ಕರ್ನಾಟಕ

karnataka

ರಾಯಚೂರಿನಲ್ಲಿ ಪಿಎಫ್​ಐ ಮುಖಂಡರು ಪೊಲೀಸ್ ವಶ

By

Published : Sep 27, 2022, 9:56 AM IST

ಬಿಸಿಲೂರು ರಾಯಚೂರಿಗೂ ಶಂಕಿತ ಉಗ್ರರ ನಂಟು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

State police raid on PFI SDPI workers in Raichur  PFI SDPI workers in Raichur  police raid on PFI  Karnataka police raid on PFI  Police raid on PFI in Karnataka  ರಾಯಚೂರಿನಲ್ಲೂ ಪೊಲೀಸರು ದಾಳಿ  ಪಿಎಫ್​ಐ ಮುಖಂಡರ ವಶ  ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ  ರಾಯಚೂರಿಗೂ ಶಂಕಿತ ಉಗ್ರರ ನಂಟು  ಪಿಎಫ್​ಐ ಮತ್ತು ಎಸ್​ಡಿಪಿಐ ಮುಖಂಡರ ಮನೆ ಹಾಗೂ ಕಚೇರಿ ದಾಳಿ  ತಹಸೀಲ್ ಕಚೇರಿಯಲ್ಲಿ ವಿಚಾರಣೆ
ಬಿಸಿಲೂರು ರಾಯಚೂರಿನಲ್ಲೂ ಪೊಲೀಸರು ದಾಳಿ

ರಾಯಚೂರು:ಜಿಲ್ಲೆಯಲ್ಲಿ ಪೊಲೀಸರು ಪಿಎಫ್​ಐ ಮತ್ತು ಎಸ್​ಡಿಪಿಐ ಮುಖಂಡರ ಮನೆ ಹಾಗೂ ಕಚೇರಿ ದಾಳಿ ನಡೆಸಿದ್ದಾರೆ. ದಾಳಿ ಭಾಗವಾಗಿ ಪಿಎಫ್​ಐ ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಿಎಫ್​ಐ ಮುಖಂಡರು ಪೊಲೀಸರ ವಶ

ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಪಿಎಫ್‌ಐ ಸಂಘಟನೆ ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಹಾಗೂ ಕಾರ್ಯದರ್ಶಿ ಆಸೀಂ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ರಾಯಚೂರು ಡಿವೈಎಸ್​ಪಿ ವೆಂಕಟೇಶ ಉಗಿಬಂಡಿ ನೇತೃತ್ವದ ತಂಡದಿಂದ ದಾಳಿ ನಡೆದಿದ್ದು, ಪಿಎಫ್​ಐ ಕಾರ್ಯಕರ್ತರನ್ನು ನಗರದ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಪಿಎಫ್​ಐ ಮುಖಂಡರು ಪೊಲೀಸರ ವಶ

ರಾಜ್ಯದಲ್ಲಿ ಇತ್ತೀಚೆಗೆ ಶಿವಮೊಗ್ಗ ಹಾಗೂ ಮಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಉಗ್ರರ ನಂಟು ಹೊಂದಿದ್ದ ಆರೋಪದ ಮೇಲೆ ಎನ್‌ಐಎ ತಂಡ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಅದರ ಬೆನ್ನಲ್ಲೇ ಇಂದು ಪೊಲೀಸರು ರಾಜ್ಯಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ಓದಿ:ಮಂಗಳೂರಿನಲ್ಲೂ ಪೊಲೀಸರ ಕಾರ್ಯಾಚರಣೆ.. ಪಿಎಫ್ಐ ಜಿಲ್ಲಾಧ್ಯಕ್ಷ ಸೇರಿ 14ಕ್ಕೂ ಹೆಚ್ಚು ಮುಖಂಡರು ವಶಕ್ಕೆ

ABOUT THE AUTHOR

...view details