ಕರ್ನಾಟಕ

karnataka

Lorry - Auto Accident; ಯಾದಗಿರಿಯಲ್ಲಿ ಭೀಕರ ಅಪಘಾತ; ಮಗು ಸೇರಿ ಮೂವರ ದುರ್ಮರಣ

By

Published : Nov 13, 2021, 1:08 PM IST

Updated : Nov 13, 2021, 6:44 PM IST

Accident between lorry and auto in Yadagiri

ಲಾರಿ ಮತ್ತು ಆಟೋ ಪರಸ್ಪರ ಡಿಕ್ಕಿಯಿಂದ ಯಾದಗಿರಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾದಗಿರಿ: ಲಾರಿ ಮತ್ತು ಆಟೋ ಡಿಕ್ಕಿಯಾಗಿ (Lorry and Auto Accident) ಎರಡೂವರೆ ತಿಂಗಳ ಗಂಡು ಮಗು ಸೇರಿದಂತೆ ಮೂವರು ಮೃತಪಟ್ಟಿರುವ (Three People dead) ದಾರುಣ ಘಟನೆ ನಗರದ ಹೊರವಲಯದ ಮುದ್ನಾಳ್​ ಕ್ರಾಸ್​ ಬಳಿ ನಡೆದಿದೆ.

ಯಾದಗಿರಿಯಲ್ಲಿ ನಡೆದ ಭೀಕರ ಅಪಘಾತ

ತಾಲೂಕಿನ ಕಂಚಗಾರಹಳ್ಳಿ ನಿವಾಸಿಗಳಾದ ಲಕ್ಷ್ಮಣ (26), ಜಯರಾಮ್ ಚವ್ಹಾಣ್ (45), ಕೃಷ್ಣ ಸಂತೋಷ (2.5) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶುಕ್ರವಾರ ಮಧ್ಯರಾತ್ರಿ ವಾಡಿ ಕಡೆಯಿಂದ ಆಗಮಿಸುತ್ತಿದ್ದ ಲಾರಿ ಮತ್ತು ಯಾದಗಿರಿಯಿಂದ ಕಂಚಗಾರಹಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೋ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ದೃಶ್ಯ

ಮುಂಬೈ ರೈಲಿನಿಂದ ಇಳಿದು ಊರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ಬಳಿಕ ಲಾರಿ ಚಾಲಕ (lorry driver) ಪರಾರಿಯಾಗಿದ್ದಾರೆ. ಸ್ಥಳಕ್ಕೆ ಯಾದಗಿರಿ (Yadagiri) ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated :Nov 13, 2021, 6:44 PM IST

ABOUT THE AUTHOR

...view details