಿಕ್ಕಟ್ಟು ಮತ್ತು ಸವಾಲುಗಳ ಕುರಿತು ತುರ್ತು ಕಾರ್ಯ ನಡೆಸಬೇಕಿದೆ ಎಂದು ಒತ್ತಾಯಿಸಿದ್ದರು. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಸಾಗರ-ಆಧಾರಿತ ಆರ್ಥಿಕತೆಯನ್ನು ನಿರ್ಮಿಸುವುದು ಸೇರಿದಂತೆ ಪ್ರಮುಖ ನಿರ್ಧಾರ ಕೈಗೊಂಡರು.

ಜಿ20 ಶೃಂಗಸಭೆಯಲ್ಲಿ ಭಾಗಿಯಾದ ದೇಶಗಳು ಪ್ಯಾರಿಸ್​ ಒಪ್ಪಂದವನ್ನು ಪುನರ್​ ಉಚ್ಚರಿಸಿದ್ದು, ಜಾಗತಿಕವಾಗಿ ಶೂನ್ಯ ಜಿಎಚ್​ಜಿ ಹೊರ ಸೂಸುವಿಕೆ ಗುರಿ ಸಾಧನೆ, ಯಾರನ್ನು ಹಿಂದೆ ಬಿಡದೆ ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ ಕುರಿತು ಬದ್ಧತೆ ಹೊಂದಿರುವುದಾಗಿ ತಿಳಿಸಿದವು. (ಐಎಎನ್‌ಎಸ್‌)

ಇದನ್ನೂ ಓದಿ: ಜಾಗತಿಕ ತಾಪಮಾನ: ಯುಎಸ್​ ಓಪನ್ ಟೆನಿಸ್​ ಟೂರ್ನಿ ವೇಳೆ ಭಾರತ ಮೂಲದ ವ್ಯಕ್ತಿಯಿಂದ ಪ್ರತಿಭಟನೆ

ABOUT THE AUTHOR

...view details