ಕರ್ನಾಟಕ

karnataka

ವೀಕೆಂಡ್ ಕರ್ಫ್ಯೂ ನಿರ್ಲಕ್ಷ್ಯ​: ಉಡುಪಿಯಲ್ಲಿ ಬೀಚ್​ಗಿಳಿದು ಪ್ರವಾಸಿಗರ ಮೋಜು

By

Published : Sep 5, 2021, 7:28 PM IST

ಮಲ್ಪೆ ಬೀಚ್​ನಿಂದ ಕೊಂಚ ದೂರದಲ್ಲಿ ಅಪಾಯಕಾರಿ ಎನಿಸುವ ಜಾಗದಲ್ಲಿ ಜನರು ನೀರಿಗಿಳಿಯುತ್ತಿದ್ದಾರೆ. ಅಪಾಯ ಲೆಕ್ಕಿಸದೆ ನೀರಿಗಿಳಿಯುವ ಜನರನ್ನು ಕಂಡ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ವಾಪಸ್ ಕಳುಹಿಸುತ್ತಿದ್ದಾರೆ.

tourist-enjoyed-in-malpe-beach-at-mangalore
ಬೀಚ್​ಗಿಳಿದು ಆನಂದಿಸುತ್ತಿರೋ ಪ್ರವಾಸಿಗರು..

ಉಡುಪಿ:ಕೊರೊನಾ ಪಾಸಿಟಿವ್ ಕೇಸು​ಗಳ ಸಂಖ್ಯೆಯನ್ನು ಹತೋಟಿಗೆ ತರಲು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಹೀಗಿದ್ದರೂ ಹೊರಜಿಲ್ಲೆಯ ಹಾಗೂ ಹೊರರಾಜ್ಯದ ಪ್ರವಾಸಿಗರು ಈ ನಿಯಮವನ್ನು ಪಾಲಿಸುತ್ತಿಲ್ಲ. ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಅವಕಾಶ ಇಲ್ಲ ಎಂದು ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಇದ್ದರೂ ನೂರಾರು ಜನರು ಮಲ್ಪೆ ಬೀಚ್​ಗೆ ಇಳಿದಿದ್ದಾರೆ.

ಬೀಚ್​ನಿಂದ ಕೊಂಚ ದೂರದಲ್ಲಿ ಅಪಾಯಕಾರಿ ಎನಿಸುವ ಜಾಗದಲ್ಲಿ ಜನರು ನೀರಿಗೆ ಇಳಿಯುತ್ತಿದ್ದಾರೆ. ಇಂತವರನ್ನು ಕಂಡ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಪಸ್ ಕಳುಹಿಸುತ್ತಿದ್ದಾರೆ.

ವಾರಾಂತ್ಯದಲ್ಲಿ ಬೀಚ್ ಆಸುಪಾಸಿನಲ್ಲಿ ಮೀನುಗಾರಿಕಾ ರಸ್ತೆಯಲ್ಲಿ ಜನ ಜಮಾಯಿಸಕೂಡದು ಎಂದು ತಿಳಿಸುವ ಹೈವೇ ಪೆಟ್ರೋಲ್ ಪೊಲೀಸರು ಹೆಚ್ಚುವರಿ ಗಸ್ತು ತಿರುಗುತ್ತಿದ್ದಾರೆ.

ಕಬಡ್ಡಿ ಕೋರ್ಟ್ ಆದ ಉಡುಪಿ ಖಾಸಗಿ ಬಸ್ ನಿಲ್ದಾಣ

ವಾರಾಂತ್ಯದ ಕೊರೊನಾ ಕರ್ಫ್ಯೂನಿಂದಾಗಿ ಬಿಕೋ ಎನ್ನುತ್ತಿದ್ದ ಬಸ್‌ನಿಲ್ದಾಣ ಕಬಡ್ಡಿ ಕೋರ್ಟ್ ಆಗಿ ಮಾರ್ಪಟ್ಟಿತು. ಪ್ರಯಾಣಿಕರಿಲ್ಲದ ಕಾರಣ ಬಸ್​ ಚಾಲಕರು ಹಾಗೂ ನಿರ್ವಾಹಕರು ಆಟವಾಡಿ ಎಂಜಾಯ್ ಮಾಡಿದರು.

ಇದನ್ನೂ ಓದಿ:ಕೆಲವರಿಗೆ ದೊಡ್ಡ ಸಮಾಜದ ನಾಯಕರಾಗಬೇಕೆಂಬ ಆಸೆ ಇರುತ್ತೆ.. ಎಂಬಿಪಿ ವಿರುದ್ಧ ಸಚಿವ ಸಿಸಿಪಿ ವ್ಯಂಗ್ಯ

ABOUT THE AUTHOR

...view details